Ad Widget

ಫೆ.28: ಎಡಮಂಗಲದಲ್ಲಿ ಅಕ್ಯುಪ್ರೆಶರ್ ಚಿಕಿತ್ಸೆ

ಎಡಮಂಗಲದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಫೆಬ್ರವರಿ 28 ರಿಂದ   ಅಕ್ಯುಪ್ರೆಶರ್ ಚಿಕಿತ್ಸೆ ಆಯೋಜನೆಗೊಂಡಿದೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ, ಹಾಲು ಉತ್ಪಾದಕರ ಸಹಕಾರಿ ಸಂಘ ಎಡಮಂಗಲ ಮತ್ತು ಗ್ರಾಮ ಪಂಚಾಯತ್ ಎಡಮಂಗಲ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಫೆಬ್ರವರಿ 28ರಿಂದ ಮಾರ್ಚ್ 05 ರ ವರೆಗೆ  ಅಕ್ಯುಪ್ರೆಶರ್ ಚಿಕಿತ್ಸೆ ನಡೆಯಲಿದೆ.ಶಿವಮೊಗ್ಗದ ಚಂದನ್. ಜಿ....

ರಾಜ್ಯ ಮುಕ್ತ ವಿ.ವಿ. ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ  ಗೀತಾ ಗುಡ್ಡೆಮನೆ ನಾಮ ನಿರ್ದೇಶನ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ರಾಷ್ಟ್ರೀಯ ಕ್ರೀಡಾಪಟು, ಸುಳ್ಯದ ಗೀತಾ ಗುಡ್ಡೆಮನೆ ಅವರನ್ನು ಕರ್ನಾಟಕ ಸರಕಾರ ನೇಮಕ ಮಾಡಿದೆ.ಗೀತಾ ಅವರ ಅಕಾಡೆಮಿಕ್ ಸಾಧನೆ ಮತ್ತು ಕ್ರೀಡಾ ಸಾಧನೆಯನ್ನು ಪರಿಗಣಿಸಿ ಈ ನೇಮಕ ಮಾಡಲಾಗಿದೆ.ಕಂದಡ್ಕದ ಗುಡ್ಡೆಮನೆ ದಿ.ಆನಂದ ಗೌಡ  ಮತ್ತು ಶ್ರೀಮತಿ ಜಯ ದಂಪತಿಯ ಪುತ್ರಿಯಾದ ಗೀತಾ ಅವರು ಪ್ರಸ್ತುತ ಮೈಸೂರು...
Ad Widget

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿ ಗುಣವತಿ ಕೊಲ್ಲಂತಡ್ಕ, ಕಾರ್ಯದರ್ಶಿಯಾಗಿ ಜಾಹ್ನವಿ ಕಾಂಚೋಡು

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳನ್ನು ಪ್ರಕಟಿಸಲಾಗಿದ್ದು ಸುಳ್ಯದ ಇಬ್ಬರು ಸ್ಥಾನ ಪಡೆದಿದ್ದಾರೆ.ಉಪಾಧ್ಯಕ್ಷೆಯಾಗಿ ತಾ.ಪಂ. ಅಧ್ಯಕ್ಷೆ ಮಾಜಿ ಗುಣವತಿ ಕೊಲ್ಲಂತಡ್ಕ ಹಾಗೂ ಕಾರ್ಯದರ್ಶಿಯಾಗಿ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ನೇಮಕಗೊಂಡಿದ್ದಾರೆ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇಮಕ ಮಾಡಿರುತ್ತಾರೆ.

ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಪಡೆದ ಕೊಲ್ಲಮೊಗ್ರದ ಮೀನಾಕ್ಷಿ ಹಾಗೂ ವನಿತಾ

ಕೊಲ್ಲಮೊಗ್ರದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಒದಗಿಬಂದಿದ್ದು ವಿಮಾನವೇರುವ ಸಂಭ್ರಮದಲ್ಲಿದ್ದಾರೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ "ಸಂಜೀವಿನೀ"ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ...

ರೈತರ ಪರ ಸಾಲ ಮನ್ನಾ ಬಾಕಿಯ ಕುರಿತು ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ಗೆ ದೂರು

೨೦೧೮ರಲ್ಲಿ ಆಗಿನ ಕರ್ನಾಟಕ ಸರಕಾರವು ರೈತರ ಸಂಕಷ್ಟ ಪರಿಹರಿಸಲು ರೈತರು ಸಹಕಾರಿ ಸಂಘಗಳಿAದ ಪಡೆದ ಸಾಲಗಳಲ್ಲಿ ರೂಪಾಯಿ ೧ ಲಕ್ಷದವರೆಗಿನ ಮೊಬಲಗನ್ನು ಮನ್ನಾ ಮಾಡಿ ಆದೇಶ ನೀಡಿತು. ಸಾಲವಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ಈ ಕುರಿತು ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಇದನ್ನು ನಂಬಿ ಸರಕಾರ ಸೂಚಿಸಿದ ಅರ್ಹತಾ ಪಟ್ಟಿಯಲ್ಲಿ ಬರುವ ರೈತರಿಂದ ಒತ್ತಾಯಿಸಿ ಅರ್ಜಿಗಳನ್ನು...

ವಿಕ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನವೀನ್ ಚಾತುಬಾಯಿ

ವಿಜಯ ಕರ್ನಾಟಕ ಪತ್ರಿಕೆ ಕೊಡ ಮಾಡುವ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿಯು  ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ. ನವೀನ್ ಚಾತುಬಾಯಿ ಅವರಿಗೆ ಲಭಿಸಿದೆ. ಫೆ. ೨೫ ರಂದು ಬಂಟ್ವಾಳದ ಒಡಿಯೂರಿನ ಜ್ಞಾನ ಮಂದಿರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ನವೀನ್ ಚಾತುಬಾಯಿಯವರು ಪ್ರಶಸ್ತಿ ಸ್ವೀಕರಿಸಿದರು.ನವೀನ್ ಚಾತುಬಾಯಿಯವರು ಐವರ್ನಾಡು ಮಾಜಿ ಗ್ರಾ.ಪಂ. ಸದಸ್ಯರಾಗಿ, ಸುಳ್ಯದ ಮಹಶೀರ್...

ಸುಳ್ಯ: ಅಕ್ರಮ ಗೋ ಸಾಗಾಟ ಪ್ರಕರಣ ಆರೋಪಿ ಬಂಧನ

ಸುಳ್ಯ ಜ್ಯೋತಿ ಸರ್ಕಲ್ ಬಳಿ ಫೆ.೨೫ರಂದು ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ತಡೆದು ನಿಲ್ಲಿಸಿದ್ದರು. ಅದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ  ಓರ್ವನನ್ನು ಬಂಧಿಸಲಾಗಿದ್ದು, ಜಾನುವಾರು ಸಹಿತ ವಾಹನ ವಶಪಡಿಸಿಕೊಳ್ಳಲಾಗಿದೆ.ಸುಳ್ಯ ಎಸ್.ಐ. ಈರಯ್ಯ ದೂಂತೂರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆರೋಪಿ...

ಅನೀಶ್ ಕಲ್ಚಾರು ಇನ್ ಸ್ಪೈಯರ್ ಅವಾರ್ಡ್ ಆಯ್ಕೆ

ಪಂಬೆತ್ತಾಡಿ ಸ.ಹಿ.ಪ್ರಾ.ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಅನೀಶ್ ಕಲ್ಚಾರು ಇನ್ ಸ್ಪೈಯರ್ ಅವಾರ್ಡ್ ಆಯ್ಕೆಯಾಗಿದ್ದಾರೆ.ಅನೀಶ್ ಕಲ್ಚಾರು ವಿದ್ಯುತ್ ಶಕ್ತಿ ಉತ್ಪಾದಕ ಎಂಬ ವಿಜ್ಞಾನ ಮಾದರಿ ತಯಾರಿಸಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೊಡಮಾಡುವ ಇನ್ ಸ್ಪೈಯರ್ ಆವಾರ್ಡ್ ಆಯ್ಕೆಯಾಗಿದ್ದಾರೆ.ವಿಜ್ಞಾನ ಶಿಕ್ಷಕಿ ಶ್ರೀಮತಿ ಭವ್ಯ ಬಿ ಮಾರ್ಗದರ್ಶನ ನೀಡಿದ್ದಾರೆ. ಇವರು ಸತ್ಯಶಂಕರ ಕಲ್ಚಾರು ಹಾಗೂ...

ಕಲ್ಮಡ್ಕ : ವಿಜೃಂಭಣೆಯಿಂದ ನಡೆದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ

https://www.youtube.com/live/AJaadiivPWY?si=mmvrOpvwHpBhxM1h ಕಲ್ಮಡ್ಕ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. 25 ಮತ್ತು ಫೆ.26 ರಂದು ನಡೆಯಿತು.ಫೆ.25 ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ನಂತರ ಮೇಲೇರಿಗೆ ಕೊಳ್ಳಿ ಜೋಡಣೆ ಆರಂಭವಾಯಿತು. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ರಾತ್ರಿ ಮೇಲೇರಿಗೆ ಅಗ್ನಿ...

ಸುಳ್ಯ;  ರಾಮ ಮಂದಿರದ ಬ್ರಹ್ಮಕಲಶೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ಸುಳ್ಯ ನಗರದ ಶ್ರೀ ರಾಮ ಪೇಟೆಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವವು ನಡೆಯಲಿದೆ. ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.ಇಂದು ಪ್ರಾತ:ಕಾಲ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಹಸಿರುವಾಣಿ ಮೆರವಣಿಗೆ ಸಾಗಿ ಬರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಾಗಿ ದಾಸ...
Loading posts...

All posts loaded

No more posts

error: Content is protected !!