- Friday
- August 21st, 2026
ಸಮೀಕ್ಷಾ ಚಿಕಿತ್ಸೆಗೆ ನೆರವಿನ ಬೇಡಿಕೆಗೆ ಸ್ಪಂದಿಸಿದ ಕೊಲ್ಲಮೊಗ್ರದ ಜನತೆ – ಕೆಲವೇ ಗಂಟೆಗಳಲ್ಲಿ ಹರಿದು ಬಂತು 41 ಸಾವಿರ
ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿಗೆ ನಾಲ್ಕು ಗಂಟೆಗಳಲ್ಲಿ ಸುಮಾರು 41,000 ಸಾವಿರದಷ್ಟು ಹಣವು ಕೊಲ್ಲಮೊಗ್ರ ಗ್ರಾಮದಲ್ಲಿ ಸಂಗ್ರಹವಾಗಿದೆ. ಉದಯ ಶಿವಾಲ ಅವರು ವಾಟ್ಸಪ್ ಗ್ರೂಪ್ ನ್ನು ರಚಿಸಿ ಸಹಾಯಕ್ಕೆ ಮನವಿ ಮಾಡಿದ್ದರು. ನೆರೆ ಹಾನಿ ಮತ್ತು ಪ್ರವಾಹಕ್ಕೆ ಸಿಲುಕಿ ಚೇತರಿಸಿಕೊಳ್ಳುತ್ತೀರುವ ಈ ಗ್ರಾಮದಲ್ಲಿ ಇಷ್ಟು ಮೊತ್ತ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿದ್ದು...
ಸ್ವಾರ್ಥ ಬದುಕಿನೊಂದಿಗೆ ಬದುಕುತ್ತಿರುವ ಜನರು ಸಮಾಜಕ್ಕೆ ಒಂದಿಷ್ಟು ಅರ್ಪಣಾ ಮನೋಭಾವದೊಂದಿಗೆ ಕೊಡುಗೆ ನೀಡಿದರೆ ಆ ಊರು ಮತ್ತು ಗ್ರಾಮ ಮಾದರಿ ಗ್ರಾಮವಾಗಿ ಬೆಳೆಯುತ್ತದೆ. ಮತ್ತು ಆ ಊರು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಂಪದ್ಭರಿತವಾಗಿ ಬೆಳೆಯುತ್ತದೆ. ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್...
ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮುರೈ ಕಾಂಪ್ಲೆಕ್ಸ್ನ ಮ್ಯಾನೇಜರ್ ಪ್ರಶಾಂತ್ ರೈವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಕೊಲೆ ಆರೋಪಿ ಶಫೀಕ್ ನ ತಮ್ಮ ಸಫ್ರಿದ್ ಜೀವ ಬೆದರಿಕೆ ಒಡ್ಡಿರುವುದಾಗಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಈತ ಪ್ರವೀಣ್ ನೆಟ್ಟಾರ್ ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರ....
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಮಡಪ್ಪಾಡಿ ಇವರುಗಳ ಸಹಭಾಗಿತ್ವದಲ್ಲಿ “ಬೇಟಿ ಬಚಾವೋ ಬೇಟಿ ಪಡಾವೋ ” ಯೋಜನೆಯ ಅಡಿಯಲ್ಲಿ ಸೆ.09 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ...
ವಿದ್ಯಾರ್ಥಿಗಳಿಗೆ ಶತಾಭ್ಧಿ ವಿದ್ಯಾರ್ಥಿವೇತನ ವಿತರಣೆ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ. 10 ರಂದು ಸಂಘದ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಬಾಲ ಗೋಪಾಲ ಸೇರ್ಕಜೆ ಇವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ, ಉಪಾಧ್ಯಕ್ಷರಾದ ವೆಂಕಟ್ರಮಣ ಮುಳ್ಯ, ಆಡಳಿತ...
ಕೋಟೆ ಪೌಂಡೇಶನ್ ನ ರೈಟ್ ಟೂ ಲಿವ್ ಮತ್ತು ಆಪ್ ಡೈನಾಮಿಕ್ಸ್ (ಪಾರ್ಟ್ ಆಪ್ ಸಿಸ್ಕೋ) ನಿಂದ ಅಯ್ಯನಕಟ್ಟೆ, ಕೋಟೆಮುಂಡುಗಾರು,ಉಬರಡ್ಕ, ಎಡಮಂಗಲ, ಶೇಣಿ, ಎಣ್ಮೂರು, ಬಳ್ಳಕ್ಕ ಶಾಲೆಗಳ ಒಟ್ಟು 525 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭ ಕೋಟೆ ಪೌಂಡೇಶನ್ ನ ಪಾರ್ವತಿ ವಸಂತಕುಮಾರ್, ಗಣಪಯ್ಯ, ಶ್ರೀಮತಿ ಶಶಿಕಲಾ ಕೋಟೆ, ಸಾಯಿ ರಂಜನ್ ಮತ್ತಿತರರು...
ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಪಂದ್ಯಾಟದಲ್ಲಿ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ತಾಲ್ಲೂಕು ಮಟ್ಟದ ಪಂದ್ಯಾಟದಲ್ಲಿ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಉತ್ತಮ ಪಾಸರ್ ಆಗಿ ನಿತ್ಯಶ್ರೀ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಇವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.ಉತ್ತಮ ಸ್ಮಾಶರ್ ಆಗಿ...
ಮುರುಳ್ಯ ಸ.ಉ.ಹಿ.ಪ್ರಾ.ಶಾಲೆ ಸೆ. ರಂದು ಎಣ್ಮರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.ಒಟ್ಟು 14 ಶಾಲೆಯ 260 ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದು,ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜಾನಕಿ ಮುರುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸಮನ್ವಯಾಧಿಕಾರಿಗಳಾದ ಶೀತಲ್ಯು.ಕೆ,ಎಸ್.ಡಿ.ಎಂ.ಸಿ.ಅಧ್ಯಕ್ಷ ರಾದ ಮಧು ಪಿ.ಆರ್,ಸದಸ್ಯರಾದ ಅವಿನಾಶ್ ಡಿ,ಶಿಕ್ಷಣ ಸಂಯೋಜಕ ರಾದ ಸಂಧ್ಯಾಕುಮಾರಿ,ಶಿಕ್ಷಕ ಸಂಘದ ಕಾರ್ಯ ದರ್ಶಿಗಳಾದ...
ಸ್ವಚ್ಛ ಭಾರತ್ (ಗ್ರಾ) ಯೋಜನೆಯ ಅಡಿಯಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕೇಂದ್ರ ಜಲಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೂಚನೆಯಂತೆ ಗುತ್ತಿಗಾರು ಗ್ರಾಮದಲ್ಲಿ ಜನರ ಸಹಭಾಗಿತ್ವದೊಂದಿಗೆ ಯೋಜನೆ ಸೆ.09 ರಂದು ಗ್ರಾಮ ಪಂಚಾಯತ್ ನ ಗಿರಿಜನ ಸಭಾಭವನದಲ್ಲಿ ನಡೆಸಲಾಯಿತು. ಗುತ್ತಿಗಾರು ಗ್ರಾಮದ ನಕ್ಷೆ ಬಿಡಿಸಿ ಮುಖ್ಯ ಭಾಗಗಳನ್ನು ಗುರುತಿಸಿ ಗ್ರಾಮದ ಅಭಿವೃದ್ಧಿಗೆ...
Loading posts...
All posts loaded
No more posts
