- Sunday
- August 16th, 2026
ಸರ್ಕಾರದ ಆದೇಶದಂತೆ ಸೂಕ್ತ ಮುಂಜಾಗೃತ ಕ್ರಮಗಳನ್ನು ಪಾಲಿಸಿಕೊಂಡು ಅಂಗನವಾಡಿಗಳನ್ನು ತೆರೆಯಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಇಂದು ಕಳಂಜ ಗ್ರಾಮದ ಅಯ್ಯನಕಟ್ಟೆ ಅಂಗನವಾಡಿಯಲ್ಲಿ ಮಕ್ಕಳ ಪ್ರಾರಂಭೋತ್ಸವವನ್ನು ನಡೆಸಲಾಯಿತು. ಪುಟಾಣಿಗಳಿಗೆ ಹೂವು ನೀಡುವುದರ ಮೂಲಕ ಅಂಗನವಾಡಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕು. ದೀಪ್ತಿ ಎನ್, ಸಹಾಯಕಿ ಶ್ರೀಮತಿ ಲಲಿತಾ ಮಣಿಮಜಲು, ಎ.ಎನ್.ಎಂ ಬೇಬಿ ಕೆ ಸಿ,...
ಸುಬ್ರಹ್ಮಣ್ಯ ಘಟಕ ಯುವ ಬ್ರಿಗೇಡ್ ವತಿಯಿಂದ ಸುಬ್ರಹ್ಮಣ್ಯದ ಕುಮಾರಧಾರ ನದಿ ತಟದಲ್ಲಿ ಗಂಗಾ ಆರತಿ ಕಾರ್ಯಕ್ರಮ ನೆರವೇರಿತು.ಪುರೋಹಿತ ಶಂಕರ್ ನಾರಾಯಣ ಶಾಸ್ತ್ರೀ ಅವರು ವೈಧಿಕ ವಿಧಿ ವಿಧಾನ ನೆರವೇರಿಸಿದರು. ಮನೋಜ್ ನಾಯರ್ ಗಂಗಾ ಆರತಿ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ನ ಮಿಲನ್ ಕುಮಾರ್, ದಿತೇಶ್, ಕಾರ್ತಿಕ್, ರಮೇಶ್ ಭಟ್,...
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.14ರಿಂದ ನ.20ರ ತನಕ ವಿಜೃಂಭಣೆಯಿಂದ ನಡೆಯಲಿದೆ. ನ.14 ಆದಿತ್ಯವಾರದಂದು ಬೆಳಗ್ಗೆ 10.00 ಗಂಟೆಗೆ ಪ್ರಾರ್ಥನೆ, ಬಳಿಕ ಪಂಡಿತ್ ದೇವರಾಯ ಕಿಣಿ ಮತ್ತು ಬಳಗದವರಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ. ನ.15 ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ದೀಪೋಜ್ವಲನ, ಏಕಾಹ ಭಜನೆ, ರಾತ್ರಿ...
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ "ಹರಿ ಹರ ಸುಪ್ರಭಾತ" ಎಂಬ ಭಕ್ತಿಗೀತೆಯು ನ.02 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹ ಭಟ್ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಜಯಂತ್ ನಾಯ್ಕ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ,...
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 82 ನೇ ವಾರ್ಷಿಕ ಮಹಾಸಭೆಯು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನ.07 ರಂದು ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಗತ ವರ್ಷದ ವರದಿಯನ್ನು ಮಂಡಿಸಿದರು. ಸಂಘದ ಅಧ್ಯಕ್ಷರ ಅಧ್ಯಕ್ಷತೆಯೊಂದಿಗೆ 82ನೇ ಸಭೆಯು ನಡೆಯಿತು, ಸಭೆಯಲ್ಲಿ...
ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ನ.07ರಂದು ಮಂಜಲ್ತಡ್ಕ ವಧುವಿನ ಮನೆಯಲ್ಲಿ ನಡೆಯಿತು.
ಅಮರಮೂಡ್ನೂರು ಗ್ರಾಮದ ದೊಡ್ಡಿಹಿತ್ಲು-ಹಲ್ತಡ್ಕ ಕುಶಾಲಪ್ಪ ಗೌಡರ ಪುತ್ರಿ ಲತಾ ಅವರ ವಿವಾಹ ನಿಶ್ಚಿತಾರ್ಥವು ಕಡಬ ತಾ| ಪುಣ್ಚಪ್ಪಾಡಿ ಗ್ರಾಮದ ಪೂವ ಮನೆ ದಿ| ಸುಬ್ಬಣ್ಣ ಗೌಡರ ಪುತ್ರ ಯತೀಶ ರೊಂದಿಗೆ ನ.7 ರಂದು ವಧುವಿನ ಮನೆಯಲ್ಲಿ ನಡೆಯಿತು.
ಜೇಸಿಐ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಪಂಜದಲ್ಲಿ ಸೂರ್ಯ ಕನ್ಸಲ್ಟೆನ್ಸಿ ಮತ್ತು ಕನ್ಸ್ಟ್ರಕ್ಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕ್ಲಪ್ತ ಸಮಯದಲ್ಲಿ ನಗುಮೊಗದ ಪ್ರಾಮಾಣಿಕ ಸೇವೆ ನೀಡುತ್ತ ಸರಳ ಸಜ್ಜನಿಕೆಯಿಂದ ತಮ್ಮ ಪರಿಸರದ ಹಲವಾರು ಗ್ರಾಹಕರ ಮನೆ ಮತ್ತು ಮನೆಗಳಲ್ಲಿ ಸಂತಸದ ಹೊನಲಾಗಿರುವ ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ...
ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನ.07 ಆದಿತ್ಯವಾರ ಕುಂದಾಪುರದಲ್ಲಿ ಜರುಗಿದ ಜೇಸಿಐ ವಲಯ15 ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಸುಳ್ಯ ಗಾಂಧಿನಗರದ ಅಂಬಿಕಾ ಪ್ರಿಂಟಿಂಗ್ ಪ್ರೆಸ್ ಮಾಲಕರಾದ ಜೇಸಿ ಪಿ ಎಸ್ ಗಂಗಾಧರರವರಿಗೆ ತನ್ನ ವ್ಯವಹಾರ ವಿಭಾಗದ ಸಾಧನೆಗಾಗಿ ಜೇಸಿಐ ವಲಯಾಧ್ಯಕ್ಷರಾದ ಜೇಸಿಐ ಪಿಡಿಪಿ ಸೌಜನ್ಯ ಹೆಗ್ಡೆ 'ಸಾಧನಾಶ್ರೀ' ಪ್ರಶಸ್ತಿ ಪ್ರದಾನ ಮಾಡಿ...
ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯ ಸ್ಥಾಪಕ ಜೆಸೀ ಮನಮೋಹನ್ ಬಳ್ಳಡ್ಕ ಅವರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷ ಜೆಸೀ ಚಂದ್ರಶೇಖರ್ ಕನಕಮಜಲು, ಕಾರ್ಯದರ್ಶಿ ಜೆಸೀ ಅಶ್ವಥ್ ಅಡ್ಕಾರ್, ಉಪಾಧ್ಯಕ್ಷರುಗಳಾದ ಜೇಸೀ ಬಶೀರ್ ಯು ಪಿ, ಜೆಸೀ ಸಾಯಿ...
Loading posts...
All posts loaded
No more posts
