ಸುಳ್ಯ : ಮೋಹನ್ ಜ್ಯುವೆಲ್ಲರಿಗೆ ನುಗ್ಗಿದ ಕಳ್ಳರು – ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಚಿನ್ನ, ನಗದು ಕಳವು ಮಾಡಿದ್ದಾರೆ. ಜ್ಯುವೆಲ್ಲರಿ ಅಂಗಡಿಯ ಬೀಗ ಒಡೆದ ಕಳ್ಳರು ಸುಮಾರು 10 ಲಕ್ಷ ಮೌಲ್ಯದ ಚಿನ್ನ ಹಾಗೂ ಸುಮಾರು ಐವತ್ತು ಸಾವಿರ ರೂಪಾಯಿ ಕಳವುಗೈದಿದ್ದಾರೆನ್ನಲಾಗಿದೆ. ಪತ್ರಿಕಾ ವಿತರಕರು ಅಂಗಡಿಗೆ ಪತ್ರಿಕೆ ಹಾಕುವ ಸಂದರ್ಭದಲ್ಲಿ ಬೀಗ ಒಡೆದಿರುವುದು...

ವೆಲ್ಡರ್ ಬೇಕಾಗಿದ್ದಾರೆ

ಬೇಕಾಗಿದ್ದಾರೆ : ಗುತ್ತಿಗಾರಿನ ಕಾಳಿಕಾಂಬ ಇಂಡಸ್ಟ್ರೀಸ್ ಗೆ ನುರಿತ ವೆಲ್ಡರ್ ಬೇಕಾಗಿದ್ದಾರೆ. ಸಂಪರ್ಕಿಸಿ : 9481633172, 8762478533
Ad Widget

ಪೇರಾಲು ಶ್ರೀ ರಾಮ ಮಂದಿರದ ಪುನಃಪ್ರತಿಷ್ಠಾ ಕಾರ್ಯಕ್ರಮದ ಆಮತ್ರಣ ಬಿಡುಗಡೆ

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ರಾಮ ಮಂದಿರದ ಪುನಃ ಪ್ರತಿಷ್ಠಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾ.29 ರಂದು ಜರಗಿತು. ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್. ಗೋಪಾಲ್ ರಾವ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು. ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ನೀರ್ಪಾಡಿ ವಹಿಸಿದ್ದರು. ಅತಿಥಿಗಳಾಗಿ ಮುಚ್ಚಿರಡಿ ಕ್ಷೇತ್ರದ ಮೊಕ್ತೇಸರ ಕುಕ್ಕೇಟಿ ಲಕ್ಷ್ಮಣ...

ಮಡಪ್ಪಾಡಿ : ವಿಶ್ವ ಮಹಿಳಾ ದಿನಾಚರಣೆ

ಅಕ್ಷಯ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಮಡಪ್ಪಾಡಿ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ನೆರವೇರಿಸಿದರು. ಗ್ರಾಂ.ಪಂ.ಸದಸ್ಯರಾದ ಜಯರಾಮ ಹಾಡಿಕಲ್ಲು ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಧನಪತಿ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳಾ ಕೇವಳ ಒಕ್ಕೂಟದ ಉಪಾಧ್ಯಕ್ಷೆ ದುರ್ಗೇಶ್ವರಿ ಪಣಿಯಾಲ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ನಿಂತಿಕಲ್ಲಿನಲ್ಲಿ ಏಪ್ರಿಲ್ 11 ರಿಂದ ಡ್ಯಾನ್ಸ್ ಕ್ಲಾಸ್ ಆರಂಭ

ಡ್ಯಾನ್ಸ್ ಹೌಸ್ ಆಶ್ರಯದಲ್ಲಿ ನಿಂತಿಕಲ್ಲಿನ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಏ.11 ಆದಿತ್ಯವಾರದಿಂದ ನೃತ್ಯ ತರಗತಿಗಳು ಪ್ರಾರಂಭವಾಗಲಿದೆ. ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನೃತ್ಯ ನಿರ್ದೇಶಕಿ ಹರ್ಷಿಣಿ ಕೆ.ಕೆ. ಹಾಗೂ ಅತಿಥಿ ನೃತ್ಯ ನಿರ್ದೇಶಕ ಜಯಪ್ರಕಾಶ್ ಮಂಗಳೂರು ನೃತ್ಯ ತರಬೇತಿ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು 8296012252 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಸಂಘಟಕರು...

ಅರಂತೋಡು: ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಛೇರಿ ಉದ್ಘಾಟನೆ

ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ನೂತನ ಆಡಳಿತ ಕಛೇರಿಯನ್ನು ಇತ್ತೀಚೆಗೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಕಾರ್ಯಾಧ್ಯಕ್ಷ ಸಲೀಂ ಅಹಮದ್ , ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಕೆ.ಎಂ.ಮುಸ್ತಫ. ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಕೆಪೆಕ್ ಮಾಜಿ ಅಧ್ಯಕ್ಷ ಪಿ.ಎ....

ವಿ.ಹಿಂ.ಪ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರು ಘಟಕ ನೂತನ ಸಮಿತಿ ಉದ್ಘಾಟನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರ್ ಘಟಕ ನೂತನ ಸಮಿತಿ ಉದ್ಘಾಟನೆ ಮಾ.29 ರಂದು ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ,ಜಿಲ್ಲಾ ಸೇವಾ ಪ್ರಮುಖ್ ನರಸಿಂಹ, ಜಿಲ್ಲಾ ಬಜರಂಗ ಸಹ ಸಂಚಾಲಕ ಲತೀಶ್ ಗುಂಡ್ಯ, ವಿಶ್ವ ಹಿಂದೂ ಪರಿಷದ್ ಸುಳ್ಯ...

ಮಂಡೆಕೋಲು ದೇವಸ್ಥಾನದಲ್ಲಿ ಶ್ರಮದಾನ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ.28ರಂದು ಶ್ರಮದಾನ ನಡೆಯಿತು. ಈ ಕಾರ್ಯಕ್ರಮದಲ್ಲಿ ತತ್ವಮಸಿ ಕನ್ ಸ್ಟ್ರಕ್ಷನ್ ಕಣೆಮರಡ್ಕ ಮಂಡೆಕೋಲು, ಶ್ರೀ.ಕ್ಷೇ.ದ.ಗ್ರಾ.ಯೋಜನೆಯ ಮಂಡೆಕೋಲು, ಕಲ್ಲಡ್ಕ, ಪೆರಾಜೆ ಒಕ್ಕೂಟಗಳ ಅದ್ಯಕ್ಷರು ಪದಾಧಿಕಾರಿಗಳು, ತಂಡಗಳ ಸದಸ್ಯರು ಹಾಗೂ ವಿಪತ್ತು ನಿರ್ವಹಣಾ ಘಟಕದ ಸಂಯೊಜಕರು ಭಾಗವಹಿಸಿದ್ದರು.

ಸುಳ್ಯದಲ್ಲಿ ಗೌಡ ಕಪ್ ಕ್ರಿಕೆಟ್ ಪಂದ್ಯಾಟ : ಅಂಬೆಕಲ್ಲು ಪ್ರಥಮ – ವಾಲ್ತಾಜೆ ದ್ವಿತೀಯ

ಸುಳ್ಯ ಕೊಡಿಯಾಲ್ ಬೈಲ್ ಶಾಲಾ ಆಟದ ಮೈದಾನದಲ್ಲಿ ಕೋಲ್ಚಾರ್ ಬ್ರದರ್ಸ್ ಇದರ ವತಿಯಿಂದ ಸುಳ್ಯ ತಾಲೂಕು ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಸುಳ್ಯ ತಾಲೂಕು ಗೌಡ ಕುಟುಂಬಗಳ ನಿಗದಿತ 5 ಓವರ್ ಗಳ ಅಂಡರ ಅರ್ಮ್ ಕ್ರಿಕೆಟ್ ಪಂದ್ಯಾಟ ಗೌಡ ಕಪ್-2021 ಮಾ. 27 & 28 ರಂದು ನಡೆಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಬೆಕಲ್ಲು ಕುಟುಂಬದ ತಂಡ...

ಜೆಸಿಐ ಸುಳ್ಯ ಸಿಟಿಯ ವತಿಯಿಂದ ಮೌನ ಸಾಧಕ ಗೌರವಾರ್ಪಣೆ

ಜೆಸಿಐ ಸುಳ್ಯ ಸಿಟಿಯ ವತಿಯಿಂದ ಮೌನ ಸಾಧಕ ಗೌರವಾರ್ಪಣೆ ಕಾರ್ಯಕ್ರಮವನ್ನು ಮಾ.28 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸಿಬ್ಬಂದಿಗಳಾದ ಗಂಭೀರ್ ನಾಯ್ಕ್ ಮತ್ತು ಚನ್ನವೀರ್ ನಾಯ್ಕ್ ಇವರುಗಳನ್ನು ಮೌನ ಸಾಧಕ ಗೌರವಾರ್ಪಣೆಯನ್ನು ನೀಡಿ ಗೌರವಿಸಲಾಯಿತು. ಗೌರವಾರ್ಪಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಕೊಡಪಾಲ ನೆರವೇರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ವಹಿಸಿದ್ದರು. ಜೆಸಿಐ...
Loading posts...

All posts loaded

No more posts

error: Content is protected !!