Ad Widget

ಟಾಟಾ ಐ.ಪಿ.ಎಲ್ 2022 ರ ಕ್ರ್ಯೂ ಮೆಂಬರ್ ಆಗಿ ಹರ್ಷಿತ್ ಪಡ್ರೆ ನೇಮಕ

ಮಾ.26 ರಿಂದ ಪ್ರಾರಂಭವಾಗಲಿರುವ ಟಾಟಾ ಐ.ಪಿ.ಎಲ್ ಸೀಸನ್ 15 ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು, ಇದರ ಕ್ರ್ಯೂ ಮೆಂಬರ್ ಆಗಿ ಟಿ.ವಿ ನಿರೂಪಕ ಹಾಗೂ ಪತ್ರಕರ್ತರಾದ ಹರ್ಷಿತ್ ಪಡ್ರೆ ಅವರು ಸ್ಟಾರ್ ಸ್ಪೋರ್ಟ್ಸ್ ಗೆ ನೇಮಕಗೊಂಡಿದ್ದಾರೆ.ಈ ಬಾರಿಯ ಐ.ಪಿ.ಎಲ್ ನ ಎಲ್ಲಾ ಪಂದ್ಯಗಳು ಪುಣೆ ಹಾಗೂ ಮುಂಬೈ ನಲ್ಲಿ ನಡೆಯಲಿದ್ದು, ಹರ್ಷಿತ್ ಪಡ್ರೆ ಅವರು ಮುಂಬೈ...

ಗುತ್ತಿಗಾರು : ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಸ್ಪೇಷಲ್ ಆಫರ್ – ರೂ 300 ಮೌಲ್ಯದ ಎರಡು ಬಟ್ಟೆ ಖರೀದಿಗೆ ಒಂದು ಉಚಿತ

ಗುತ್ತಿಗಾರಿನ ಕೆಳಗಿನ ಪೇಟೆಯಲ್ಲಿರುವ ಕರುವಜೆ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಸ್ಪೇಷಲ್ ಆಫರ್ ಆರಂಭಗೊಂಡಿದ್ದು 15 ದಿನಗಳ ಕಾಲ ಮಹಿಳೆಯರ, ಪುರುಷರ, ಮಕ್ಕಳ ಅತ್ಯಾಕರ್ಷಕ ಶೈಲಿಯ ಉಡುಪುಗಳ ಖರೀದಿಗೆ ವಿಶೇಷ ದೊರೆಯಲಿದೆ. 300 ರೂಪಾಯಿ ಮೌಲ್ಯದ ಎರಡು ಬಟ್ಟೆ ಖರೀದಿಗೆ ಒಂದು ಉಚಿತ ಬಟ್ಟೆ ನೀಡುತ್ತೇವೆ. 15 ದಿನಗಳ ಕಾಲ ಈ...
Ad Widget

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಆದ್ಯಾ ಬಾಬ್ಲುಬೆಟ್ಟು

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2021ರಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆದ್ಯಾ ಬಾಬ್ಲುಬೆಟ್ಟು ಡಿಸ್ಟಿಂಕ್ಷನ್ (94% ) ಪಡೆದು ಉತ್ತೀರ್ಣಳಾಗಿರುತ್ತಾಳೆ. ಅಶ್ವಿನ್ ಬಾಬ್ಲುಬೆಟ್ಟು ಮತ್ತು ರಶ್ಮಿ ದಂಪತಿಗಳ ಪುತ್ರಿಯಾಗಿರುವ ಈಕೆ ಕಡಬದ ಶ್ರೀಮತಿ ಮಾನಸ ರೈ ಇವರ ಶಿಷ್ಯೆ ಯಾಗಿರುತ್ತಾಳೆ. ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ ದ 6ನೇ ತರಗತಿ ವಿದ್ಯಾರ್ಥಿನಿ.

ಎಲಿಮಲೆ ಶಾಲೆಗೆ ದಾನಿಗಳು ನೀಡಿದ ಕ್ರೀಡಾ ಸಲಕರಣೆಗಳ ಉದ್ಘಾಟನೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 30 ನೇ ಸಮಾರಂಭ ಎಲಿಮಲೆ ಶಾಲೆಯಲ್ಲಿ ನಡೆಯಿತು.‌ ಅಭಿಯಾನದ ಬಗ್ಗೆ ಸಂಘಟಕರಾದ ಉನೈಸ್ ಪೆರಾಜೆಯವರು ಮಾಹಿತಿಯನ್ನು ನೀಡಿದರು. ಎಲಿಮಲೆ ಶಾಲೆಗೆ ಸುನಿತಾ ಮಹೇಶ್ವರಿ, ಅರ್ಜುನ್ ಕಲ್ಯಾಣ್ ಪುರ ನೀಡಿದ ಜಾರುಬಂಡಿ ಮತ್ತು ಆಟೋಪ ಕರಣಗಳನ್ನು...

ಸುಳ್ಯ : ರೋಟರಿ ಕ್ಲಬ್ ವತಿಯಿಂದ ಸವಣೂರು ಸೀತಾರಾಮ ರೈ ಗಳಿಗೆ ಸನ್ಮಾನ

ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ವಿದ್ಯಾರಶ್ಮಿಸಮೂಹ ಸಂಸ್ಥೆಗಳ ಸಂಸ್ಥಾಪಕ, ರೋ. ಸೀತಾರಾಮ ರೈಯವರಿಗೆ ಸುಳ್ಯ ರೋಟರಿ ಕ್ಲಬ್, ರೋಟರಿ ಸುಳ್ಯಸಿಟಿ ಮತ್ತು ಇನ್ನರ್ ವೀಲ್ ವತಿಯಿಂದ ಮಾ.23ರಂದು ಸನ್ಮಾನಿಸಲಾಯಿತು. ರೋಟರಿ ನಿಯೋಜಿತ ಅಧ್ಯಕ್ಷ ರೊ.ಚಂದ್ರಶೇಖರ ಪೇರಾಲ್ ಅಭಿನಂದನಾ ಭಾಷಣ ನೆರವೇರಿಸಿದರು. ಪದ್ಮಶ್ರೀ ಪುರಸ್ಕೃತ ರೊ. ಗಿರೀಶ್ ಭಾರಧ್ವಜ್ ಮಾತನಾಡಿದರು. ರೋಟರಿ ಸಿಟಿ ಅಧ್ಯಕ್ಷ...

ಕುಕ್ಕೆ ಸುಬ್ರಹ್ಮಣ್ಯ :- ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ

ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರು ಮಾ.23 ರಂದು ತಮ್ಮ ಸ್ನೇಹಿತರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಶಿಷ್ಠಾಚಾರ ವಿಭಾಗದ ಜಯರಾಮ್ ರಾವ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ತನ್ನ ಊರು ಉಡುಪಿಯ ಕಾಪು ಜಾತ್ರೆಗೆ...

ಹಾಲೆಮಜಲು ಅಂಗಡಿಯಲ್ಲಿ ಕಳ್ಳತನ

ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿರುವ ಸುಪ್ರೀತ್ ಗುಡ್ಡೆಮನೆ ಅವರ ಚಿಕನ್ ಸೆಂಟರ್ ಕಳೆದ ರಾತ್ರಿ ಕಳ್ಳರು ಅಂಗಡಿಯ ಬೀಗ ಮುರಿದು ಒಳನುಗ್ಗಿ ನಗದು ಹಾಗೂ ಸಿಸಿ ಕ್ಯಾಮರ ಕೊಂಡೊಯ್ದಿದ್ದಾರೆ.‌ ಈ ಬಗ್ಗೆ ಅಂಗಡಿ ಮಾಲಕ ಸುಪ್ರೀತ್ ರವರು ಸುಬ್ರಹ್ಮಣ್ಯ ಪೋಲೀಸರಿಗೆ ದೂರು ನೀಡಿದ್ದಾರೆ.

ಐಕೋನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಪ್ರಶಸ್ತಿಗೆ ಮಿತ್ರದೇವ ಮಡಪ್ಪಾಡಿ ಆಯ್ಕೆ

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಐ) ಇಂಡಿಯಾ ಸಂಘಟನೆಯವರು ನೀಡುವ 2022 ನೇ ಸಾಲಿನ ಐಕೋನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಪ್ರಶಸ್ತಿಗೆ ಮಡಪ್ಪಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಅವರು ಆಯ್ಕೆ ಆಗಿದ್ದಾರೆ . ಮಂಗಳೂರಿನ ಬೊಕ್ಕಪಟ್ಟಣದ ಅಬ್ಬಕ್ಕ ನೌಕೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಸಮಾರಂಭದಲ್ಲಿ ವಿಶೇಷ ಗಣ್ಯರ...

ದೇವರಗುಂಡ : ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ

ಮಂಡೆಕೋಲು ಗ್ರಾಮದ ದೇವರಗುಂಡ ಡಿ.ವಿ. ಸದಾನಂದ ಗೌಡರ ಸಹೋದರ ದಿ. ಬಾಸ್ಕರ ಗೌಡರ ಮನೆ ಮೇಲೆ ಕಳೆದ ರಾತ್ರಿ ತೆಂಗಿನ ಮರ ಬಿದ್ದು ಮನೆಯ ಮಾಡು ಕುಸಿದಿದೆ. ಮನೆಯವರಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
error: Content is protected !!