- Friday
- August 21st, 2026
ಕೆಲವು ತಿಂಗಳ ಹಿಂದ ವಿಪರೀತ ಮಳೆಯಿಂದಾಗಿ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಯು.ಪಿ.ರವೀಂದ್ರ ಇವರ ಮನೆಗೆ ಭೀಕರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಹಾನಿಯಾಗಿದ್ದು, ದಿನ ಬಳಕೆಗೆ ಉಪಯೋಗ ಮಾಡುವಂತಹ ಕಟ್ಟಿಗೆ ಸಾಮಾಗ್ರಿಗಳು ಮತ್ತು ಇತರ ಸಾಮಾಗ್ರಿಗಳು ನೀರು ಪಾಲಾಗಿರುತ್ತದೆ. ಸದರಿ ಮನೆಯವರಿಗೆ ದಿ. ಎನ್.ಎಸ್.ದೇವಿಪ್ರಸಾದ್ ಇವರ ಮನೆಗೆ ತೆರಳುವ ರಸ್ತೆಯ ಹತ್ತಿರ...
ವಳಲಂಬೆಯ ಯುವಕನೋರ್ವ ಬೋವಿಕಾನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದೆ. ಕಾಸರಗೋಡಿನಲ್ಲಿ ಉದ್ಯೋಗಿಯಾಗಿದ್ದ ಜೈಸನ್ ಕಳೆದ ಶನಿವಾರದಿಂದ ಯಾರಿಗೂ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದರು. ನಿನ್ನೆ ರಾತ್ರಿ ಬೊವಿಕಾನದ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಇವರು ವಳಲಂಬೆಯಲ್ಲಿ ನೆಲೆಸಿರುವ ಥೋಮಸ್ ಎಂಬವರ ಪುತ್ರ. ಮೃತರು ತಾಯಿ, ಸಹೋದರಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಮಹಾಸಭೆ ಸೆ.10 ರಂದು ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿ. ನೂತನ ಅಧ್ಯಕ್ಷರಾಗಿ ತೇಜಸ್ವಿ ಕಡಪಳ, ಗೌರವಾಧ್ಯಕ್ಷರಾಗಿ ದಯಾನಂದ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು, ಕೋಶಾಧಿಕಾರಿಯಾಗಿ ಮುರಳಿ ನಳಿಯಾರು, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಕುಮಾರ್ ಜಯನಗರ, ವಿಜಯಕುಮಾರ್ ಉಬರಡ್ಕ, ಜೊತೆ ಕಾರ್ಯದರ್ಶಿಯಾಗಿ ನಮಿತಾ ಹರ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ...
ನಮ್ಮ ತುಳುನಾಡು ಅತ್ಯಂತ ಅಮೂಲ್ಯವಾದ ಶ್ರೀಮಂತ ಸಂಸ್ಕೃತಿಗಳ ಆಗರವಾಗಿದೆ. ವೈಶಿಷ್ಟ್ಯವಾದ ಸಂಸ್ಕೃತಿ - ಸಂಸ್ಕಾರವನ್ನು ಹೊಂದಿರುವ ನಮ್ಮ ತುಳುನಾಡಿನಲ್ಲಿ ಹಲವಾರು ಬಗೆಯ ಆಚಾರ - ವಿಚಾರಗಳು ಇವೆ. ಯಕ್ಷಗಾನಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧ. ಯಕ್ಷಗಾನವು ಒಂದು ಸಾಂಪ್ರದಾಯಿಕ ರಂಗ ಮಂದಿರವಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೇರಳ ಗಡಿಭಾಗಕ್ಕೂ ವ್ಯಾಪಿಸಿದೆ. ಯಕ್ಷಗಾನದಲ್ಲಿ ತೆಂಕು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರಿಗೆ ಕೋಟೆ ಫೌಂಡೇಶನ್ ಸಂಸ್ಥೆಯ ನ ರೈಟ್ ಟು ಲೀವ್ ಮತ್ತು ಆಪ್ ಡೈನಾಮಿಕ್ಸ್ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್ ಕೊಡುಗೆ ಯನ್ನು ನೀಡಲಾಯಿತು.ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ದುಲ್ ಶರೀಫ್, ಕೋಟೆ ಫೌಂಡೇಶನ್ ನ ಸದಸ್ಯರು ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ...
ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಓಣಂ ಹಬ್ಬವನ್ನು ಆಚರಿಸಲಾಯಿತು. ರಾಜೀವಿ ಎ. ಓಣಂ ಆಚರಣೆಯ ಮಹತ್ವವನ್ನು ತಿಳಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಶಶಿಕಲಾ ಹರಪ್ರಸಾದ್, ಖಜಾಂಚಿ ಗಿರಿಜಾ ಎಂ.ವಿ. ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನಡುಗಲ್ಲು-ದೇವರಹಳ್ಳಿ, ಕಲ್ಲಾಜೆ ಪರಿಸರದಲ್ಲಿ ಸಾರ್ವಜನಿಕರಿಂದ ಸಹಾಯಧನ ಸಂಗ್ರಹ ಮಾಡಿ ಸಾರ್ವಜನಿಕರ ನೆರವಿನಿಂದ ಸಂಗ್ರಹವಾದ 18,530 ರೂಪಾಯಿ ಸಹಾಯಧನವನ್ನು ಸೆ.11 ರಂದು ಸಮೀಕ್ಷಾರವರ ಮನೆಗೆ ತೆರಳಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ರಕ್ಷಿತ್ ಕಾರ್ಜ, ಹರೀಶ್...
ಪ್ರವೀಣ್ ಕೊಲೆ ಆರೋಪಿ ಶಫೀಕ್ ನ ತಮ್ಮ ಸಪ್ರೀದ್ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮುರೈ ಕಾಂಪ್ಲೆಕ್ಸ್ನ ಮ್ಯಾನೇಜರ್ ಪ್ರಶಾಂತ್ ರೈವರಿಗೆ ಜೀವ ಬೆದರಿಕೆ ಹಾಕಿದ್ದಾನೆಂದು ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಸಪ್ರೀದ್ ನನ್ನು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ನಡುಗಲ್ಲು, ಹಾಲೆಮಜಲು ಮತ್ತು ಮೆಟ್ಟಿನಡ್ಕ ಪ್ರಗತಿಬಂಧು - ಸ್ವಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಸಮಾರಂಭ ಇಂದು ಹಾಲೆಮಜಲಿನ ಶ್ರೀ ವೆಂಟಟೇಶ್ವರ ಸಭಾಭವನದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಗುತ್ತಿಗಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಎರ್ದಡ್ಕ...
Loading posts...
All posts loaded
No more posts
