ವಕೀಲರ ಸಂಘದ ಚುನಾವಣೆ : ಅಧ್ಯಕ್ಷರಾಗಿ ನಾರಾಯಣ ಕೆ – ಕಾರ್ಯದರ್ಶಿಯಾಗಿ ವಿನಯಕುಮಾರ್ ಮುಳುಗಾಡು ಆಯ್ಕೆ

Vinayakumar Mulugadu ಸುಳ್ಯ ತಾಲೂಕು ವಕೀಲರ ಸಂಘದ ಚುನಾವಣೆ ಮಾ.೨೫ ರಂದು ವಕೀಲ ಸಂಘದ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಗೆ ನಾರಾಯಣ ಕೆ ಮತ್ತು ಹರಿ ಕುಕ್ಕುಡೇಲು ನಡುವೆ ಸ್ಪರ್ದೆ ಏರ್ಪಟ್ಟು ನೇರ ಹಣಾಹಣಿಯಲ್ಲಿ ಅಂತಿಮವಾಗಿ ನಾರಾಯಣ ಕೆ ಒಂದು ಮತದ ಅಂತರದಿಂದ ವಿಜೇತರಾಗಿ ಆಯ್ಕೆಯಾದರು. ನಾರಾಯಣರು 50 ಮತ ಪಡೆದರೆ ಹರಿ 49 ಮತ ಪಡೆದು...

ಪಾಲಡ್ಕ : ಬೈಕ್ ಮತ್ತು ರಿಕ್ಷಾ ಅಪಘಾತ -ಪರಾರಿಯಾಗಲೆತ್ನಿಸಿದ ಆರೋಪಿ ಸೆರೆ

ಪಾಲಡ್ಕದಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿಸಿ ಅಲ್ಲಿಯೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಕಾರು ಸಮೇತ ಸೆರೆ ಹಿಡಿದ ಘಟನೆ ಮಾ.25 ರ ಸಂಜೆ ವರದಿಯಾಗಿದೆ. ಪೋಲಿಸರು ಆರೋಪಿಯನ್ನು ಸೆರೆ ಹಿಡಿದು ವಿಚಾರಣೆ ನಡೆಸಲಾಗಿ ಕಾರು ಚಾಲಕ ಪೆರಾಜೆ...
Ad Widget

ಅಜ್ಜಾವರ : ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲ, ಅಜ್ಜಾವರ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಶಂಕರ ಭಾರತೀ ವೇದ ಪಾಠಶಾಲೆ ಅಜ್ಜಾವರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮಾರ್ಚ್ 13ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಷಮರ್ಧಿನಿ ದೇವಸ್ಥಾನ ಧರ್ಮದರ್ಶಿ ಭಾಸ್ಕರ ಬಯಂಬು ನೆರವೇರಿಸಿದರು.ಅಜ್ಜಾವರ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲದ...

ಶುಭ ವಿವಾಹ : ಪ್ರವೀಣ್ – ವನ್ಯಶ್ರೀ

ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಕಲ್ಲಾಜೆ ಶ್ರೀಮತಿ ಮೋಹಿನಿ ಮತ್ತು ದಿ|| ಪುರುಷೋತ್ತಮ ಗೌಡರ ಪುತ್ರಿ ವನ್ಯಶ್ರೀ ರವರ ವಿವಾಹವು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಬಟ್ರಮಕ್ಕಿ-ಅಮೈ ಶ್ರೀಮತಿ ಚಂದ್ರಾವತಿ ಮತ್ತು ದಿ|| ರಾಮಣ್ಣ ಗೌಡರ ಪುತ್ರ ಪ್ರವೀಣ್ ರವರೊಂದಿಗೆ ಮಾ.25 ರಂದು ವರನ ಮನೆಯಲ್ಲಿ ನಡೆಯಿತು.

ಟಾಟಾ ಐ.ಪಿ.ಎಲ್ 2022 ರ ಕ್ರ್ಯೂ ಮೆಂಬರ್ ಆಗಿ ಹರ್ಷಿತ್ ಪಡ್ರೆ ನೇಮಕ

ಮಾ.26 ರಿಂದ ಪ್ರಾರಂಭವಾಗಲಿರುವ ಟಾಟಾ ಐ.ಪಿ.ಎಲ್ ಸೀಸನ್ 15 ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು, ಇದರ ಕ್ರ್ಯೂ ಮೆಂಬರ್ ಆಗಿ ಟಿ.ವಿ ನಿರೂಪಕ ಹಾಗೂ ಪತ್ರಕರ್ತರಾದ ಹರ್ಷಿತ್ ಪಡ್ರೆ ಅವರು ಸ್ಟಾರ್ ಸ್ಪೋರ್ಟ್ಸ್ ಗೆ ನೇಮಕಗೊಂಡಿದ್ದಾರೆ.ಈ ಬಾರಿಯ ಐ.ಪಿ.ಎಲ್ ನ ಎಲ್ಲಾ ಪಂದ್ಯಗಳು ಪುಣೆ ಹಾಗೂ ಮುಂಬೈ ನಲ್ಲಿ ನಡೆಯಲಿದ್ದು, ಹರ್ಷಿತ್ ಪಡ್ರೆ ಅವರು ಮುಂಬೈ...

ಗುತ್ತಿಗಾರು : ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಸ್ಪೇಷಲ್ ಆಫರ್ – ರೂ 300 ಮೌಲ್ಯದ ಎರಡು ಬಟ್ಟೆ ಖರೀದಿಗೆ ಒಂದು ಉಚಿತ

ಗುತ್ತಿಗಾರಿನ ಕೆಳಗಿನ ಪೇಟೆಯಲ್ಲಿರುವ ಕರುವಜೆ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಸ್ಪೇಷಲ್ ಆಫರ್ ಆರಂಭಗೊಂಡಿದ್ದು 15 ದಿನಗಳ ಕಾಲ ಮಹಿಳೆಯರ, ಪುರುಷರ, ಮಕ್ಕಳ ಅತ್ಯಾಕರ್ಷಕ ಶೈಲಿಯ ಉಡುಪುಗಳ ಖರೀದಿಗೆ ವಿಶೇಷ ದೊರೆಯಲಿದೆ. 300 ರೂಪಾಯಿ ಮೌಲ್ಯದ ಎರಡು ಬಟ್ಟೆ ಖರೀದಿಗೆ ಒಂದು ಉಚಿತ ಬಟ್ಟೆ ನೀಡುತ್ತೇವೆ. 15 ದಿನಗಳ ಕಾಲ ಈ...

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಆದ್ಯಾ ಬಾಬ್ಲುಬೆಟ್ಟು

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2021ರಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆದ್ಯಾ ಬಾಬ್ಲುಬೆಟ್ಟು ಡಿಸ್ಟಿಂಕ್ಷನ್ (94% ) ಪಡೆದು ಉತ್ತೀರ್ಣಳಾಗಿರುತ್ತಾಳೆ. ಅಶ್ವಿನ್ ಬಾಬ್ಲುಬೆಟ್ಟು ಮತ್ತು ರಶ್ಮಿ ದಂಪತಿಗಳ ಪುತ್ರಿಯಾಗಿರುವ ಈಕೆ ಕಡಬದ ಶ್ರೀಮತಿ ಮಾನಸ ರೈ ಇವರ ಶಿಷ್ಯೆ ಯಾಗಿರುತ್ತಾಳೆ. ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ ದ 6ನೇ ತರಗತಿ ವಿದ್ಯಾರ್ಥಿನಿ.

ಎಲಿಮಲೆ ಶಾಲೆಗೆ ದಾನಿಗಳು ನೀಡಿದ ಕ್ರೀಡಾ ಸಲಕರಣೆಗಳ ಉದ್ಘಾಟನೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 30 ನೇ ಸಮಾರಂಭ ಎಲಿಮಲೆ ಶಾಲೆಯಲ್ಲಿ ನಡೆಯಿತು.‌ ಅಭಿಯಾನದ ಬಗ್ಗೆ ಸಂಘಟಕರಾದ ಉನೈಸ್ ಪೆರಾಜೆಯವರು ಮಾಹಿತಿಯನ್ನು ನೀಡಿದರು. ಎಲಿಮಲೆ ಶಾಲೆಗೆ ಸುನಿತಾ ಮಹೇಶ್ವರಿ, ಅರ್ಜುನ್ ಕಲ್ಯಾಣ್ ಪುರ ನೀಡಿದ ಜಾರುಬಂಡಿ ಮತ್ತು ಆಟೋಪ ಕರಣಗಳನ್ನು...

ಸುಳ್ಯ : ರೋಟರಿ ಕ್ಲಬ್ ವತಿಯಿಂದ ಸವಣೂರು ಸೀತಾರಾಮ ರೈ ಗಳಿಗೆ ಸನ್ಮಾನ

ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ವಿದ್ಯಾರಶ್ಮಿಸಮೂಹ ಸಂಸ್ಥೆಗಳ ಸಂಸ್ಥಾಪಕ, ರೋ. ಸೀತಾರಾಮ ರೈಯವರಿಗೆ ಸುಳ್ಯ ರೋಟರಿ ಕ್ಲಬ್, ರೋಟರಿ ಸುಳ್ಯಸಿಟಿ ಮತ್ತು ಇನ್ನರ್ ವೀಲ್ ವತಿಯಿಂದ ಮಾ.23ರಂದು ಸನ್ಮಾನಿಸಲಾಯಿತು. ರೋಟರಿ ನಿಯೋಜಿತ ಅಧ್ಯಕ್ಷ ರೊ.ಚಂದ್ರಶೇಖರ ಪೇರಾಲ್ ಅಭಿನಂದನಾ ಭಾಷಣ ನೆರವೇರಿಸಿದರು. ಪದ್ಮಶ್ರೀ ಪುರಸ್ಕೃತ ರೊ. ಗಿರೀಶ್ ಭಾರಧ್ವಜ್ ಮಾತನಾಡಿದರು. ರೋಟರಿ ಸಿಟಿ ಅಧ್ಯಕ್ಷ...

ಕುಕ್ಕೆ ಸುಬ್ರಹ್ಮಣ್ಯ :- ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ

ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರು ಮಾ.23 ರಂದು ತಮ್ಮ ಸ್ನೇಹಿತರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಶಿಷ್ಠಾಚಾರ ವಿಭಾಗದ ಜಯರಾಮ್ ರಾವ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ತನ್ನ ಊರು ಉಡುಪಿಯ ಕಾಪು ಜಾತ್ರೆಗೆ...
Loading posts...

All posts loaded

No more posts

error: Content is protected !!