ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ನಿಧನ

ಸುಳ್ಯದ ಹಿರಿಯ ಉದ್ಯಮಿಯಾದ ಜಾಲ್ಸೂರು ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌(9೦ ವ.) ರವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್, ಸೊಸೆ, ಮೊಮ್ಮಕ್ಕಳನ್ನು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಸಭಾಭವನಕ್ಕೆ ಗುದ್ದಲಿ ಪೂಜೆ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 30 ಲಕ್ಷ  ವೆಚ್ಚದಲ್ಲಿ ಸಭಾಭವನ ನಿರ್ಮಾಣಕ್ಕೆ ಆಡಳಿತ ಮಂಡಳಿಯ ನಿರ್ದೇಶಕ ಗಣಪತಿ ಭಟ್ ಗುದ್ದಲಿ ಪೂಜೆಯ ದೀಪ ಬೆಳಗಿಸಿ, ಉಪಾಧ್ಯಕ್ಷ ಜತ್ತಪ್ಪ ಮಾಸ್ತರ್ ಅಳಿಕೆ ಗುದ್ದಲಿ ಪೂಜೆ ನೆರವೇರಿಸಿದರು.ಕಾಲೇಜಿನ ಸಂಚಾಲಕರು ಕೆ ಆರ್ ಗಂಗಾಧರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಆರ್ ಪದ್ಮನಾಭ ಮತ್ತು ಸದಸ್ಯರಾದ, ಪಿ.ಎನ್.ಗಣಪತಿಭಟ್ಜನಾರ್ದನ ಅಡ್ಕಬಳೆ, ಅಬ್ದುಲ್ಲಾ...
Ad Widget

ಚಿನ್ನದ ಸರ ಕಳೆದುಹೋಗಿದೆ

ಸ್ಟೇಟ್ ಬ್ಯಾಂಕ್ - ಧರ್ಮಸ್ಥಳ  ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬಿ ಸಿ ರೋಡ್ , ಧರ್ಮಸ್ಥಳ ನಡುವೆ ಮಗುವಿನ ಚಿನ್ನದ ಸರ ಕಳೆದುಹೋಗಿರುತ್ತದೆ.‌ ಸಿಕ್ಕಿದವರು ಹಿಂತಿರುಗಿಸುವಂತೆ (ಭುವನ್ 9008644352) ಮನವಿ ಮಾಡಿದ್ದಾರೆ.‌

ಪಂಜ : 15 ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ

ಶ್ರೀ ಶಾರದಾಂಬ ಭಜನಾ ಮಂಡಳಿ  ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಸುಳ್ಯ ತಾಲೂಕು,  ಪಂಜ ಮತ್ತು ನಿಂತಿಕಲ್ಲು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 15ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ ಮೇ.5 ರಂದು ನಡೆಯಿತು.ಪಾಲ್ತಿಮಾರ್ ಶ್ರೀ ಮೂಕಾಂಬಿಕ ಕ್ಷೇತ್ರದ...

ಸುಳ್ಯ : ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಹೂತು ಹೋದ ಲಾರಿ

ಸುಳ್ಯದ ಎಪಿಎಂಸಿ ಎದುರು ಭಾಗದಲ್ಲಿ ಪೈಪ್ ಲೈನ್ ಕಾಮಗಾರಿ ನಡೆದ ಜಾಗದಲ್ಲಿ ಲಾರಿಯೊಂದು ಹೂತು ಹೋದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬಳಿಕ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಇನ್ನೂ ಮಳೆ ಆರಂಭವಾದಾಗ ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಘನ ವಾಹನ ಚಾಲಕ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು...

ಪ್ರಗತಿ ಸ್ಟಡಿ ಸೆಂಟರ್‌ನ ಐದು ವಿದ್ಯಾರ್ಥಿನಿಯರು ಮೊಂಟೆಸರಿ ಶಿಕ್ಷಕಿಯಾಗಿ ಆಯ್ಕೆ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಂಟೆಸರಿ ಶಿಕ್ಷಕಿ ತರಬೇತಿಯ ೫ ವಿದ್ಯಾರ್ಥಿನಿಯರು ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ. ಮಾಡಾವು ನಿವಾಸಿಯಾದ ಶ್ರೀ ವಿಶ್ವನಾಥ ಮೊಗೇರ ಹಾಗೂ ಬೇಬಿ ದಂಪತಿಗಳ ಪುತ್ರಿಯಾದ ಶ್ರಾವ್ಯ ಇವರು ಮತ್ತು ಪುತ್ತೂರಿನ ದರ್ಬೆ ನಿವಾಸಿಯಾದ ಬಿ. ಜಗದೀಶ್ ಆಚಾರ್ಯ ಮತ್ತು ಶ್ರೀಮತಿ ಸರಿತಾ ದಂಪತಿಗಳ ಪುತ್ರಿಯಾದ ನಿಹಾರಿಕ ಇವರು ಶ್ರೀ ರಾಮಕೃಷ್ಣ ಸೇವಾ...

ಉಬರಡ್ಕ: ಕುತ್ತಮೊಟ್ಟೆಯಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ.

ಉಬರಡ್ಕ: ಉಬರಡ್ಕ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ ತಗುಲಿದ ಘಟನೆ ಇದೀಗ ವರದಿಯಾಗಿದೆ . ಘಟನೆ ನಡೆದ ಸ್ಥಳಕ್ಕೆ ಇದೀಗ ಅಗ್ನಿಶಾಮಕ ದಳವು ತೆರಳಿದ್ದು ಪಿಕಪ್ ಗೆ ಹೊತ್ತಿದ ಬೆಂಕಿಯನ್ನು ನಂದಿಸಲಾಗಿದೆ , ಯಾವ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು ಎಂಬುವುದರ ಮಾಹಿತಿ ಇನ್ನಷ್ಟೆ ಬರಬೇಕಿದ್ದು ಈ ಕುರಿತ...

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನವೈಭವದಿಂದ ಜರುಗಿದ ಮಹಾವಿಷ್ಣುಮೂರ್ತಿ ದೈವದ ನಡಾವಳಿ.

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನಿವಾರ ನಡೆದ ವೈಭವದ ಮಹಾವಿಷ್ಣುಮೂರ್ತಿ ದೈವದ ನಡಾವಳಿಯೊಂದಿಗೆ ಮೂರು ದಿನಗಳ ಜಾತ್ರೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಜಾತ್ರೋತ್ಸವದ ಕೊನೆಯ ದಿನವಾದ ಶನಿವಾರ ದೇಗುಲದ ಬಡಗು ದಿಕ್ಕಿನಲ್ಲಿರುವ ವಿಷ್ಣುಮೂರ್ತಿ ದೈವದ ಕಟ್ಟೆಯ ಸನಿಹ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಿತು. ಈ ವೇಳೆ ಅಸಂಖ್ಯಾತ ಭಕ್ತಾದಿಗಳು ಹಾಜರಿದ್ದು ದೈವದ ಪ್ರಸಾದ ಸ್ವೀಕರಿಸಿದರು....

ಎನ್ನೆಂಸಿ; ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ.

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಮೇ 03 ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗ ಆಯೋಜಿಸಿದ "ವರ್ಟೆಕ್ಸ್ 6.0" ರಾಷ್ಟ್ರ ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ...

ಸಂಪಾಜೆ – ಕಲ್ಲುಗುಂಡಿ ಗಾಳಿ ಮಳೆಗೆ  ವಿವಿಧೆಡೆ ಹಾನಿ

ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿದ ಘಟನೆ ಸಂಪಾಜೆ - ಕಲ್ಲುಗುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ.ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ...
Loading posts...

All posts loaded

No more posts

error: Content is protected !!