Ad Widget

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಹರಿಣಾಕ್ಷಿ ಶಿವಕುಮಾರ ವಲ್ಪಾರೆ ಪ್ರಥಮ

ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹರಿಣಾಕ್ಷಿ ಶಿವಕುಮಾರ ವಲ್ಪಾರೆ ನಡುಗಲ್ಲು 1500, 5000, 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಪಡೆದಿದ್ದಾರೆ. ಇವರು ದೇವ ದಿ. ಶೀನಪ್ಪ ಗೌಡ ಪಾಲೆಪ್ಪಾಡಿ ಹಾಗೂ ಶ್ರೀಮತಿ ಪದ್ಮಾವತಿ ಯವರ ಪುತ್ರಿ.

ಕಲಾ ಚೈತನ್ಯ ಪ್ರಶಸ್ತಿ ಗೆ ಸುಳ್ಯದ ಅವನಿ ಎಂ ಎಸ್ ಆಯ್ಕೆ

ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇವರು ಕೊಡ ಮಾಡುವ ಕಲಾ ಚೈತನ್ಯ ಪ್ರಶಸ್ತಿ ಗೆ ಅವನಿ ಎಂ ಎಸ್ ಸುಳ್ಯ ಆಯ್ಕೆ ಆಗಿದ್ದಾರೆ. ಈ ಸುಳ್ಯ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ. ಸುಳ್ಯದ ಕಸಬಾ ಗ್ರಾಮದ ನೀರಬಿದಿರೆ ನಿವಾಸಿ ಮೋಂಟಡ್ಕ ಶಶಿಧರ ಎಂ.ಜೆ. ಹಾಗೂ ರೇಶ್ಮಾ ದಂಪತಿಗಳ...
Ad Widget

ದೇಶ ಸೇವೆ , ಪಕ್ಷ ಸಂಘಟನೆ , ಸಮಾಜಸೇವೆ ಮಾಡುತ್ತಿರುವ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗುರುತಿಸಿದೆ – ನೂತನ ಅಧ್ಯಕ್ಷ ವೆಂಕಟ್ ವಳಲಂಬೆ

ದೇಶದ ಸೇವೆ ಮತ್ತು ಸಮಾಜ ಸೇವೆ ಮಾಡುತ್ತಿರುವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಹಿರಿಯರು ಸೂಚಿಸಿದ ದಾರಿಯಲ್ಲಿ ಸಾಗುತ್ತಾ ಪಕ್ಷ ಸಂಘಟನೆ ಮತ್ತು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸಗಳನ್ನು ಬಿಜೆಪಿ ಪಕ್ಷದಲ್ಲಿ ಮಾತ್ರ ನೋಡಬಹುದಾಗಿದೆ ಅಲ್ಲದೆ ಮುಂದಿನ ದಿನಗಳಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಸುಳ್ಯ ಮಂಡಲದಲ್ಲಿ ಕೂಡ ಮುಖ್ಯ ಭೂಮಿಕೆಗೆ ತರಲಾಗುವುದು. ಅಲ್ಲದೇ ಜಾತಿ , ಹಣಬಲ...

ಸಂಪಾಜೆ ಗ್ರಾ.ಪಂ.ಗ್ರಂಥಾಲಯಕ್ಕೆ ವಿವಿಧ ಕೊಡುಗೆಗಳ ಉದ್ಘಾಟನೆ ಕಾರ್ಯಕ್ರಮ

ತಾಲೂಕು ಪಂಚಾಯತ್ ವತಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಲಾಯಿತು.೧ ಕಂಪ್ಯೂಟರ್, ೨ ಲ್ಯಾಪ್ಟಾಪ್, ಮೊಬೈಲ್, ಟ್ಯಾಬ್, ಕವಾಟು, ೧೩ ಚಯರ್ ಉದ್ಘಾಟನೆ ಕಾರ್ಯಕ್ರಮ ಗ್ರಂಥಾಲಯದಲ್ಲಿ ನಡೆಯಿತು.ಪಂಚಾಯತ್ ಗ್ರಾಮ ಅಧ್ಯಕ್ಷೆ ಸುಮತಿ ಶಕ್ತಿವೇಲು ಲ್ಯಾಪ್ ಟಾಪ್ ಉದ್ಘಾಟನೆಯನ್ನು ನೆರವೇರಿಸಿದರು. ಕಂಪ್ಯೂಟರ್ ಗೆ ಪಂಚಾಯತ್ ಅಭಿವೃದ್ಧಿ ಅದಿಕಾರಿ ಉದ್ಘಾಟನೆ ಮಾಡಿ ತರಿಸುವಲ್ಲಿ ಪ್ರಯತ್ನ...

ಸುಳ್ಯ ಎನ್ನೆoಪಿಯುಸಿಯ ಮಾದೇಶ್ ಬಿ.ಪಿ. ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗಿ

ಜನವರಿ 24ರಿಂದ 27ರ ತನಕ ಆದಿ ಚುಂಚನಗಿರಿ ಕಾಲೇಜು ಮಂಡ್ಯ ಇಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾದೇಶ್ ಬಿ ಪಿ ಕರ್ನಾಟಕ ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾನೆ.ಸಾಧಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ,ಪ್ರಾ oಶುಪಾಲರು,ಬೋಧಕ ಬೋಧಕೇತರ...

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಆಯ್ಕೆ , ಮಂಡಲದ ಪದಾಧಿಕಾರಿಗಳು ಜಿಲ್ಲಾ ಸಮಿತಿಗೆ ನೇಮಕ

ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಘೋಷಿಸಿದ್ದಾರೆ. ಹರೀಶ್ ಕಂಜಿಪಿಲಿಯವರು ಪ್ರಸ್ತುತ ಅಧ್ಯಕ್ಷರಾಗಿದ್ದು, ಇವರ ನೇಮಕಕ್ಕೆ ಮೊದಲು ವೆಂಕಟ್ ವಳಲಂಬೆಯವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಇದೀಗ ಎರಡನೇ ಬಾರಿಗೆ ಇವರನ್ನು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಈ ಹಿಂದೆ 2015 ರಿಂದ 2020 ರವರೆಗೆ ಅಧ್ಯಕ್ಷರಾಗಿ...

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ನೂತನ ಕೊಠಡಿಗಳ ಉದ್ಘಾಟನೆ.

ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ, ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಜಾಲ್ಸೂರು ಸುಳ್ಯ ತಾಲೂಕು ದ.ಕ. ಇದರ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ನೂತನ ಕೊಠಡಿಗಳ ಉದ್ಘಾಟನೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ನೆರವೇರಿಸಿದರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ತಿರುಮಲೇಶ್ಚರಿ...

ಇಳಿಜಾರಿನಲ್ಲಿ ಕಾರು ಬ್ರೇಕ್ ಫೈಲ್ ಮಹಿಳೆ ಮತ್ತು ಗೋಡೆಗೆ ಗುದ್ದಿದ ಕಾರು.

ಸುಳ್ಯ ರಥಬೀದಿಯ ಬಳಿಯಲ್ಲಿ ಕಾರು ಬ್ರೇಕ್ ವೈಫಲ್ಯಗೊಂಡು ಹಿಮ್ಮುಖವಾಗಿ ಚಲಿಸಿ ಮಹಿಳೆ ಮತ್ತು ಗೋಡೆಗೆ ಗುದ್ದಿದ ಘಟನೆ ಇದೀಗ ವರದಿಯಾಗಿದೆ. ಕೆರೆಮೂಲೆ ರಸ್ತೆಯಿಂದ ರಥಬೀದಿ ಸಂಪರ್ಕಿಸುವ ರಸ್ತೆಯಲ್ಲಿ ವಿನಾಯಕ್ ಕಾಂಪ್ಲೆಕ್ಸ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಇದೀಗ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಅಟೋ ರಿಕ್ಷದ ಮೂಲಕ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ತಳಿದುಬಂದಿದೆ.

ಪಂಜ :  ಲಯನ್ಸ್ ಕ್ಲಬ್ ವತಿಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ

ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪಂಜ ಪರಿಸರದ ಪಲ್ಲೋಡಿ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಕಡುಬಡತನದಲ್ಲಿರುವ ನಿವಾಸಿಗಳಿಗೆ ಕ್ಲಬ್ ವತಿಯಿಂದ ಅಕ್ಕಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಕುಲು ಕಲಾ ರಂಗಾ, {ರಿ } ಪಲ್ಲೋಡಿ ಇದರ ಪ್ರಾಯೋಜಕತ್ವದಲ್ಲಿ ಅಧ್ಯಕ್ಷ ಬಾಲಕೃಷ್ಣ ಗೌಡ ಪೂರ್ವ ಅಧ್ಯಕ್ಷ ಪ್ರಕಾಶ್ ಜಾಕೆ ಅತಿಥಿಗಳಾಗಿ ಉಪಸ್ಥಿತರಿದ್ದು ಅಕ್ಕಿಯನ್ನು...

ವಳಲಂಬೆ ಜಾತ್ರೋತ್ಸವ ಸಂಪನ್ನ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವವು ಸಂಪನ್ನಗೊಂಡಿತು. ಫೆ. ೧ರಂದು ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ ನವಕ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಚೆಂಡೆವಾದನ ನಡೆಯಿತು. ರಾತ್ರಿ ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ,...
Loading posts...

All posts loaded

No more posts

error: Content is protected !!