ಜಾಲ್ಸೂರಿನ ಮಾಪಲಡ್ಕ ಬಳಿ ಆತ್ಮಹತ್ಯೆಗೆ ಶರಣಾದ ಅಜ್ಜ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಜಾಲ್ಸೂರು ಸಮೀಪದ ಮಾಪಲಡ್ಕ ಬಳಿ ವೃದ್ದರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ವರದಿಯಾಗಿದೆ. 61 ವರ್ಷದ ಕುಟ್ಟಿ ಎನ್ನುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಪಂಜಿಕಲ್ಲು ಮಾಪಲಡ್ಕ ಕಾಲೋನಿಯ ನಿವಾಸಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಗಣಪತಿ ಹವನ ಸಹಿತ ಧನ್ವಂತರಿ ಪೂಜೆ ಹಾಗೂ ಶಿಶ್ಯೋಪನಯನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿ ನವಂಬರ್ 29ರಂದು 2024 -25 ನೇ ಸಾಲಿನ ಪ್ರಥಮ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಶಿಶ್ಯೋಪನಯನ ಹಾಗೂ ಗಣಪತಿ ಹವನ ಸಹಿತ ಧನ್ವಂತರಿ ಪೂಜೆಯನ್ನು ಕಾಲೇಜಿನಲ್ಲಿ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಹಾಗೂ ನಟರಾಜ್ ಶರ್ಮಾ ರವರ ವೈದಿಕತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಸಮಾರಂಭದಲ್ಲಿ ಡಾ. ಚಿದಾನಂದ ಕೆ ವಿ,...
Ad Widget

ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭ

ಒಗ್ಗಟ್ಟಿನಲ್ಲಿದ್ದರೆ ಯಾವುದೇ ಕಷ್ಟವನ್ನು ಪರಿಹರಿಸಲು ಸಾಧ್ಯ , ಒಗ್ಗಟ್ಟು ಮತ್ತು ಶಾಂತಿ ಸೌಹಾರ್ದತೆ ನೆಲೆ ನಿಲ್ಲಬೇಕು;ಸಯ್ಯಿದ್ ಕಡಲುಂಡಿ ತಂಙಳ್ ಸುಳ್ಯದ ಜಟ್ಟಿಪಳ್ಳ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ 'ಗಲ್ಫ್ ಅಡಿಟೋರಿಯಂ ಇದರ ಉದ್ಘಾಟನಾ ಸಮಾರಂಭ ನ 29 ರಂದು ಎ ಜಿ ಸಿ ಸಿ ಆಡಿಟೋರಿಯಂ ವೇದಿಕೆಯಲ್ಲಿ ನಡೆಯಿತು. ಈ ನೂತನ ಆಡಿಟೋರಿಯಂ ಉದ್ಘಾಟನೆ ಮಾಡಿದ ಸಮಸ್ತ...

ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭಕ್ಕೆ ತಟ್ಟು ಕಡ ನಿರ್ಮಿಸಿ ಉಚಿತ ಚಹಾ ತಿಂಡಿ ವಿತರಣೆ, ಯುವಕರ ತಂಡಕ್ಕೆ ಪ್ರಶಂಸೆ

ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸುವ ಸಾರ್ವಜನಿಕರಿಗೆ ಉಚಿತ ಚಾ ತಿಂಡಿ ವ್ಯವಸ್ಥೆಗೆ ಸೂಕುಲ್ ಅನ್ಸಾರ್ ತಟ್ಟು ಕಡವನ್ನು ಸ್ಥಳೀಯ ಯುವಕರ ತಂಡ ಕೆಲವೇ ಘಂಟೆಗಳಲ್ಲಿ ನಿರ್ಮಿಸಿದೆ. ಕೇರಳದಲ್ಲಿ ಕಾಣಬಹುದಾದ ಬಿದಿರು, ತೆಂಗಿನ ಗರಿ, ಮುಂತಾದ ಕಚ್ಚ ವಸ್ತುಗಳಿಂದ ಯುವಕರು ಕೆಲವೇ ಸಮಯದಲ್ಲಿ ಸುಂದರ ತಟ್ಟು ಕಡೆ ನಿರ್ಮಿಸಿದ್ದು ಅದಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿರುತ್ತಾರೆ....

ನಾಲ್ಕೂರು : ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮತ್ತು ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು ಪ್ರವರ್ತಕರು ಬ್ಯಾಂಕ್ ಆಫ್ ಬರೋಡ, ವಿಜಯ ಗ್ರಾಮ ಸಮಿತಿ ನಾಲ್ಕೂರು, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶಯದಲ್ಲಿ ನ. 29ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ತೆರೆಯುವ ಬಗ್ಗೆ ಮತ್ತು ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು...

ಮಾವಿನಕಟ್ಟೆ :  ಮರದಿಂದ ಬಿದ್ದು ವ್ಯಕ್ತಿ ಸಾವು

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನ.29 ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕೊಡಗಿನ ಸಿದ್ದಾಪುರ ಮೂಲದ ಚಂದ್ರ 55 ವರ್ಷ ಎಂದು ಗುರುತಿಸಲಾಗಿದ್ದು ಇವರು ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ...

ನ.30ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಾರ್ವಜನಿಕರ ಭೇಟಿಗೆ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ...

ಶೇಣಿ ಗರಡಿ : ನೂತನ ಚಪ್ಪರ ಕೊಂಬು ನಿರ್ಮಾಣದ ಮನವಿ ಪತ್ರ ಬಿಡುಗಡೆ

ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ಶೇಣಿ ಇದರ ನೂತನ ಚಪ್ಪರ ಕೊಂಬು ಬೆಳ್ಳಿಯ ಆಭರಣ ನಿರ್ಮಾಣದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಗರಡಿಯಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ವೆಂಕಟೇಶ್ ಹೆಬ್ಬಾರ್ ಶೇಣಿ ಮನವಿ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು. ಚಪ್ಪರ ಕೊಂಬು ಸಮಿತಿ ಗೌರವಧ್ಯಕ್ಷ ಕರಿಯಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ರಾಧಾಕೃಷ್ಣ...

ಮಕ್ಕಳ ಕಲ್ಯಾಣ ಸಮಿತಿಗೆ ನ್ಯಾಯವಾದಿ ಅಬೂಬಕ್ಕರ್ ನೇಮಕ ತಡೆ – ಆದೇಶ ತೆರವು

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಸುಳ್ಯದ ನ್ಯಾಯವಾದಿ ಹಾಗೂ ನೋಟರಿ ಅಬೂಬಕ್ಕರ್ ಅಡ್ಕಾರ್‌ ಅವರನ್ನು ನೇಮಿಸಿದ ಸರಕಾರದ ಆದೇಶ ಮತ್ತೆ ಜಾರಿಗೆ ಬಂದಿದೆ. ಸೆಪ್ಟೆಂಬರ್ 9 ರಂದು ಸರಕಾರ ರಾಜ್ಯದ ಹಲವು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಬಾಲ ನ್ಯಾಯ ಮಕ್ಕಳ...

ಸುಳ್ಯದಲ್ಲಿ ನಿರ್ಮಾಣವಾದ ಗಲ್ಸ್ ಆಡಿಟೋರಿಯಂ ಲೋಕಾರ್ಪಣೆ , ಬದ್ರು ಸ್ಸಾದಾತ್ ಸಯ್ಯಿದ್ ಕಡಲುಂಡಿ ತಂಗಳ್ ರಿಂದ ಉದ್ಘಾಟನೆ.

ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪ ನೂತನವಾಗಿ ನಿರ್ಮಾಣವಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ 'ಗಲ್ಫ್ ಅಡಿಟೋರಿಯಂ ನ.29ರಂದು ಲೋಕಾರ್ಪಣೆಗೊಂಡಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದುರು ಸ್ಸಾದಾತ್ ಅಸ್ಸಯ್ಯದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ರವರು ಅಡಿಟೋರಿಯಂ ಅನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ...
Loading posts...

All posts loaded

No more posts

error: Content is protected !!