ಸುಳ್ಯ : ಸ್ವರ್ಣಶ್ರೀ ಸೊಸೈಟಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗಿನ ಮೊದಲನೇ ಮಹಡಿಯಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸುಳ್ಯ ಇದರ ವತಿಯಿಂದ 2024ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ದನ ದೋಳ ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕರಾದ ಮಹೇಶ್ ಮೇರ್ಕಜೆ, ಡಾ. ಪುರುಷೋತ್ತಮ...

ಪಶು ಆಸ್ಪತ್ರೆ ಮತ್ತು ಚಿಕಿತ್ಸಾಲಯದಲ್ಲಿ ಉಚಿತವಾಗಿ ಮೇವಿನ ಬೀಜ ಲಭ್ಯ

2023-24ನೇ ಸಾಲಿನ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಆಸಕ್ತ ರೈತರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಗಳನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಆಫ್ರಿಕನ್ ಉದ್ದ ತಳಿಯ ಜೋಳ, ಹೈಬ್ರಿಡ್ ಜೋವಾರ್,ಮೇವಿನ...
Ad Widget

ಬಾಳುಗೋಡು : ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು-ಸುಳ್ಯ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಮಂಗಳೂರು, ಡಾ| ಪಿ.ದಯಾನಂದ ಪೈ ಮತ್ತು ಡಾ| ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬಾಳುಗೋಡು, ಗ್ರಾಮ ಪಂಚಾಯತ್ ಹರಿಹರ...

ಸುಬ್ರಹ್ಮಣ್ಯ :  ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಸತಿ ಗೃಹದ ಮಾಲಕ

ಸುಮಾರು ಐದು ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಾವೇರಿ ವಸತಿಗೃಹ ಸುಬ್ರಹ್ಮಣ್ಯ ದಲ್ಲಿ ಯಾತ್ರಿಕರು  ಮರೆತು ಬಿಟ್ಟು ಹೋಗಿದ್ದು ಅದನ್ನು ವಸತಿ ಗೃಹದ ಮಾಲಕ ನಾಣಯ್ಯ (ನಾಣಿ ) ಅವರು ಸುಬ್ರಹ್ಮಣ್ಯ   ಠಾಣಾ ಧಿಕಾರಿಯವರ ಸಮ್ಮುಖದಲ್ಲಿ ಸರ ಕಳಕೊಂಡವರಿಗೆ ಹಸ್ತಾಂತರಿಸಿದರು. ವಸತಿ ಗೃಹದ ಮಾಲಕರ ಪ್ರಾಮಾಣಿಕತೆಯನ್ನು ಠಾಣಾಧಿಕಾರಿಯವರು ಶ್ಲಾಘಿಸಿದರು.

ಸುಳ್ಯ ಜಾತ್ರೋತ್ಸವದಲ್ಲಿ ಹಿಂದು ವ್ಯಾಪರಿಗಳಿಗೆ ಸಿಮೀತವಾಗಿ ಅನುಮತಿ ಕೋರಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ.

ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದ ಮೈದಾನದಲ್ಲಿ ವ್ಯಾಪಾರ ನಡೆಸಲು ಹಿಂದೂ ಬಾಂಧವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿ.ಚ್.ಪಿ ಸುಳ್ಯ ನಗರ ಅಧ್ಯಕ್ಷರು ಉಪೇಂದ್ರ ಕಾಯರ್ತೋಡಿ,ವಿ.ಚ್.ಪಿ...

ದೇವಚಳ್ಳ : ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ

ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಇಲಾಖೆ , ಭಾರತೀಯ ಅಂಚೆ ಇಲಾಖೆ ಪುತ್ತೂರು, ಚಿರಾಯು ಸ್ಪೋರ್ಟ್ಸ್ & ಅರ್ಟ್ಸ್ ಕ್ಲಬ್ ಮಾವಿನಕಟ್ಟೆ, ಅಮರ ಸಂಘಟನಾ ಸಮಿತಿ, ರಿಜಿಸ್ಟ್ರಾರ್ ಸುಳ್ಯ, ಗ್ರಾಮವನ್ ಮಾವಿನಕಟ್ಟೆ ಮತ್ತು ಒಡಿಯೂರು ಸ್ವಸಹಾಯ ಸಂಘ ದೇವಚಳ್ಳ ಇವರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ...

ಕುಕ್ಕೆಸುಬ್ರಹ್ಮಣ್ಯ : ಡಿ.12 ರಂದು ಲಕ್ಷದೀಪೋತ್ಸವ – ಅಲಂಕಾರಗೊಂಡ ಶ್ರೀ ಕ್ಷೇತ್ರ – ಲಕ್ಷ ಹಣತೆ ಪ್ರಜ್ವಲನಕ್ಕೆ ಸಿದ್ಧತೆ

ಸುಬ್ರಹ್ಮಣ್ಯ: ನಾಗಾರಾಧನೆಯ ಮೂಲ ತಾಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ. 12 ರಂದು ಲಕ್ಷದೀಪೋತ್ಸವ ನೆರವೇರಲಿದೆ. ಲಕ್ಷದೀಪೋತ್ಸವದೊಂದಿಗೆ ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆರಂಭವಾಗಲಿದೆ. ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ. ಬೆಳಗ್ಗೆ ದೈವಗಳ ಭಂಡಾರವು ದೇವರಗದ್ದೆಯ ದೈವಸ್ಥಾನದಿಂದ ಶ್ರೀ ದೇವಳಕ್ಕೆ ಆಗಮಿಸಲಿದೆ. ಸಂಜೆ ಶ್ರೀ ದೇವಳದಲ್ಲಿ ಅಂಕುರಪೂಜೆ ನಡೆದ ಬಳಿಕ ಆದಿ ಸುಬ್ರಹ್ಮಣ್ಯದಲ್ಲಿ ರಂಗಪೂಜೆ ನೆರವೇರಲಿದೆ....

ಸುಬ್ರಹ್ಮಣ್ಯ : ಜಾತ್ರೋತ್ಸವದ ಅಂಗವಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪ ಷಷ್ಠಿ ಜಾತ್ರೋತ್ಸವ ಡಿ.11 ರಂದು ರಾಮ ಲಕ್ಷ್ಮಣ ಕೊಪ್ಪರಿಗೆ ಏರುವುದರ ಮೂಲಕ ಆರಂಭಗೊಂಡಿದ್ದು ಜಾತ್ರೋತ್ಸವಕ್ಕೆ ದೂರ ದೂರಗಳಿಂದ ಬರತಕ್ಕಂಥ ಭಕ್ತಾದಿಗಳಿಗೆ ಸ್ವಚ್ಛ ಪರಿಸರದಲ್ಲಿ ದೇವರ ದರ್ಶನ ಆಗಬೇಕು ಎನ್ನುವಂತ ಉದ್ದೇಶದಿಂದ ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ರವಿ ಸಮಾಜ ಸೇವಾ ಟ್ರಸ್ಟ್ ನವರು ಈ ದಿನ...

ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಪೋಷಕರ ದಿನಾಚರಣೆ

ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಡಿ. 10 ರಂದು ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಇಂದಿರೇಶ ಗುಡ್ಡೆ ಇವರು ದೀಪ ಬೆಳಗಿಸುವುದರ ಮೂಲಕ ಪೋಷಕರ ದಿನಾಚರಣೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜ್ಞಾನದೀಪ ಶಾಲೆಯ ಮಾತೃಭಾರತಿ ಸಂಸ್ಥೆಯ ಅಧ್ಯಕ್ಷರಾದ ಶಶಿಪ್ರಭ ಚಿದ್ಗಲ್ಲು, ಸಂಯೋಜಕಿಯವರಾದ ವಿದ್ಯಾ ಸರಸ್ವತಿ, ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು, ಶಿಕ್ಷಕ-ರಕ್ಷಕ...

ಕಡೆಪಾಲ ಬಳಿ ಕಂಟೈನರ್ ಪಲ್ಟಿ

ಸುಳ್ಯ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿ ಸಮೀಪ ಕಡೆಪಾಲ ಬಳಿ ಮಾಣಿ ಮೈಸೂರು ಹೆದ್ದಾರಿ ಬದಿಯಲ್ಲಿ ಪಲ್ಟಿಯಾದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!