ಕೊಲ್ಲಮೊಗ್ರ : ಜ.16 ರಿಂದ 19 ರವರೆಗೆ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಕೊಲ್ಲಮೊಗ್ರ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16 ರಿಂದ ಜ.19 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಜ.16 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಅಶ್ವತ್ಥ ಪ್ರತಿಷ್ಠಾಂಗ ಪೂರ್ವಭಾವಿ ವೈದಿಕ ಕಾರ್ಯಕ್ರಮಗಳು ಮತ್ತು ನಾಗನಲ್ಲಿ ಅನುಜ್ಞಾ ಕಲಶ ಪ್ರಾರ್ಥನೆ, ಮದ್ಯಾಹ್ನ 12:00 ಗಂಟೆಯಿಂದ ಹಸಿರುವಾಣಿ ಸಮರ್ಪಣೆ, ಸಂಜೆ 6:00 ಗಂಟೆಯಿಂದ ಪ್ರಸಾದ ಶುದ್ಧಿ, ರಾಕ್ಷೋಘ್ನ...

ಅರಂತೋಡು : ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮೋಹನ ಕಿನಾಲ – ಉಪಾಧ್ಯಕ್ಷರಾಗಿ ಕಿರಣ್ ಎಸ್

ಕಿರಣ್ ಎಸ್ ಉಳುವಾರು ಸಣ್ಣಮನೆ ಅರಂತೋಡು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ಕಿನಾಲ ಅಡ್ತಲೆ, ಉಪಾಧ್ಯಕ್ಷರಾಗಿ ಕಿರಣ ಎಸ್. ಉಳುವಾರು ಸಣ್ಣಮನೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ  ಚಂದ್ರಪ್ರಕಾಶ್ ಪಿ.ಎಂ., ಮಾಲಿನಿ ಯು.ವಿ., ಕೆ.ಸಿ.ನಾರಾಯಣ,  ಗೀತಾ ಸರಸ್ವತಿ, ಜನಾರ್ದನ ಸಿ.,ಗಂಗಾಧರ ಯು.ಡಿ., ಭಾರತಿ ಯು., ಪ್ರಮೀಳಾ  ಪಿ., ಜಾನಕಿ ಆಯ್ಕೆಯಾಗಿದ್ದಾರೆ.
Ad Widget

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾದ ಹರಿಣಾಕ್ಷಿ ವಲ್ಪಾರೆ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹರಿಣಾಕ್ಷಿ ಶಿವಕುಮಾರ ವಲ್ಪಾರೆ ನಡುಗಲ್ಲು ಇವರು 3000 ಮೀಟರ್ ಓಟ ಪ್ರಥಮ 1,500 ಮೀಟರ್ ಓಟ ಪ್ರಥಮ 800 ಮೀಟರ್ ಓಟ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿರುತ್ತಾರೆ. ಇವರು ದೇವದಲ್ಲಿ ನೆಲೆಸಿರುವ ದಿವಂಗತ ಶೀನಪ್ಪ ಗೌಡ ಪಾಲೆಪ್ಪಾಡಿ...

ಆಲೆಟ್ಟಿ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆ

ಸಭೆಯಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಜಾತ್ರೆಯ ಮುನ್ನ ದೇವಳದ ಎದುರು ಭಾಗದಲ್ಲಿ ಶಾಶ್ವತ ಚಪ್ಪರ ನಿರ್ಮಾಣ ಆಗಬೇಕು. ಈಗಾಗಲೇ ಉಳ್ಳಾಕುಲು ಚಾವಡಿಯ ನಿರ್ಮಾಣದ ಕೆಲಸ ಕಾರ್ಯಗಳು ನಡೆಯುತ್ತಿವೆ, ಕಾಂಪೌಂಡ್ ರಚಿಸುವ ಬಗ್ಗೆ ಹಾಗೂ ಜಾತ್ರೆಯ ಆಮಂತ್ರಣ ಪತ್ರ ಹಂಚುವಿಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿಅನುವಂಶಿಕ ಆಡಳಿತ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,...

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರೀಮತಿ ರಮ್ಯಾ ಪವನ್ ಉಳುವಾರು

ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ರಮ್ಯಾ ಪವನ್ ಉಳುವಾರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜ.13 ಮತ್ತು 14 ರಂದು ನಡೆದ 42 ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾ ಕೂಟ ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ನಡೆಯಿತು. ಅರಂತೋಡು ಗ್ರಾಮದ ಉಳುವಾರು ಶ್ರೀಮತಿ ರಮ್ಯ ಪವನ್ ಇವರು ಭಾಗವಹಿಸಿ ಶಾಟ್ ಪುಟ್, ಡಿಸ್ಕ್ ಮತ್ತು ಹ್ಯಾಮರ್ ಥ್ರೋ ನಲ್ಲಿ...

ಸುಳ್ಯ; ಯುವ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ನೆಹರೂ ಯುವ ಕೇಂದ್ರ ಮಂಗಳೂರು, ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ, ಮತ್ತು ಕಪಿಲ ಯುವಕ ಮಂಡಲ (ರಿ) ಜಟ್ಟಿಪಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮಂಡಲದ ಬೆಳ್ಳಿ ಹಬ್ಬದ ಅಂಗವಾಗಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ'ಯುವ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವು ಜಟ್ಟಿಪಳ್ಳದ ಯುವ ಸದನ ದಲ್ಲಿ ಜ .14 ರಂದು ಜರುಗಿತು. ನಗರ...

ಜ.22 : ಶ್ರೀ ರಾಮನ ಪ್ರತಿಷ್ಠಾಪನೆ ಅಂಗವಾಗಿ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಕುಲ್ಕುಂದದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಪುಣ್ಯ ದಿನದಲ್ಲಿ ದೇಶದ ಎಲ್ಲಾ ದೇವಸ್ಥಾನಗಳಲ್ಲಿ ಮತ್ತು ಹಿಂದೂ ಶ್ರದ್ದಾ ಮಂದಿರಗಳಲ್ಲಿ ಶ್ರೀ ರಾಮ ದೇವರ ನಾಮ ಸ್ಮರಣೆ, ಜಪ, ಭಜನೆ,ಯಜ್ಞಗಳು ನಡೆಯಲಿದೆ. ಆ ಪ್ರಯುಕ್ತ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ...

ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಪ್ರಕೃತಿ ನಡೆ ಚಾರಣ.

ಅಜ್ಜಾವರ ಗ್ರಾಮದಲ್ಲಿ ಮೊದಲ ಬಾರಿಗೆ ಚೈತ್ರ ಯುವತಿ ಮಂಡಲ (ರಿ)ಅಜ್ಜಾವರ , ಪ್ರತಾಪ ಯುವಕ ಮಂಡಲ (ರಿ)ಅಜ್ಜಾವರ ಇದರ ವತಿಯಿಂದ ಪ್ರಕೃತಿ ನಡೆ ಎಂಬ ಚಾರಣ ಕಾರ್ಯಕ್ರಮವು ನಡೆಯಿತು. 45 ಕ್ಕೂ ಹೆಚ್ಚು ಸದಸ್ಯರು ಚಾರಣದಲ್ಲಿ ಪಾಲ್ಗೊಂಡರು.ನಿವೃತ್ತ ಪ್ರಾಂಶುಪಾಲರು ಪ್ರೋ. ಜವರೇಗೌಡ ಚಾರಣವನ್ನು ಉದ್ಘಾಟನೆ ನೆರವೇರಿಸಿದರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಪದಾಧಿಕಾರಿ...

ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ – ಗುತ್ತಿಗಾರಿನಲ್ಲಿ ಭಜನಾ ಕಾರ್ಯಕ್ರಮ

ಅಯೋದ್ಯೆಯಲ್ಲಿ ಜ.22 ರಂದು ಶ್ರೀರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9.30ರಿಂದ ಮದ್ಯಾಹ್ನ 1.00ರ ಭಜನೆ, ಕುಣಿತ ಭಜನೆ ನಡೆಯಲಿದೆ ಎಂದು ಶ್ರೀ ಕೃಷ್ಣಾಭಜನಾ ಮಂದಿರದ ಅಧ್ಯಕ್ಷರು ತಿಳಿಸಿದ್ದಾರೆ.

ಸುಳ್ಯದ ಕಾಂಗ್ರೆಸ್ಸಿಗರದು ನೈಜ ರಾಮ ಭಕ್ತಿಯ ಅನಾವರಣವೋ ಅಲ್ಲ ಹಿಂದುತ್ವದ ಅನಿವಾರ್ಯತೆಯೋ : ಸುಳ್ಯ ಮಂಡಲ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ಸಿನ ಹೈಕಮಾಂಡ್ ರಾಮಮಂದಿರದ ಉದ್ಘಾಟನೆಗೆ ಹೋಗುವುದಿಲ್ಲವೆಂದು ಈಗಾಗಲೇ ಘೋಷಿಸಿದ್ದರೂ ಸುಳ್ಯದ ಕಾಂಗ್ರೆಸ್ ನಾಯಕರು ರಾಮಮಂದಿರದ ಉದ್ಘಾಟನೆಯ ದಿವಸ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸೇರಿ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಸುಳ್ಯದ ಕಾಂಗ್ರೆಸಿಗರು ಕರೆ ನೀಡಿರುವುದು ಅಭಿನಂದನೀಯ ಎಂದು ಸುಳ್ಯ ಬಿಜೆಪಿ ಪ್ರತಿಕ್ರಿಯೆಸಿದೆಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಹಿಂದಿನಿಂದಲೂ ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತ ರಾಮನ ವಿರುದ್ಧವಾಗಿ,...
Loading posts...

All posts loaded

No more posts

error: Content is protected !!