
ಸುಬ್ರಹ್ಮಣ್ಯ ಪೇಟೆಯಲ್ಲಿರುವ ಈ ಬೀದಿನಾಯಿ ಕರಿಯ ಎಂದೇ ಎಲ್ಲರಿಗೂ ಚಿರಪರಿಚಿತ. ಇದೀಗ ಮಗುವನ್ನು ರಕ್ಷಿಸುವ ಮೂಲಕ ಮತ್ತೆ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಆದಿ ಸುಬ್ರಹ್ಮಣ್ಯದಲ್ಲಿ ಟೂರಿಸ್ಟ್ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹಣ್ಣುಕಾಯಿ ತೆಗೆದುಕೊಳ್ಳೋ ಸಮಯದಲ್ಲಿ ಮಗು ರಸ್ತೆಗೆ ಬಂದಿದೆ. ಅದೇ ಸಮಯಕ್ಕೆ ನಾಗರಹಾವು ರಸ್ತೆ ದಾಟುತಿತ್ತು ಮಗು ಇನ್ನೇನೂ ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡಲಾಗಿ ನಿಂತು ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ತಿಳಿದುಬಂದಿದೆ.