- Friday
- August 14th, 2026
ಉಬರಡ್ಕದ ಹುಳಿಯಡ್ಕ ಎಂಬಲ್ಲಿ ಕಡೆವೆಯೊಂದು ಸಂಚರಿಸುತ್ತಿದ್ದ ಬೈಕ್ ಮೇಲೆ ಹಾರಿದ ಪರಿಣಾಮ ಬೈಕ್ ಸವಾರರು ಗಾಯಗೊಂಡು ಪಾರಾದ ಘಟನೆ ನ.28 ರ ಸಂಜೆ ವರದಿಯಾಗಿದೆ. ಉಬರಡ್ಕದ ಬಳ್ಳಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ನೀರು ಹಾಕಲೆಂದು ಸುಳ್ಯ ಕಡೆಯಿಂದ ಭಾನುಪ್ರಕಾಶ್ ಪೆರುಮುಂಡ ಮತ್ತು ಶಿವಪ್ರಸಾದ್ ಬಳ್ಳಡ್ಕ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹುಳಿಯಡ್ಕ ಎಂಬಲ್ಲಿ...
*ಶೀಘ್ರದಲ್ಲಿ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕ ಸ್ಥಾಪನೆ-ಶ್ರೀ ನಿರಂಜನ್ ಪೋಳ್ಯ* ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಲೋಗೋ ಅನಾವರಣ ಕಾರ್ಯಕ್ರಮ ನ.28ರಂದು ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿ ನೂತನ ಲೋಗೋ ಅನಾವರಣಗೊಳಿಸಿದರು. ದೇವಸ್ಥಾನದ...
ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ 'ಗಲ್ಫ್ ಅಡಿಟೋರಿಯಂ'ನ ಉದ್ಘಾಟನೆ 29ರಂದು ಪೂ.9ಕ್ಕೆ ನೆರವೇರಲಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದ್ರುಸ್ಸಾದಾತ್ ಅಸ್ಸಯ್ಯದ್ ಖಲೀಲುಲ್ ಬುಖಾರಿ ತಂಜಳ್ ಕಡಲುಂಡಿ ಅವರು ಆಡಿಟೋರಿಯಂ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನುಸಮಸ್ತ ಕೇರಳ ಜಂಇಯ್ಯತುಲ್...
ರಾಜ್ಯಾದ್ಯಂತ ಸರಕಾರ ತಂದೆ ತಾಯಿ ಇಲ್ಲದ ಮಕ್ಕಳಿಗೆ ಭವಿಷ್ಯ ರೂಪಿಸುವ ದೃಷ್ಟಿಯಿಂದ ದತ್ತು ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ದತ್ತು ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಇತರರನ್ನು ಉತ್ತೇಜಿಸಲು ಹಾಗೂ ಸ್ವೀಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಮತ್ತು ದತ್ತು ತೆಗೆದುಕೊಳ್ಳಲು ಪ್ರಭಾವಿತರಾಗಿರುವ ಈ ದೇಶದ ಜನರನ್ನು ಗುರುತಿಸಲು ಮತ್ತು ದತ್ತು ಸ್ವೀಕಾರದಮೂಲಕ ಬೆಳೆದ ಕುಟುಂಬಗಳನ್ನು ಗೌರವಿಸುವುದು ಹಾಗೂ ಶಾಶ್ವತ...
ಸುಳ್ಯ: ಸುಳ್ಯ ಗಾಂಧಿನಗರದಲ್ಲಿ ಸಣ್ಣದಾದ ಟೀ ಅಂಗಡಿ ತೆರೆದು ಕಾರ್ಯಚರಿಸುತ್ತಿರುವ ಟೀ ಅಂಗಡಿಯ ಮಾಲೀಕ ವೆಂಕಪ್ಪ ಗೌಡ ನಡುಮನೆ ನ.27 ರಂದು ನಿಧನ ಹೊಂದಿದರು. ಪ್ರಗತಿ , ಶಿವ , ಲೈಫ್ ಕೇರ್ ಹಾಗೂ ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಮಾಲಕರು ಪ್ರತಿನಿತ್ಯವು ಮೃತಪಟ್ಟ ವ್ಯಕ್ತಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಲ್ಲದೆ ತನ್ನ ಕುಟುಂಬದ...
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಜ್ಜಾವರ ಸರಕಾರಿ ಪ್ರೌಢಶಾಲೆ ಶಾಲೆಯ 64 ವಿದ್ಯಾರ್ಥಿನಿಯರಿಗೆ ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜೀಸ್ ವತಿಯಿಂದ ಸೌರ ದೀಪವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ದೇವಕಿ ವಿಷ್ಣು ನಗರ, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಲವೀಶ್ ಕುಮಾರ್ , ಗ್ರಾಮ ಪಂಚಾಯ್ತಿ...
ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹೂ ಜೋಡನೆ ಸ್ಪರ್ಧೆ ನಡೆಯಿತು. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ಉಪನ್ಯಾಸಕಿ ಅಶ್ವಿನಿ ನಿರ್ವಹಿಸಿ, ಮಾರ್ಗದರ್ಶನ ಮಾಡಿದರು.ಎನ್ಎನ್ಎಸ್ ಕಾರ್ಯಕ್ರಮ ಆಧಿಕಾರಿ ಲಿಂಗಪ್ಪ ಪೂಜಾರಿ ಸಹಕರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನ.26 ರಂದು ಬಿಜಿಎಸ್ ಸಭಾಂಗಣದಲ್ಲಿ 'ಬಿಜಿಎಸ್ ಕರಾವಳಿ ರತ್ನ' ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸುಳ್ಯ ತಾಲೂಕಿನ ಗುತ್ತಿಗಾರಿನ ಯುವ ಉದ್ಯಮಿ ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಸೇರಿದಂತೆ ಸುಮಾರು 25 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ...
ಸಂಸದ ಕ್ಯಾ. ಚೌಟ ಅವರಿಂದ ಕೃಷಿ ಸಚಿವ ಶಿವರಾಜ್ ಚೌವಾಣ್ ಭೇಟಿ ಮಾಡಿ ಮನವಿ ಸಲ್ಲಿಕೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ ಬಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್...
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕಾಮಗಾರಿ ಪೂರ್ಣಗೊಂಡರೂ ಬಾಕಿ ಉಳಿದಿರುವ ಇತರ ಠಾಣೆ ಮತ್ತು ವಸತಿ ಗೃಹಗಳ ಉದ್ಘಾಟನೆಗೆ ಬಹುತೇಕ ದಿನಾಂಕ ಅಂತಿಮಗೊಂಡಿದ್ದು ನ. ೩೦ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಎಸ್.ಪಿ. ಯತೀಶ್ ಎನ್. ತಿಳಿಸಿದರು. ಅವರು ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿ ಮಾತನಾಡುತ್ತಾ ಕುಕ್ಕೆ ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಮಾದರಿಯ...
Loading posts...
All posts loaded
No more posts
