ಮೀನಾಕ್ಷಿ ಗೌಡರಿಗೆ ಒಂದೇ ದಿನ ಮೂರು ಸಂಸ್ಥೆಯಿಂದ ಗೌರವ

ಮಹಿಳಾ ದಿನಾಚರಣೆಯಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತೆ , ತಾ|ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷೆ , ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ಅವರನ್ನು ಒಂದೇ ದಿನ ಮೂರು ಸಂಸ್ಥೆ ವತಿಯಿಂದ ಗೌರವಿಸಲಾಯಿತು.ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಡೈರೆಕ್ಟರ್ ಡಾ| ಕೆ. ವಿ.ಚಿದಾನಂದ , ಲಯನ್ಸ್ ಕ್ಲಬ್ ಸುಳ್ಯ ವತಿಯಿಂದ ಅದರ ಅಧ್ಯಕ್ಷೆ ರೂಪಾಶ್ರೀ ಜೆ.ರೈ...

ಹರಿಹರ ಪಲ್ಲತ್ತಡ್ಕದಲ್ಲಿ ಆಧಾರ್ ಕ್ಯಾಂಪ್

ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ 268 ನೇ ಆಧಾರ್ ಕ್ಯಾಂಪ್ ಹರಿಹರಪಲ್ಲತ್ತಡ್ಕ ಗ್ರಾ.ಪಂ.ನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜಯಂತ್ ಬಾಳುಗೋಡು, ಪಿಡಿಒ ಪುರುಷೋತ್ತಮ ಮಣಿಯಾನ ಮೊದಲಾದವರು ಉಪಸ್ಥಿತರಿದ್ದರು.
Ad Widget

ಮಾ.24-26: ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ

ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಡೆಕಲ್ಲು ಮನೆತನದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ಮಾ.24 ರಿಂದ 26 ರತನಕ ನಡೆಯಲಿರುವುದು.ಮಾ.24 ರಂದು ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕಳಿಯಾಟಕ್ಕೆ ಕೂಡುವುದು. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ, ನಂತರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ...

ಬೆಂಡೋಡಿ: ನೂತನವಾಗಿ ಅಂಗನವಾಡಿ ಶುಭಾರಂಭ

ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ಶುಭಾರಂಭಗೊಂಡಿತು. ಸಿಡಿಪಿಒ ರಶ್ಮಿ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಮೊಗ್ರ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಶ ಜಯಶ್ರೀ ಚಾಂತಳ ವಹಿಸಿದ್ದರು.ಐಸಿಡಿಸಿ ವಲಯ ಮೆಲ್ವಿಚಾರಕಿ ಶ್ರೀಮತಿ ವಿಜಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷ ಗೋಪಾಲಕೃಷ್ಣ ಬೆಂಡೋಡಿ,, ಗ್ರಾ.ಪಂ.ಸದಸ್ಯ ಮಾದವ ಚಾಂತಾಳ,ಬೆಂಡೊಡಿ ಶಾಲಾ ಮುಖ್ಯ...

ವಿಧಾನ ಸಭಾ ಚುನಾವಣೆ : ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಸದಾನಂದ ಮಾವಜಿ ನೇಮಕ

ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಸದಾನಂದ ಮಾವಜಿ ನೇಮಕಗೊಂಡಿದ್ದಾರೆ. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರ ಶಿಫಾರಸ್ಸು ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ರ ಅನುಮೋದನೆ ಯೊಂದಿಗೆ ರಾಜ್ಯ ಸಮಿತಿಯ ಸಹ ಅಧ್ಯಕ್ಷರಾಗಿರುವ ಮಂಜುನಾಥ ಭಂಡಾರಿಯವರು ಈ ಆದೇಶ ಮಾಡಿದ್ದಾರೆ.

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲವು ಮಾರ್ಚ್ 28 , 29ಮತ್ತು 30 ರಂದು ನಡೆಯಲಿದ್ದು, ಇದರ ಕೊಳ್ಳಿ ಕಡಿಯುವ ಕಾರ್ಯಕ್ರಮ ಇಂದು ನಡೆಯಿತು. ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಚಾವಡಿಯಿಂದ ಕೊಳ್ಳಿಯನ್ನು ಕಡಿದು ಒತ್ತೆಕೋಲ ಗದ್ದೆಗೆ ತರಲಾಯಿತು. ಈ ವೇಳೆ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಜಿ. ರಾಜಾರಾಮ ಕೀಲಾರು, ಮೊಕ್ತೇಸರರಾದ ಕೆ .ಕರುಣಾಕರ, ಅಧ್ಯಕ್ಷರಾದ...

ಬದುಕಿನಲ್ಲಿ ಭಯ ಭಕ್ತಿಯನ್ನು ಬೆಳೆಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ – ಸಚಿವ ಎಸ್.ಅಂಗಾರ ;
ಕಂದ್ರಪ್ಪಾಡಿ ಜಾತ್ರೋತ್ಸವದ ಅಂಗವಾಗಿ ಯುವ ಪ್ರತಿಭೆಗಳಿಗೆ ಸನ್ಮಾನ

ಬದುಕಿನಲ್ಲಿ ಭಯ ಭಕ್ತಿಯನ್ನು ಬೆಳೆಸಿಕೊಂಡಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಸಚಿವರಾದ ಎಸ್. ಅಂಗಾರ ಹೇಳಿದರು.ಅವರು ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ಜಾತ್ರೋತ್ಸವದ ಅಂಗವಾಗಿ ಮಾ.14 ರಂದು ನಡೆದ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗೌರವಿಸಿ ಮಾತನಾಡಿದರು.ಜನರಲ್ಲಿ ಭಯ ಭಕ್ತಿಯನ್ನು ಬೆಳೆಸಿಕೊಳ್ಳಲು ದೈವಸ್ಥಾನಗಳು ಕಾರಣಕರ್ತವಾಗಿದೆ. ಇಂದು...

ಕಳಂಜ ಗ್ರಾಮ ಪಂಚಾಯತಿಯ ತಿರುಮಲೇಶ್ವರ ಎಂ ಗ್ರೇಡ್ – 2 ಕಾರ್ಯದರ್ಶಿಯಾಗಿ ಭಡ್ತಿ

ಕಳಂಜ ಗ್ರಾಮ ಪಂಚಾಯತಿನಲ್ಲಿ 24 ವರ್ಷಗಳಿಂದ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ತಿರುಮಲೇಶ್ವರ ಎಂ ಇವರು ಗ್ರೇಡ್ - 2 ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿದ್ದಾರೆ. ಗ್ರೇಡ್ - 2 ಕಾರ್ಯದರ್ಶಿಯಾಗಿ ಇವರು ಐವರ್ನಾಡು ಗ್ರಾಮ ಪಂಚಾಯತಿಗೆ ನೇಮಕಗೊಂಡಿರುತ್ತಾರೆ. ಇವರು ಕಳಂಜ ಗ್ರಾಮದ ಚಿನ್ನಪ್ಪ ಗೌಡ ಮುಂಡುಗಾರು ಮತ್ತು ದಿ|ಲೀಲಾವತಿ ಯವರ ಪುತ್ರ.

ಕಾಂಕ್ರಿಟೀಕರಣಗೊಂಡ ಕಾವಿನಮೂಲೆ ಪಾಟಾಜೆ ರಸ್ತೆ ಉದ್ಘಾಟನೆ ನೆರವೇರಿಸಿದ ಸಚಿವ ಅಂಗಾರ

ಸುಮಾರು 50 ಲಕ್ಷ ಮಾನ್ಯ ಸಚಿವರ ಅನುದಾನ ಮತ್ತು 1ಲಕ್ಷ ಗ್ರಾಮ ಪಂಚಾಯತ್ ಅನುದಾನದಿಂದ ಕಾವಿನಮೂಲೆ ಪಾಟಾಜೆ ರಸ್ತೆ ಕಾಂಕ್ರಿಟೀಕರಣದ ಲೋಕಾರ್ಪಣೆ ಮತ್ತು ಧನ್ಯತಾ ಸಮಾರಂಭವು ಕಾವಿನಮೂಲೆ ನಂದನ ಫಾರ್ಮ್ ನಲ್ಲಿ ನಡೆಯಿತು.ಲೋಕ ರ್ಪಣೆ ಗೊಳಿಸಿ , ಧನ್ಯತಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಸರಕಾರವು ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಹೆಚ್ಚಿನ ಒತ್ತು...

ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು. ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ,ಬಳಿಕ ಸಭಾಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲನೆ ಮಾಡಿದರು. ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ...
Loading posts...

All posts loaded

No more posts

error: Content is protected !!