Ad Widget

ಸುಳ್ಯ ಜ್ಯೋತಿ ವೃತ್ತದ ಬಳಿ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್ ಸವಾರನಿಗೆ ಗಾಯ




ಸುಳ್ಯ ಜ್ಯೋತಿ ವೃತ್ತದ ಬಳಿ ಕೆಲ ದಿನಗಳ ಹಿಂದೆ ಮುಂಜಾನೆ ಸುಮಾರು ನಾಲ್ಕು ಮೂವತ್ತರ ವೇಳೆಗೆ  ಮೈಸೂರಿನಿಂದ ಮಂಗಳೂರು ಮತ್ತು ಉಡುಪಿಗೆ ನಾಲ್ಕು ಬೈಕ್ ಗಳಲ್ಲಿ ಎಂಟು ಜನರು ಬರುತ್ತಿದ್ದು ಈ ಸಂದರ್ಭದಲ್ಲಿ ಸುಳ್ಯದ ಜ್ಯೋತಿ ವೃತ್ತದ ಬಳಿ ತಲುಪುತ್ತಿದ್ದಂತೆ ನಾಯಿ ಅಡ್ಡಬಂದು ಬೈಕ್ ಸ್ಕಿಡ್ ಆಗಿ ಸವಾರರು ಇಬ್ಬರಿಗೆ ಗಾಯವಾಗಿ ಸುಳ್ಯದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮೈಸೂರಿಗೆ ತೆರಳಿದ ಘಟನೆ ವರದಿಯಾಗಿದೆ.




ಬೈಕ್ ಸವಾರರು ಮೈಸೂರು ಮೂಲದ ನವಾಝ್ ಅಹಮ್ಮದ್ ಓಡಿಸುತ್ತಿದ್ದ ಬೈಕ್ ನಲ್ಲಿ ಹಿಂಬದಿ ಸವಾರನಾಗಿ ಕುಳಿತಿದ್ದ ಸೈಯದ್ ಕೋನಿನ್ ಎಂಬುವವರು ರಸ್ತೆಗೆ ಬಿದ್ದು ಗಾಯಗೊಂಡರು ಇದನ್ನು ರಿಕ್ಷಾದಲ್ಲಿ ಮುಂಜಾನೆ ತೆರಳುತ್ತಿದ್ದ ಅಚ್ಚು ಪ್ರಗತಿಯ ಚಾಲಕ ಮಾಲಕರು ಗಮನಿಸಿ ರಿಕ್ಷಾದಲ್ಲಿ ಕುಳ್ಳಿರಿಸಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರು ಬಳಿಕ ಇಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!