ಪೈಲಾರು : ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ದೀಪಾವಳಿ ಆಚರಿಸಿದ ಟ್ರಸ್ಟ್ ಫಂಡ್

ಅಮರ ಮುಡ್ನೂರು ಗ್ರಾಮದ ಪೈಲಾರ್ ನಿವಾಸಿ ದಿನೇಶ್ ಆಚಾರಿ ಕುಟುಂಬ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಟ್ರಸ್ಟ್ ಫಂಡ್ ದೀಪಾವಳಿ ಆಚರಿಸಿದೆ. ದುಡಿದು ತನ್ನ ಕಾಲಮೇಲೆ ನಿಂತು ಜೀವನ ಸಾಗಿಸುತ್ತಿದ್ದ ದಿನೇಶ್ ಆಚಾರಿಯವರು ಕೆಲ ಸಮಯದಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದಾರೆ. ಪತ್ನಿ ಮೀನಾಕ್ಷಿ ಅವರು ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗ...

ಹರಿಹರಪಲ್ಲತ್ತಡ್ಕ : ಕರೆಂಟ್ ಕಂಬ ದುರಸ್ತಿ ವೇಳೆ ಏರ್ ಫೈಬರ್ ಕೇಬಲ್ ತುಂಡಾಗಿ ಜನ ಪರದಾಟ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಲ್ಲಿ ನ.06 ರಂದು ಬೆಳಿಗ್ಗೆ ಮರ ಬಿದ್ದು 2 ಕರೆಂಟ್ ಕಂಬ ತುಂಡಾಗಿದ್ದು, ಇದರ ದುರಸ್ತಿ ವೇಳೆ ಏರ್ ಫೈಬರ್ ಕೇಬಲ್ ಅನ್ನು ತುಂಡು ಮಾಡಿದ್ದಾರೆ ಎಂಬ ಆರೋಪ ಊರವರಿಂದ ಕೇಳಿ ಬರುತ್ತಿದ್ದು, ಇದರಿಂದ ಕರಂಗಲ್ಲು, ಮಳ್ಳುಬಾಗಿಲು, ಕಜ್ಜೋಡಿ ಸೇರಿದಂತೆ ಹಲವು ಭಾಗಗಳ ಸುಮಾರು 60 ಫೋನ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು...
Ad Widget

ಕುಲ್ಕುಂದ : ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬಲೀಂದ್ರ ಪೂಜೆ ಹಾಗೂ ಗೋ ಪೂಜೆ

ಕುಲ್ಕುಂದದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನ.05 ರಂದು ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಅರ್ಚಕರಾದ ವೇದಮೂರ್ತಿ ಆಮಣ್ಣಾಯರು, ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಪೂರ್ವಾದ್ಯಕ್ಷರಾದ ಚಂದ್ರಹಾಸ ಭಟ್, ದೈವಸ್ಥಾನದ ಅರ್ಚಕರಾದ ಚಂದ್ರ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋ ಪೂಜೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.05 ರಂದು ಗೋ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೋಭಾ ಗಿರಿಧರ್, ಶ್ರೀವತ್ಸ, ವನಜಾ ಭಟ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಭಜರಂಗದಳದ ಲಕ್ಷ್ಮೀಶ ಇಜ್ಜಿನಡ್ಕ ಮುಂತಾದವರು...

ಕರಂಗಲ್ಲು : ಮೀನು ಹಿಡಿಯಲು ಹೋದ ಯುವಕನಿಗೆ ಕರೆಂಟ್ ಶಾಕ್ ಹೊಡೆದು ಮೃತ್ಯು

ದೇವಚಳ್ಳ ಗ್ರಾಮದ ಕರಂಗಲ್ಲಿನ ದಿ.ಕೇಶವ ಗೌಡರ ಪುತ್ರ ಪ್ರಕಾಶ್ ಎಂಬುವವರು ನ.05 ರಂದು ರಾತ್ರಿ ತನ್ನ ಗೆಳೆಯನೊಂದಿಗೆ ಮಾಡಬಾಕಿಲು ಭಾಗದ ನದಿಗೆ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತರಿಗೆ 37 ವರ್ಷ ವಯಸ್ಸಾಗಿದ್ದು, ತಾಯಿ ಭುವನೇಶ್ವರಿ, ಪತ್ನಿ ದಿವ್ಯಾ, ಪುತ್ರಿ ಹಿತಾಶ್ರೀ, ಸಹೋದರ ತೇಜ ಕುಮಾರ್, ಸಹೋದರಿ...

ಕಲಾಮಾಯೆ ಸಾರಥ್ಯದಲ್ಲಿ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಬಿಡುಗಡೆ

ಕಲಾಮಾಯೆ ಸಂಸ್ಥೆಯಿಂದ ಹೊರತರಲಾದ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಇಂದು ಬಿಡುಗಡೆಗೊಂಡಿತು. ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಅಮರ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ ಬಿಡುಗಡೆಗೊಳಿಸಿದರು.ಚಿದಾನಂದ ಪರಪ್ಪ ಅವರ ಕಥೆ, ಚಿತ್ರ ಕಥೆ, ನಿರ್ದೇಶನವಿರುವ ಈ ಕಿರುಚಿತ್ರಕ್ಕೆ ಕಲಾಮಾಯೆಯ ಸುಧೀರ್ ಏನೆಕಲ್ ಸಂಭಾಷಣೆ,...

ಶೇಣಿ ಶಾಲೆಯಲ್ಲಿ ವಾಸ್ತವ್ಯವಿದ್ದ ಅಮರಪಡ್ನೂರು ಕೇಶವ ಭಟ್ ರವರನ್ನು ಆಶ್ರಮಕ್ಕೆ ಸೇರಿಸಿದ ಗ್ರಾಮಸ್ಥರು

ಅಮರಪಡ್ನೂರು ಗ್ರಾಮದ ಸ. ಹಿ.ಪ್ರಾಥಮಿಕ ಶಾಲೆ ಶೇಣಿಯಲ್ಲಿ ನಿರಂತರ ಹಲವು ವರ್ಷಗಳಿಂದ ವಾಸ್ತವ್ಯ ಹೊಂದುತ್ತಿದ್ದ ಕೇಶವ ಭಟ್ ರವರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಚಟುವಟಿಕೆಗಳಿಗೆ ತೊಂದರೆ ಯಾಗುತಿದ್ದು, ಸದರಿ ಕೇಶವ ಭಟ್ ಎಂಬುವವರನ್ನು ಸ್ಥಳಾಂತರಿಸಲು ಶೇಣಿ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ ಮಾಡಬಾಕಿಲು ರವರು ಗ್ರಾಮ ಪಂಚಾಯತ್ ಗೆ ಮತ್ತು ಸ್ಥಳೀಯ ಸದಸ್ಯರಾದ ಅಶೋಕ್ ಚೂಂತಾರುರವರಲ್ಲಿ ಮನವಿ...

ಪಂಜ : ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ – ಶ್ರೀ ಗಣೇಶ್ ಫ್ರೆಂಡ್ಸ್ ಕಲ್ಲೇರಿ ಪ್ರಥಮ , ಶಿವ ಫ್ರೆಂಡ್ಸ್ ನಾಗತೀರ್ಥ ದ್ವಿತೀಯ

ದೀಪಾವಳಿ ಹಬ್ಬದ ಪ್ರಯುಕ್ತ ಶಿವ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಐದು ತಂಡಗಳ ಅಂಡರ್ -20 ವಾಲಿಬಾಲ್ ಪಂದ್ಯಾಟ ಇಂದು ನಡೆಯಿತು. ಪಂದ್ಯಾಕೂಟವನ್ನು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಉದ್ಘಾಟಿಸಿದರು . ಮಿತ್ರ ಮಂಡಲ ನಾಗತೀರ್ಥ ಇದರ ಕಾರ್ಯದರ್ಶಿ ನವೀನ್ ನಾಗತೀರ್ಥ ,ದೈಹಿಕ...

ಲೇಖನ: ದೀಪಾವಳಿ ವೈಶಿಷ್ಟ್ಯತೆ- ಧನಂಜಯ ಕೆ ಕೊಡೆಂಕಿರಿ

ದೀಪಗಳ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮ. ಹಿರಿಯರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳವರೆಗೂ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬ.ಮನೆ-ಮನೆಗಳಲ್ಲಿ ವಿಧವಿಧವಾದ ಖಾದ್ಯಗಳು, ಸಿಹಿ ಖಾರ ತಿನಿಸುಗಳು ಬಗೆಬಗೆಯ ಮಾಂಸದೂಟಗಳು ಒಂದು ಕಡೆಯಾದರೆ ಪಟಾಕಿಯ ಅಬ್ಬರಗಳು ಇನ್ನೊಂದೆಡೆ. ಹಿರಿಯ- ಕಿರಿಯ ಎಲ್ಲರಲ್ಲಿಯೂ ನವ ಚೈತನ್ಯ ತುಂಬುವ ಹಬ್ಬವಿದು. ರೈತರು ತಮ್ಮ ಗದ್ದೆ ಕೆಲಸಗಳನ್ನು...

ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾಧಿಸುವುದೇ ದೀಪಾವಳಿ

ಬಂದೇ ಬಿಟ್ಟಿತು ದೀಪಾವಳಿ.ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ. ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆ ಹೆಚ್ಚಿದೆ.ಅಂತರಂಗದಲ್ಲಿರುವ ಕತ್ತಲೆಯನ್ನು ಓಡಿಸಿ , ಬೆಳಕಿನ ದೀಪವ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬವೇ ದೀಪಾವಳಿ. ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು...
Loading posts...

All posts loaded

No more posts

error: Content is protected !!