Ad Widget

ಚಂದ್ರಶೇಖರ ಬಿಳಿನೆಲೆ , ಡಾ. ಅನುರಾಧಾ ಕುರುಂಜಿ ದಂಪತಿಗಳಿಗೆ “ವಿಶ್ವ ಜ್ಞಾನಶ್ರೀ “ ಪುರಸ್ಕಾರ

ಸುಳ್ಯದಲ್ಲಿ ವ್ಯಕ್ತಿತ್ವ  ವಿಕಸನ ತರಬೇತುದಾರರು ಹಾಗೂ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ   ಚಂದ್ರಶೇಖರ ಬಿಳಿನೆಲೆ ಹಾಗೂ ಡಾ. ಅನುರಾಧಾ ಕುರುಂಜಿ ದಂಪತಿಗಳಿಗೆ ಬೆಳಗಾವಿಯ ಕಸ್ತೂರಿ ಸಿರಿಕನ್ನಡ ವೇದಿಕೆ  ಕೊಡ ಮಾಡುವ ವಿಶ್ವ ಜ್ಞಾನಶ್ರೀ ಪುರಸ್ಕಾರ ಲಭಿಸಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಈ...

ಸುಳ್ಯದ ಪ್ರಥಮ ಕೃಷಿ ಪರಿಕರದ ಮಳಿಗೆ ಭಾರತ್ ಆಗ್ರೋ 50 ವರ್ಷದ ಸಂಭ್ರಮ

ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ, ರೊ| ರಾಮಚಂದ್ರ ಪಿ. ಇವರ ಮಾಲಕತ್ವದಲ್ಲಿ 1974 ರಲ್ಲಿ ಸ್ಥಾಪಿತವಾದ ಭಾರತ್ ಆಗ್ರೋ ಸರ್ವಿಸಸ್ ಮತ್ತು ಸಪ್ಲೆಸ್ ಸಂಸ್ಥೆಗೆ ಐವತ್ತು ವರ್ಷ ತುಂಬಿದ ಪ್ರಯುಕ್ತ ಮಾರ್ಚ್ 07, 2024 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 'ಆಗ್ರೋ ಸುವರ್ಣ ಸಂಭ್ರಮ' ನಡೆಯಲಿದೆ ಎಂದು ಆಗ್ರೋ ಸಂಸ್ಥೆಯ ಮಾಲಕರಾದ ರಾಮಚಂದ್ರ...
Ad Widget

ಜೀವನ್ ರಾಂ ಸುಳ್ಯ ನಿರ್ದೇಶನದ ಆಳ್ವಾಸ್ ನ
ಏಕಾದಶಾನನ ನಾಟಕ ರಾಷ್ಟ್ರಮಟ್ಟಕ್ಕೆ ಆಯ್ಕೆ

     ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ ನವದೆಹಲಿ ಇವರು ಜೆ.ಎಸ್.ಎಸ್.ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆಸಿದ ದಕ್ಷಿಣ ವಲಯ ಅಂತರ್ ವಿ.ವಿ.ಯುವಜನೋತ್ಸವದಲ್ಲಿ  ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ  ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ  ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ಏಕಾದಶಾನನ  ನಾಟಕವು ಪ್ರಥಮ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ.       ಅದಕ್ಕೂ ...

ಕವನ : ಬದುಕಿನಲ್ಲಿ ತಾಳ್ಮೆಯಿರಲಿ, ಬದುಕಿನ ಮೇಲೆ ಪ್ರೀತಿಯಿರಲಿ…

ಬದುಕಿರುವಾಗಲೇ ಖುಷಿಯಿಂದ ಬದುಕಿ, ಸಾವು ಹೇಳಿ-ಕೇಳಿ ಬರುವುದಿಲ್ಲ, ಸತ್ತ ಮೇಲೆ ಈ ಬದುಕೇ ಇರುವುದಿಲ್ಲ...ಜೊತೆಗಿರುವಾಗಲೇ ಎಲ್ಲರನ್ನೂ ಪ್ರೀತಿಸಿ, ದೂರವಾದ ಮೇಲೆ ದುಃಖಿಸಿದರೆ ಪ್ರಯೋಜನವೇ ಇರುವುದಿಲ್ಲ...ಆದಷ್ಟು ಕೋಪ-ಸಿಟ್ಟುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಿ, ಒಂದು ಕ್ಷಣದ ಸಿಟ್ಟು ಅದೆಷ್ಟೋ ಸಂಬಂಧಗಳನ್ನು ದೂರ ಮಾಡಿದ ಉದಾಹರಣೆಗಳಿವೆಯಲ್ಲಾ...!ನಿಮ್ಮ ಕಣ್ಣೆದುರು ಇತರರಿಗೆ ಕಷ್ಟ ಬಂದಾಗ ಅವರ ಕಷ್ಟಗಳಿಗೆ ಕೈ ಜೋಡಿಸಿ, ನಾವು ಇತರರ ಕಷ್ಟಕ್ಕೆ...

ಅಂಬ್ರೋಟಿ –  ಮುಚ್ಚಿರಡಿ ಉಳ್ಳಾಗಳ ನೇಮೋತ್ಸವ

ಸುಳ್ಯ : ಮಂಡೆಕೋಲು ಗ್ರಾಮದ ಅಂಬ್ರೋಟಿ -  ಮುಚ್ಚಿರಡಿ  ಶ್ರೀ ಉಳ್ಳಾಗಳ ದೈವಸ್ಥಾನದಲ್ಲಿ ಶ್ರೀ  ಉಳ್ಳಾಗಲು ದೈವಗಳ ನೇಮ ನಡಾವಳಿಯು ಫೆ. 26ರಂದು ಆರಂಭಗೊಂಡು ಫೆ 28ರ ವರೆಗೆ ನಡೆಯಲಿದೆ.  ಫೆ. 25ರಂದು ಪೇರಾಲು ಬಜಪ್ಪಿಲ ಉಳ್ಳಾಗಲು ದೈವಸ್ಥಾನದಲ್ಲಿ ಕುದಿ ಹಾಕುವ ಮೂಲಕ ನೇಮೋತ್ಸವವನ್ನು ಆರಂಭಿಸಲಾಯಿತು.  ಫೆ.  26ರಂದು ಬೆಳಿಗ್ಗೆ ಉಗ್ರಾಣ ತುಂಬಿಸಿದ ಅಪರಾಹ್ನ ಪೇರಾಲು...

ಅಡ್ಕಾರು; ಅಂಜನಾದ್ರಿಯಲ್ಲಿ ಅಪರೂಪವಾಗಿ ಕಂಡುರುವ  ಹನುಮ ನೇಮೋತ್ಸವ

ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಹನುಮ ನೇಮೋತ್ಸವು ಫೆ. 27ರಂದು ನಡೆಯಿತು.ಅಪರೂಪವಾಗಿ ಕಂಡುರುವ  ಹನುಮ ನೇಮೋತ್ಸವು ದೇವಸ್ಥಾನದ ಸಮೀಪದ ಕಾಡಿನಿಂದ ಕೋಲ ಕಟ್ಟಿ ದೇವಸ್ಥಾನದ ಅಂಗಣಕ್ಕೆ ಕರೆ ತರಲಾಗುತ್ತದೆ.  ಕೋಲ ರೂಪದಲ್ಲಿ ಅವತರಿಸಿದ ಆಂಜನೇಯ, ಮೈಯೆಲ್ಲ ಕಪ್ಪು ಬಣ್ಣ, ಅದರ ಮಧ್ಯೆ ಬಿಳಿ ಚುಕ್ಕೆ,...

ಮಾರ್ಚ್ 8-9: ಮೇಲಡ್ತಲೆ ಕುಟುಂಬದ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಧರ್ಮ ನಡಾವಳಿ

ಅರಂತೋಡು ಗ್ರಾಮದ ಮೇಲಡ್ತಲೆ ಕುಟುಂಬದ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಧರ್ಮ ನಡಾವಳಿ ಮಾರ್ಚ್ 8 ಮತ್ತು 9 ರಂದು ನಡೆಯಲಿದೆ. ಮಾರ್ಚ್ 08 ರಂದು ಬೆಳಿಗ್ಗೆ ಗಂಟೆ 8-00ರಿಂದ ಶ್ರೀ ನಾಗತಂಬಿಲ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಗಂಟೆ 12-00ರಿಂದ ಪ್ರಸಾದ ವಿತರಣೆ ಹಾಗೂ...

ಕದಿಕಡ್ಕ: ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ 28ರಂದು ಬೆಳಗ್ಗೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ವರದಿಯಾಗಿದೆ. ಬೆಳಿಗ್ಗೆ ಈ ಭಾಗದ ನಾಗರಿಕರು ಬಂದಾಗ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಂಡುಬಂದಿದ್ದು, ಬಳಿಕ ಗ್ರಾ.ಪಂ.ಗೆ ವಿಷಯ ತಿಳಿಸಿದ್ದು, ಗ್ರಾ.ಪಂ. ವತಿಯಿಂದ ಸುಳ್ಯ ಪೊಲೀಸ್ ಠಾಣೆಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ ಆಯ್ಕೆ

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಓ ಬಿ ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆಯವರನ್ನು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಆಯ್ಕೆ ಮಾಡಿ ಆದೇಶ ಹೋರಡಿಸಿಲಾಗಿದೆ.

ಅರಂಬೂರು ರಸ್ತೆ ಅಪಘಾತ ಪ್ರಕರಣ ವ್ಯಕ್ತಿ ಮೃತ್ಯು.

ಸುಳ್ಯ ಅರಂಬೂರು ಬಳಿಯ ಬಳಿಯಲ್ಲಿ ರಸ್ತೆ ಅಪಘಾತ ನಡೆದ ಕುರಿತು ವರದಿಯಾಗಿತ್ತು ಇದೀಗ ಗಂಭೀರವಾಗಿ ಗಾಯಗೊಂಡು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಮೇಶ್ವರ ಮೃತ್ಯುವಾಗಿದ್ದಾರೆ ಎಂದು ತಿಳಿದು ಬಂದಿದೆ.
Loading posts...

All posts loaded

No more posts

error: Content is protected !!