42 ವರ್ಷಗಳ ಅನುಭವಿ ಜ್ಯುವೆಲ್ಲರಿ ಬಿಂದು ಸುಳ್ಯದಲ್ಲಿ ಶುಭಾರಂಭ , ಕೊಸ್ಟಲ್ ವುಡ್ ತಾರೆಯರು ಭಾಗಿ.

ಸುಳ್ಯ: ಕಾಸರಗೋಡಿನಲ್ಲಿ ಕಳೆದ 42 ವರ್ಷಗಳಿಂದ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿಯ ಮೂರನೇ ಶಾಖೆ ಸುಳ್ಯದ ಪೊಲೀಸ್ ಠಾಣೆಯ ಮುಂಭಾಗದ ನೂತನ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿತುಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಬಿಂದು ಜ್ಯುವೆಲ್ಲರಿಯ ಸುಳ್ಯ ಶಾಖಾ ಮಳಿಗೆಯನ್ನು ಉದ್ಘಾಟಿಸಿದರು. ಕೊಸ್ಟಲ್ ವುಡ್ ಚಲನಚಿತ್ರ ನಟ ನಿರ್ದೇಶಕ ಅರ್ಜುನ್ ಕಾಪಿಕಾಡ್ ಹಾಗೂ ಚಲನಚಿತ್ರ ನಟಿ ವಿಕೀಷಾ...

ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಮಂಡೆಕೋಲು ಸಭಾ ಕಾರ್ಯಕ್ರಮಕ್ಕೆ ಸ್ವಾಮಿಜಿಧ್ವಯರಿಂದ ದ್ವೀಪ ಪ್ರಜ್ವಲನೆ

ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವೇದಿಕೆ ಕಾರ್ಯಕ್ರಮಕ್ಕೆ  ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಜಿ ಶ್ರೀ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮಿಜಿಗಳ ದಿವ್ಯ ಉಪಸ್ಥಿತಿಯಲ್ಲಿ ಸಭಾ ವೇದಿಕೆಯಲ್ಲಿ ದ್ವೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೇಶವಮೂರ್ತಿ ಹೆಬ್ಬಾರ್ ಅಧ್ಯಕ್ಷರು ವ್ಯವಸ್ಥಾಪನಾ...
Ad Widget

ಭವಿಷಿತ್ ಮಡ್ತಿಲರವರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ಮಂಗಳೂರು ಮೊರಾರ್ಜಿ ದೇಸಾಯಿ  ಪದವಿ  ಪೂರ್ವ ವಸತಿ ಕಾಲೇಜಿನ ವಿದ್ಯಾರ್ಥಿ ಭವಿಷಿತ್ ಎಂ.ಡಿ.ಮಡ್ತಿಲ ರವರು  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ  533 ಅಂಕ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಐವರ್ನಾಡು  ಗ್ರಾಮದ  ಮಡ್ತಿಲ ದಾಮೋದರ ಗೌಡ   ಮತ್ತು ಶ್ರೀಮತಿ ಗೀತಾ  ದಂಪತಿ ಪುತ್ರ.

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನ –  ಭಕ್ತರಿಂದ ಹಸಿರುವಾಣಿ ಸಮರ್ಪಣೆ

ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಈಗಾಗಲೇ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಶೃಂಗಾರಗೊಂಡಿದ್ದು ಶನಿವಾರ ಬೆಳಿಗ್ಗೆ ಊರ, ಪರ ಊರ ಭಕ್ತಾದಿಗಳಿಂದ ದೇಗುಲಕ್ಕೆ ಹಸಿರುವಾಣಿ ಸಮರ್ಪಣೆಯಾಯಿತು.ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಮೆರವಣಿಗೆಯ ವಾಹನದ ಮುಂದೆ ತೆಂಗಿನ ಕಾಯಿ ಒಡೆಯುವ ಮೂಲಕ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಮೆರವಣಿಗೆಗೆ ಚಾಲನೆ...

ಐನೆಕಿದು : ಪೂರ್ಣಗೊಂಡ ಮತದಾನ – 90% ಮತದಾನ

ಏ.26 ರಂದು ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.ಐನೆಕಿದು ಗ್ರಾಮದ 117ನೇ ಬೂತ್ ನಲ್ಲಿ 734(90.62%) ಮತದಾರರು ಮತದಾನ ಮಾಡಿದ್ದಾರೆ.

ನಾಲ್ಕೂರು : ವಿದೇಶದಿಂದ ಆಗಮಿಸಿ ತನ್ನ ಕರ್ತವ್ಯವನ್ನು ಮೆರೆದ ವಿನೋದ್ ಪಾಲ್ತಾಡು

ವಿದೇಶದಲ್ಲಿ ಉದ್ಯೋಗದಲ್ಲಿರುವ ನಾಲ್ಕೂರು ಗ್ರಾಮದ ನಡುಗಲ್ಲಿನ ವಿನೋದ್ ಪಾಲ್ತಾಡು ಎಂಬುವವರು ಮತದಾನ ಮಾಡುವ ಸಲುವಾಗಿ ತನ್ನ ಕೆಲಸಕ್ಕೆ ರಜಾ ಹಾಕಿ ಬಂದು ಮತದಾನ ಮಾಡಿ ತಮ್ಮ ಕರ್ತವ್ಯವನ್ನು ಮೆರೆದಿದ್ದಾರೆ.

ವಿದೇಶದಿಂದ ಆಗಮಿಸಿ ತನ್ನ ಕರ್ತವ್ಯವನ್ನು ಮೆರೆದ ದಿನಕರ್ ಕುಕ್ಕಾಜೆ

ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಪಡಿಸಿ ಕರ್ನಾಟಕದ ಕೆಲ ಕ್ಷೇತ್ರಗಳು ಸೇರಿದಂತೆ ದಿನಾಂಕ 26-04-2024 ರಂದು ಮತದಾನ ನಡೆಯಿತು. ಈ ಮಹತ್ ಕಾರ್ಯದಲ್ಲಿ ಸುಳ್ಯದದಿನಕರ ಕುಕ್ಕಾಜೆ ಕಾನ ಎಂಬುವವರು ಶಾಂತಿನಗರ ಬೂತ್ ನಂಬರ್ 177 ರ ಮತದಾರರಾಗಿದ್ದು ಇವರು ದುಬೈಯ ಧೀರದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದು...

ಬಾಳುಗೋಡು : ಪೂರ್ಣಗೊಂಡ ಮತದಾನ – 90% ಮತದಾನ

ನಿನ್ನೆ ಏ.26 ರಂದು ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.ಬಾಳುಗೋಡು ಗ್ರಾಮದ 233ನೇ ಬೂತ್ ನಲ್ಲಿ 522 ಪುರುಷ ಮತದಾರರು ಹಾಗೂ 516 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 1038(90.89%) ಮತದಾರರು ಮತದಾನ ಮಾಡಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

ಹರಿಹರ ಪಲ್ಲತ್ತಡ್ಕ : ಪೂರ್ಣಗೊಂಡ ಮತದಾನ – 88% ಮತದಾನ

ನಿನ್ನೆ ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.ಹರಿಹರ ಪಲ್ಲತ್ತಡ್ಕದ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 118 ರಲ್ಲಿ 371 ಪುರುಷ ಮತದಾರರು ಹಾಗೂ 355 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 726(88.32%) ಮತದಾರರು ಮತದಾನ ಮಾಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಮಂಡೆಕೋಲು : ಬ್ರಹ್ಮಕಲಶೋತ್ಸವಕ್ಕೆ ಚಾಲನೆ – ತಂತ್ರಿಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತ

ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಶುಕ್ರವಾರ ಬ್ರಹ್ಮಕಲಶೋತ್ಸವದ ಆರಂಭದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಮುಂದಿನ ಸರ್ವ ಕಾರ್ಯಗಳಿಗೆ ಯಾವುದೇ ವಿಘ್ನಗಳು ಬಾಧಿಸದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ದೇವತಾ ಪ್ರಾರ್ಥನೆ...
Loading posts...

All posts loaded

No more posts

error: Content is protected !!