- Friday
- May 1st, 2026
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ:24/04/2026 ಶುಕ್ರವಾರ*01,🐏ಮೇಷರಾಶಿ🐏*📃,ನಿಮ್ಮಲ್ಲಿ ಇಂದು ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ನಿಮ್ಮ ಸ್ವಂತ ನಿರ್ಧಾರಗಳಲ್ಲಿ ನಂಬಿಕೆ ಇಡಿ. ಇದು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸುತ್ತದೆ,ಗಮನಿಸಿ:- ಇಂದು ನಿಮಗೆ ಆರ್ಥಿಕವಾಗಿಯೂ ಪ್ರಯೋಜನವಾಗಬಹುದು,ಪರಿಹಾರ:-ಶ್ರೀ...
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪೃಥ್ವಿಕ ಜೆ.ಪಿ. 607 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಗುತ್ತಿಗಾರು ಗ್ರಾಮ ಕಮಿಲ ಗುಲ್ಮಡ್ಕ (ಚೊಕ್ಕಾಡಿ) ಪದ್ಮನಾಭ ಹಾಗೂ ಜಯಂತಿರವರ ಪುತ್ರಿ.
ರಾಜ್ಯಕ್ಕೆ ದ.ಕ. ಜಿಲ್ಲೆ ಪ್ರಥಮ ದ.ಕ. ಜಿಲ್ಲೆಗೆ ಸುಳ್ಯ ತಾಲೂಕು ದ್ವಿತೀಯ ತಾಲೂಕಿನ 30 ಪ್ರೌಢಶಾಲೆಗಳಿಗೆ ಶೇ.100 ಫಲಿತಾಂಶ ತಾಲೂಕಿನಲ್ಲಿ ಕೇವಲ 16 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣ 2025 - 26ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವು ಎ.23ರಂದು ಮಧ್ಯಾಹ್ನ ವೆಬ್ಸೈಟ್ ಮೂಲಕ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿಗೆ ಈ ಬಾರಿ ಅತ್ಯುತ್ತಮ ಶೇ.99.10...
ಸುಳ್ಯ ಜೂನಿಯರ್ ಕಾಲೇಜಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.97 – 619 ಅಂಕ ಪಡೆದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ರ್ಯಾಂಕ್
ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 97 ಫಲಿತಾಂಶದ ದಾಖಲಿಸಿದ್ದು ಅಶ್ವಿತಾ ಎಂ.ಡಿ. 619 ಅಂಕ ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಈಕೆ ಜಾಲ್ಸೂರು ಗ್ರಾಮದ ಮಹಾಬಲಡ್ಕ ದಾಮೋದರ. ಎಂ. ಹಾಗೂ ಶೀಲಾವತಿ ಎಸ್ ದಂಪತಿಗಳ ಪುತ್ರಿ. ಪರೀಕ್ಷೆಗೆ ಹಾಜರಾದ 227...
ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ – ರಾಜ್ಯದಲ್ಲಿ 9 ನೇ ರ್ಯಾಂಕ್ ಪಡೆದ ರಿಶಿತಾ ಪಾನತ್ತಿಲ
ಕೊಡಿಯಾಲಬೈಲು ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ದಾಖಲಾಗಿದ್ದು ಉತ್ತಮ ಸಾಧನೆ ಮಾಡಿದೆ, ಆಂಗ್ಲಮಾಧ್ಯಮ ಪ್ರಾರಂಭದ ಪ್ರಥಮ ಎಸ್.ಎಸ್.ಎಲ್.ಸಿ. ಬ್ಯಾಚ್ ಆಗಿದೆ. ಇಲ್ಲಿನ ವಿದ್ಯಾರ್ಥಿನಿ ರಿಶಿತಾ. ಪಿ. ಬಿ. 617 ಅಂಕ ಪಡೆದು ಸುಳ್ಯ ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 9 ನೇ ಸ್ಥಾನವನ್ನು ಗಳಿಸಿರುತ್ತಾಳೆ. ಈಕೆ ಉಬರಡ್ಕ ಗ್ರಾಮದ ಪಾನತ್ತಿಲ...
ಕುಮಾರಸ್ವಾಮಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ.. ಒಟ್ಟು .96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು96 ಮಂದಿ ತೇರ್ಗಡೆ ಆಗಿ ಶೇ. 100. ಫಲಿತಾಂಶ ದಾಖಲಿಸಿದೆ. 60 ಮಂದಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು ವಿಜಯಲಕ್ಷ್ಮೀ ಸುಬ್ರಹ್ಮಣ್ಯ 614 ಅಂಕ, ಸುಶ್ಮಿತಾ ನಡುಗಲ್ಲು 613 ಅಂಕ , ಆಶಿಕ್ ಕೆ 609...
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮಹಮ್ಮದ್ ಸಫ್ವಾನ್ 568 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು ಎಸ್ ಎಸ್ ಎಲ್ ಸಿ ಯಲ್ಲಿ ಶೇ100 ಫಲಿತಾಂಶ ದಾಖಲಿಸಿದೆ.ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 79ಮಂದಿ ತೇರ್ಗಡೆ ಆಗಿ ಶೇ100 ಫಲಿತಾಂಶ ದಾಖಲಿಸಿದೆ.20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆಸುಜನ್.ಎ.ಜೆ.595, ರೀತೆಶ್.ಕೆ.ಜೆ 587, ಸೇರಿದಂತೆ 20 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ
8-9ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ 28 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 82 ಫಲಿತಾಂಶ ದಾಖಲಾಗಿದೆ. ಮೂವರು ಪ್ರಥಮ ದರ್ಜೆಯಲ್ಲಿ ಆರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೊಹಮ್ಮದ್...
Loading posts...
All posts loaded
No more posts
