ಸಂಪಾಜೆ – ಕಲ್ಲುಗುಂಡಿ ಗಾಳಿ ಮಳೆಗೆ  ವಿವಿಧೆಡೆ ಹಾನಿ

ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿದ ಘಟನೆ ಸಂಪಾಜೆ - ಕಲ್ಲುಗುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ.ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ...

ನಿರಂತರವಾಗಿ ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ನಗರ ಪಂಚಾಯತ್. ಕಟ್ಟೆ ಬಳಿಯಲ್ಲಿ ಕಾಮಗಾರಿ ಆರಂಭ.

ಸುಳ್ಯ: ಸುಳ್ಯ ನಗರದ ಹೆಬ್ಬಾಗಿಲು ಸುಳ್ಯ ಮಾಣಿ ಮೈಸೂರು ರಸ್ತೆಯ ಚೆನ್ನಕೇಶವ ದೇವರು ರಥಬೀದಿಗೆ ಆಗಮಿಸಿದ ಸಂದರ್ಭದಲ್ಲಿ ಕುಳಿತುಕೊಳ್ಳುವ ಕಟ್ಟೆಯ ಬಳಿಯಲ್ಲಿ ನಿರಂತರವಾಗಿ ನೀರು ಹೊರ ಬರುತ್ತಿದ್ದು ವಾಹನ ಸವಾರರಿಗೆ ಕಿರಿ ಉಂಟಾಗುತ್ತಿತ್ತು ಇದನ್ನು ಸುಳ್ಯ ಸೇರಿದಂತೆ ರಾಜ್ಯದ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದು ಇದೀಗ ಎಲ್ಲಾ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ತುರ್ತಾಗಿ ಕಾಮಗಾರಿ...
Ad Widget

ಉಬರಡ್ಕ : ಸಹಕಾರಿ ಸಂಘದ ನೂತನ ಸಿರಿ ಸಹಕಾರ ಸೌಧ ಲೋಕಾರ್ಪಣೆ

ಉಬರಡ್ಕ ಮಿತ್ತೂರು ಪ್ರಾ.ಕೃ. ಪ.ಸ.ಸಂಘದ ನೂತನ ಕಟ್ಟಡ ಸಿರಿ ಸಹಕಾರ ಸೌಧ ಇಂದು ಲೋಕಾರ್ಪಣೆಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆಗೊಳಿಸಿದರು. ಗೋದಾಮು ಕಟ್ಟಡವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಎಸ್.ಅಂಗಾರ  ಉದ್ಘಾಟಿಸಿದರು.ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು. ಈ ಸಂದರ್ಭದಲ್ಲಿ  ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ...

ಸುಳ್ಯದ ಶ್ರೀ ರಾಮ ವೆಜೀಟೇಬಲ್ಸ್ ಮುಂಭಾಗ ಕಾರು-ರಿಕ್ಷಾ-ಬೈಕ್ ನಡುವೆ ಪರಸ್ಪರ ಡಿಕ್ಕಿ, ಬೈಕ್ ಸವಾರನ ಕಾಲಿಗೆ ಗಾಯ

ಸುಳ್ಯ: ಶ್ರೀರಾಮ ವೆಜಿಟೇಬಲ್ಸ್ ಮುಂಭಾಗದಲ್ಲಿ  ಕಾರು ರಿಕ್ಷಾ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲಿನ ಬೆರಳುಗಳಿಗೆ ಗಾಯಗಳಾದ ಘಟನೆ ವರದಿಯಾಗಿದೆ.ಕಲ್ಲುಮುಟ್ಟು ನಿವಾಸಿ ದಿಲೀಪ್ ಎಂಬಾತ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಕಾರು ಮತ್ತು ರಿಕ್ಷಾ ಪರಸ್ಪರ ಡಿಕ್ಕಿ ಹೊಡೆಯಿತು.ಪರಿಣಾಮ ಬೈಕ್‌ ಸವಾರನ ಕಾಲಿನ ಮೂರು ಬೆರಳುಗಳು ತುಂಡಾಗಿದ್ದುಗಾಯಾಳುವನ್ನು...

ಸುಳ್ಯಕ್ಕೆ  ಗಗನ ಕುಸುಮವಾಗಲಿದೆಯಾ 110 ಕೆ.ವಿ – 2025 ನವೆಂಬರ್‌ಗೆ ಪೂರ್ಣಗೊಳ್ಳುವುದೇ ಕಾಮಗಾರಿ ?

ಸುಳ್ಯ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 110 ಕೆ.ವಿ  ಕಾಮಗಾರಿ ಆರಂಭಗೊAಡಿದ್ದು ಇದೀಗ ಮತ್ತೆ ಅಡೆ ತಡೆಗಳು ವಿಘ್ನಗಳು ಎದುರಾಗಿವೆ.ಸುಳ್ಯದ 110 ಕೆ.ವಿ.ಯು ಕೆ.ಪಿ.ಟಿ.ಸಿ.ಎಲ್. ಮೂಲಕ  ಕೆಲಸ ಪ್ರಾರಂಭಿಸಿ ಈ ಯೋಜನೆಗೆ  ವಿದ್ಯುತ್ ತಂತಿಗಳು ಹಾದು ಹೋಗಲು ಸುಮಾರು 89 ಟವರುಗಳ ನಿರ್ಮಾಣವಾಗಬೇಕಿದೆ. ಆದರೆ ಇದೀಗ  87ಟವರ್‌ಗಳ ನಿರ್ಮಾಣಕ್ಕೆ ತೆರಳಿದಾಗ ಅಡೆತಡೆಗಳು ಉಂಟಾಗಿದ್ದು ಕೇವಲ 2ಟವರ್‌ಗಳ...

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಅರಿವು ಕೇಂದ್ರ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಮೇ.02 ರಿಂದ 16 ರವರೆಗೆ...

ಗುತ್ತಿಗಾರು: ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮಣಿಯಾನ ಪುರುಷೋತ್ತಮ ರವರಿಗೆ ಗೌರವ     

  ನಿವೃತ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮ ರವರನ್ನು ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮೇ 2ರಂದು ಸನ್ಮಾನಿಸಿ ಗೌರವಿಸಲಾಯಿತು.                        ಗುತ್ತಿಗಾರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಧನಪತಿಯವರು ಗೌರವಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದರು                  ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ ಹೊಸೋಳಿಕೆ...

ಸುಬ್ರಹ್ಮಣ್ಯ: ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ರಾಶಿ ಮಾಡುವಾಗ ನವ ವಿವಾಹಿತ ಸಿಡಿಲು ಬಡಿದು ಮೃತ್ಯು.

ಸುಬ್ರಹ್ಮಣ್ಯ: ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಮೇ .3 ರಂದು ಸಂಭವಿಸಿದೆ. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತಪಟ್ಟವರು.ಮಳೆ ಆರಂಭಕ್ಕೂ ಮೊದಲು ಗುಡುಗು ಸಹಿತ ಗಾಳಿ ಬೀಸುತ್ತಿತ್ತು. ಮನೆಯಂಗಲದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ಸೋಮಸುಂದರ್ ಅವರು ರಾಶಿ ಮಾಡುವ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು ಕೂಡಲೇ...

ಯೇಸುರಾಜ್ ಹಿಂದು ಧರ್ಮದವರು; ಆಯುಕ್ತರ ಸ್ಪಷ್ಟನೆ

ಸುಬ್ರಹ್ಮಣ್ಯ, ಮೇ 2: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಗೊಂಡಿರುವ ಎಸ್.ಜೆ.ಯೇಸುರಾಜ್ ಹಿಂದು ಧರ್ಮದವರು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.ಯೆಸ್.ಜೆ.ಯೇಸುರಾಜ್ ಅವರು ದಿನಾಂಕ 17.01.2005ರಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೌಕರರಾಗಿ ಆಯ್ಕೆ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಇವರ ಶಾಲಾ ದಾಖಲಾತಿ ಮತ್ತು ನೇಮಕಾತಿ ಸಂದರ್ಭದಲ್ಲಿ ಹಾಜರು...

ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ನೇತೃತ್ವದಲ್ಲಿ ಚಾವಡಿ ಸಭೆ

ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ನೇತೃತ್ವದಲ್ಲಿ ಉಪ್ಪುಂದ ಜನತಾ ಕಾಲನಿಗೆ ಭೇಟಿಮಾಡಿ ಚಾವಡಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳಿ ಅವರ ಪತ್ನಿ ಅನುರಾಧ, ಪಕ್ಷದ ಜಿಲ್ಲಾ ಎಸ್ ಸಿ ಮೊರ್ಚಾ ಅಧ್ಯಕ್ಷ  ಅಶೋಕ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಬೈಂದೂರು, ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ...
Loading posts...

All posts loaded

No more posts

error: Content is protected !!