ಮರ್ಕಂಜ: ವಿಶೇಷ ಚೇತನ ಬಾಲಕನಿಗೆ ಸೋಲಾರ್ ಲ್ಯಾಂಪ್ ಹಸ್ತಾಂತರ

ಮರ್ಕಂಜ ಗ್ರಾಮದ ವಿಶೇಷ ಚೇತನ ಬಾಲಕನಿಗೆ ಸೆಲ್ಕೋ ಸೋಲರ್ ವತಿಯಿಂದ 10 ಸಾವಿರ ಮೌಲ್ಯದ 2 ದೀಪದ ಸೋಲರ್ ಲ್ಯಾಂಪ್ ಹಸ್ತಾಂತರಿಸಲಾಯಿತು. ಅದರಲ್ಲಿ 5 ಸಾವಿರ ಸೆಲ್ಕೋ ಸೋಲರ್ ಸಂಸ್ಥೆಯ ವತಿಯಿಂದ ಉಚಿತವಾಗಿದ್ದು ಉಳಿದ 5 ಸಾವಿರ ಊರಿನ ಸಹೃದಯಿ ಬಂದುಗಳು ನೀಡಿ ಸಹಕರಿಸುವಂತೆ ಮಿತ್ತಡ್ಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಸಂದ್ಯಾದೋಳ ಇವರಲ್ಲಿ ತಿಳಿಸಿದಾಗ ಇವರು...

ಕೊಲ್ಲಮೊಗ್ರು :- ಬೃಹತ್ ನದಿ ಸ್ವಚ್ಛತಾ ಅಭಿಯಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ.08 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ನದಿ ಸ್ವಚ್ಚತಾ ಅಭಿಯಾನ ನಡೆಯಿತು.ಬೆಳಿಗ್ಗೆ 9:00 ಗಂಟೆಗೆ ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ...
Ad Widget

ಶ್ರೀ ಕೇಶವಕೃಪಾದಲ್ಲಿ ಸಂಸ್ಕಾರ ವಾಹಿನಿ ಶಿಬಿರ ಸಮಾರೋಪ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಸಂಸ್ಕಾರ ವಾಹಿನಿ ಶಿಬಿರದಸಮಾಪನಾ ಸಮಾರಂಭವು ದಿನಾಂಕ ೦೯-೦೫-೨೦೨೨ ರಂದು ಸುಳ್ಯದ ಹಳೆಗೇಟಿನ ವಿದ್ಯಾನಗರದ ಶ್ರೀ ಕೇಶವಕೃಪಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ಭಟ್ಶಿವನಿವಾಸ ವಹಿಸಿದ್ದರು. ಸಪಾಮನಾ ಮುಖ್ಯ ಭಾಷಣವನ್ನು ವೇ| ಮೂ| ಅಭಿರಾಮ ಭಟ್ ಸರಳಿಕುಂಜ ಮಾತನಾಡುತ್ತಾ ಹಣ ಸಂಪಾದನೆಯೊಂದೇ ಜೀವನದ...

ಹರಿಹರ ಪಲ್ಲತ್ತಡ್ಕ :- ರಕ್ತದಾನ ಶಿಬಿರ

ವಿವೇಕ ಜಾಗೃತ ಬಳಗ, ಹರಿಹರ ಪಲ್ಲತ್ತಡ್ಕ-ಸುಬ್ರಮಣ್ಯ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಕಾರದೊಂದಿಗೆ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೇ.08 ರಂದು ರಕ್ತದಾನ ಶಿಬಿರ ನಡೆಯಿತು.ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ ಅವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿ...

ಸಂಪಾಜೆ ಹಾಲು ಸೊಸೈಟಿ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ – ಉಪಾಧ್ಯಕ್ಷರಾಗಿ ಉದಯ ಕುಮಾರ್ ಕೆ ಸಿ ಅಯ್ಕೆ

ದ.ಕ. ಸಂಪಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ 2022-27 ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಉದಯ ಕುಮಾರ್ ಕೆ ಸಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ಕಲ್ಲುಗುಂಡಿಯಲ್ಲಿ ಈ ವರ್ಷದಿಂದ ಫಾತಿಮಾ ಮಹಿಳಾ ಶರೀಅತ್ ಕಾಲೇಜು ಆರಂಭ

ಪಿ.ಯು.ಸಿ ಕೋರ್ಸ್ ಜೊತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಪಡಿಸಿದ ಪಾಳಿಲಾ '' ಬಿರುದು ನೀಡುವ ಶರೀಅತ್ ಕಾಲೇಜು ಕಲ್ಲುಗುಂಡಿ ಜುಮಾ ಮಸೀದಿಯನ್ನು ಕೇಂದ್ರೀಕರಿಸಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವುದರ ಕುರಿತು ಮೇ.7 ರಂದು ಪತ್ರಿಕಾ ಗೋಷ್ಠಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ತಾಜಾ ಮಹಾಮ್ಮದ್ ಮಾತಾಡಿ, ಶಿಕ್ಷಣ ರಂಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ...

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷಾ ನಕ್ಷತ್ರದ ಅಂಗವಾಗಿ ದೇವಾಲಯದಲ್ಲಿ ಭಕ್ತ ಸಾಗರ

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಆಶ್ಲೇಷಾ ನಕ್ಷತ್ರವಾಗಿರುವುದರಿಂದ ಶ್ರೀ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಮುಂಜಾನೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಕಾಯುತ್ತಿದ್ದಾರೆ. ದೇವಳದ ಮುಂಭಾಗದಲ್ಲಿ ರಥಬೀದಿಯವರೆಗೆ 2 ಸಾಲಿನಲ್ಲಿ ಭಕ್ತರನ್ನು ಕಾಣಬಹುದು. ಎಂದಿನಂತೆ ಮುಂಜಾನೆ 6.00ರಿಂದ ಪೂಜೆಗಳು ಪ್ರಾರಂಭಗೊಂಡಿದ್ದು,ಮುಂಜಾನೆಯ ಪೂಜೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ವರದಿ: ಅನನ್ಯ ಹೆಚ್...

ಐವರ್ನಾಡಿನಲ್ಲಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಅನಾವರಣ ; ಸಾಮಾಜಿಕ ಪರಿವರ್ತನೆ ತಂದ ದಿ.ಬಾಲಕೃಷ್ಣ ಗೌಡರ ಮಾರ್ಗದರ್ಶದಂತೆ ಯುವ ಜನತೆ ನಡೆಯಬೇಕಿದೆ – ಡಿ.ವಿ.ಸದಾನಂದ ಗೌಡ

ಸಮಾಜ ಕಟ್ಟಿದವರು, ಸಮಾಜಕ್ಕೆ ಬೆಳಕಾದವರನ್ನು ಸಮಾಜ ಎಂದೂ ನೆನಪಿಸುತ್ತದೆ. ಅದರಂತೆ ಆದರ್ಶ ಪುರುಷರ ಪುತ್ಥಳಿ ನಿರ್ಮಾಣವಾಗಿದೆ. ಆದರ್ಶ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದ, ಹೊಸ ತಲೆಮಾರಿಗೆ ಪ್ರೇರಣೆಯಾದ ದಿ. ಎನ್.ಎಂ.ಬಾಲಕೃಷ್ಣ ಗೌಡ ಅವರು ಸದಾ ಸ್ಮರಣೀಯರು ಇವರ ಮಾರ್ಗದರ್ಶನದಂತೆ ಯುವ ಜನತೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಐವರ್ನಾಡಿನ...

ಸೇವಾಜೆ: ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರಿಂದ ಶ್ರಮದಾನ

ಸ ಕಿ ಪ್ರಾ ಶಾಲೆ ಸೇವಾಜೆಯಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರ ಸಹಕಾರದೊಂದಿಗೆ ಮೇ.07ರಂದು ಶ್ರಮದಾನ ನಡೆಯಿತು. ಶಾಲಾ ಆವರಣ ಗೋಡೆಗೆ ಅವಶ್ಯವಾಗಿರುವ ಮಣ್ಣನ್ನು ಸತತ ಮೂರನೇ ಬಾರಿ ಹೊತ್ತು ಸಮತಟ್ಟು ಮಾಡಿ ಶ್ರಮದಾನದ ಮೂಲಕ ಸಹಕರಿಸಿ ಶಾಲೆ ಹಾಗೂ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯದಲ್ಲೂ ಶ್ರಮದಾನದ ಮೂಲಕ ಸಹಕರಿಸಿರುತ್ತಾರೆ....

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಜರುಗಿತು. ಈ ಸಂದರ್ಭದಲ್ಲಿ ಜನರು ತಾಲೂಕು ಕಚೇರಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ತಿಳಿದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು...
Loading posts...

All posts loaded

No more posts

error: Content is protected !!