3,395 ಕಾನ್ಸ್ಟೇಬಲ್ ಹುದ್ದೆಗಳಿಗೆ ನಾಳೆ(ಜೂ.16)ಯಿಂದ ತರಬೇತಿ ಪ್ರಾರಂಭಿಸಲಿರುವ ವಿದ್ಯಾಮಾತಾ ಅಕಾಡೆಮಿ – ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ನಡೆಯಲಿದೆ ತರಬೇತಿ

ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಪ್ರಾರಂಭವಾಗಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ನೇರ ತರಗತಿ ಹಾಗೂ ಆನ್ಲೈನ್ ತರಗತಿಗಳ ಮೂಲಕ...

ಶೈಲೇಶ್ ಅಂಬೆಕಲ್ಲುರವರಿಗೆ ರಕ್ತದಾನ ಸೇವಾ ರತ್ನ ಪ್ರಶಸ್ತಿ – ಜೂ.16 ರಂದು ಪ್ರಶಸ್ತಿ ಪ್ರಧಾನ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೂ.16 ರಂದು ರಕ್ತದಾನ ಜಾಗೃತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 109ನೇ ಭಾರಿ ರಕ್ತದಾನ ಮಾಡುವುದರೊಂದಿಗೆ, ಮಾನವೀಯತೆಯ ಅಪೂರ್ವ ಮಾದರಿಯೊಂದಿಗೆ, ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ಪ್ರೇರಣೆಯಾಗುತ್ತಾ, ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ದೇವಚಳ್ಳ...
Ad Widget

ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಕೊಲ್ಲಮೊಗ್ರು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಬ್ರಹ್ಮಣ್ಯದ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್(ರಿ.) ವತಿಯಿಂದ ಕೊಲ್ಲಮೊಗ್ರು ಅಂಗನವಾಡಿ ಕೇಂದ್ರದ 36 ಪುಟಾಣಿಗಳಿಗೆ ಸಮವಸ್ತ್ರಗಳನ್ನು ಜೂ.15 ಸೋಮವಾರದಂದು ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರವಿ ಕಕ್ಕೆಪದವು ಅವರು ಮಾತನಾಡುತ್ತಾ “ದೇವರು ನಮಗೆ ಐಶ್ವರ್ಯ, ಸಂಪತ್ತನ್ನು ನೀಡುವುದು ನಮ್ಮ ಖರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ಸಮಾಜಕ್ಕೆ ದಾನ ಮಾಡಿ...

ಬೆಳ್ಳಾರೆ-ಕಾವಿನಮೂಲೆಯಲ್ಲಿ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್

ಕರ್ನಾಟಕ ಮುಸ್ಲಿ ಜಮಾಅತ್(kmj)ಸುನ್ನೀ ಯುವಜನ ಸಂಘ(sys)ಸುನ್ನೀ ಸ್ಟುಡೆಂಟ್ ಫೆಡರೇಶನ್(ssf)ಈ ಸಂಘಟನೆಗಳ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಯುನಿಟ್ ವತಿಯಿಂದ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಜೂ 13ರಂದು ರಾತ್ರಿ 8-30ಕ್ಕೆ ಪಿ. ಹೆಚ್. ಮುಹಮ್ಮದ್ ಕಾವಿನಮೂಲೆಯವರ ನಿವಾಸದಲ್ಲಿ ನಡೆಯಿತು.ಈ ಮಜ್ಲಿಸಿನಲ್ಲಿಬೆಳ್ಳಾರೆಯ ಸುನ್ನೀ ಮುಖಂಡ, ಸುಳ್ಯ ತಾಲೂಕು ಎಸ್ಎಸ್ಎಫ್ ಮಾಜಿ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ,ಪುತ್ತೂರು ತಾಲೂಕು ಅರಿಕ್ಕಿಲ...

ಭೂಮಿಕಾ ಕೆ.ಜೆ ನವೋದಯ ಶಾಲೆಗೆ ಆಯ್ಕೆ

ದೇವಚಳ್ಳ ಗ್ರಾಮದ ಕಲ್ಲುಪಣೆ ನಿವಾಸಿ ಭೂಮಿಕಾ ಕೆ.ಜೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಜ್ಞಾನ ದೀಪ ಎಲಿಮಲೆ ಶಾಲೆಯಲ್ಲಿ ಎಸ್.ಎಸ್ಎಲ್.ಸಿ ಯಲ್ಲಿ ಶೇ. 94.4 ಅಂಕಗಳನ್ನು ಪಡೆದಿರುವ ಇವರು ಮುಡಿಪು ಪಿಯು ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪಡೆಯಲಿದ್ದು, ಇವರು ದೇವಚಳ್ಳ ಗ್ರಾಮ ಪಂಚಾಯತ್ ನ ಸಿಬ್ಬಂದಿ ಜಯರಾಮ ಎಮ್ ಮತ್ತು ಶ್ರೀಮತಿ ಭವ್ಯ ದಂಪತಿಗಳ ಪುತ್ರಿ.

ವಿಶ್ವ ರಕ್ತದಾನಿಗಳ ದಿನ: ಕೆವಿಜಿಯಲ್ಲಿ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ

ಸುಳ್ಯ, ಜೂ.15: ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಕೆವಿಜಿ ನರ್ಸಿಂಗ್ ಇನ್ಸ್ಟಿಟ್ಯೂಟ್, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹಾಗೂ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಹಯೋಗದಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ, ಸಂಸ್ಥೆಯ ಪೆಥಾಲಜಿ ವಿಭಾಗ ಹಾಗೂ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು...

ಇಂದಿನ(ಜೂನ್ 15) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 15 ಜೂನ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...

ಸುಳ್ಯ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೆಸಿಐ ಸುಳ್ಯ ಸಿಟಿ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಘಟಕ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ, ಜಂ ಇಯ್ಯತುಲ್ ಫಲಾಹ್ (ರಿ.) ಸುಳ್ಯ ಘಟಕ, ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ದಕ್ಷಿಣ ಕನ್ನಡ ಜಿಲ್ಲೆ, ಲಯನ್ಸ್ ಕ್ಲಬ್...

ಬೆಳ್ಳಾರೆ-ಬೂಡಿನಲ್ಲಿ ಬೈತುಲ್ ನೂರ್ ಗೃಹಪ್ರವೇಶ

ಬೆಳ್ಳಾರೆ ಗ್ರಾಮದ ಬೂಡಿನಲ್ಲಿ ಯು.ಎ.ಇಯ ಶಾರ್ಜಾದಲ್ಲಿ ಕಂಪೆನಿಯೊಂದರಲ್ಲಿ ಅಕೌಟೆಂಟ್ ಆಗಿ ಉದ್ಯೋಗದಲ್ಲಿರುವ ಮುಹಮ್ಮದ್ ಆಸೀಫ್ ಬೂಡು ಇವರು ಹೊಸದಾಗಿ ನಿರ್ಮಿಸಿದ 'ಬೈತುಲ್ ನೂರ್ 'ಇದರ ಗೃಹಪ್ರವೇಶವುಜೂ 14ರಂದು ನಡೆಯಿತು. ಅಂದು ರಾತ್ರಿಕಾಲದ ನಾಯಕ ಅಶ್ಶೈಖ್ ಮುಹಿಯದ್ದೀನ್ಅಬ್ದುಲ್ ಖಾದಿರ್ ಜೀಲಾನಿ(ಖ. ಸಿ)ರವರ ಹೆಸರಿನಲ್ಲಿ ಹರಕೆಯ‌ ಖುತುಬಿಯತ್ ರಾತೀಬ್ ನಡೆಯಿತು.

ದೇವಚಳ್ಳ : ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ

. . . . ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಜೂ. 15ರಂದು ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಶ್ರೀಮತಿ ಸೌಮ್ಯ, ಅರಣ್ಯ ಸಂರಕ್ಷಕರಾದ ನಿಂಗಪ್ಪ ಮತ್ತು ಶಿವಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಅಜಿತ್ ಜಿ ಕೆ, ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ವಸುಧಾ, ದೇವಚಳ್ಳ ಗ್ರಾ....
Loading posts...

All posts loaded

No more posts

error: Content is protected !!