ಸುಳ್ಯ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಮಿತ್ರ ಬಳಗ ‘ಜಾಗೃತಿ ಸುಳ್ಯ’ ಇದರ ವತಿಯಿಂದ ಮಾ.01 ರಂದು ಐವರ್ನಾಡು ಗ್ರಾಮದ ಬೇಂಗಮಲೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಅಭಿಯಾನದ ಅಂಗವಾಗಿ ಬೇಂಗಮಲೆ ಬಸ್ಸು ತಂಗುದಾಣ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ‘ಸಾಮಾಜಿಕ ಜವಾಬ್ದಾರಿಯ ಅರಿವು’ ಎಂಬ ಧ್ಯೇಯದೊಂದಿಗೆ ‘ಜಾಗೃತಿ ಸುಳ್ಯ’ದ ಸದಸ್ಯರು ತಮ್ಮ ರಜಾ ಅವಧಿಯ ಒಂದು ದಿನವನ್ನು ಅರ್ಥಪೂರ್ಣವಾದ ರೀತಿಯಲ್ಲಿ ವಿನಿಯೋಗಿಸಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಯಿತು.
- Thursday
- May 16th, 2024