ವಿ.ಹಿಂ.ಪ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರು ಘಟಕ ನೂತನ ಸಮಿತಿ ಉದ್ಘಾಟನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಅಡ್ಕಾರ್ ಘಟಕ ನೂತನ ಸಮಿತಿ ಉದ್ಘಾಟನೆ ಮಾ.29 ರಂದು ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ,ಜಿಲ್ಲಾ ಸೇವಾ ಪ್ರಮುಖ್ ನರಸಿಂಹ, ಜಿಲ್ಲಾ ಬಜರಂಗ ಸಹ ಸಂಚಾಲಕ ಲತೀಶ್ ಗುಂಡ್ಯ, ವಿಶ್ವ ಹಿಂದೂ ಪರಿಷದ್ ಸುಳ್ಯ...

ಮಂಡೆಕೋಲು ದೇವಸ್ಥಾನದಲ್ಲಿ ಶ್ರಮದಾನ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ.28ರಂದು ಶ್ರಮದಾನ ನಡೆಯಿತು. ಈ ಕಾರ್ಯಕ್ರಮದಲ್ಲಿ ತತ್ವಮಸಿ ಕನ್ ಸ್ಟ್ರಕ್ಷನ್ ಕಣೆಮರಡ್ಕ ಮಂಡೆಕೋಲು, ಶ್ರೀ.ಕ್ಷೇ.ದ.ಗ್ರಾ.ಯೋಜನೆಯ ಮಂಡೆಕೋಲು, ಕಲ್ಲಡ್ಕ, ಪೆರಾಜೆ ಒಕ್ಕೂಟಗಳ ಅದ್ಯಕ್ಷರು ಪದಾಧಿಕಾರಿಗಳು, ತಂಡಗಳ ಸದಸ್ಯರು ಹಾಗೂ ವಿಪತ್ತು ನಿರ್ವಹಣಾ ಘಟಕದ ಸಂಯೊಜಕರು ಭಾಗವಹಿಸಿದ್ದರು.
Ad Widget

ಸುಳ್ಯದಲ್ಲಿ ಗೌಡ ಕಪ್ ಕ್ರಿಕೆಟ್ ಪಂದ್ಯಾಟ : ಅಂಬೆಕಲ್ಲು ಪ್ರಥಮ – ವಾಲ್ತಾಜೆ ದ್ವಿತೀಯ

ಸುಳ್ಯ ಕೊಡಿಯಾಲ್ ಬೈಲ್ ಶಾಲಾ ಆಟದ ಮೈದಾನದಲ್ಲಿ ಕೋಲ್ಚಾರ್ ಬ್ರದರ್ಸ್ ಇದರ ವತಿಯಿಂದ ಸುಳ್ಯ ತಾಲೂಕು ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಸುಳ್ಯ ತಾಲೂಕು ಗೌಡ ಕುಟುಂಬಗಳ ನಿಗದಿತ 5 ಓವರ್ ಗಳ ಅಂಡರ ಅರ್ಮ್ ಕ್ರಿಕೆಟ್ ಪಂದ್ಯಾಟ ಗೌಡ ಕಪ್-2021 ಮಾ. 27 & 28 ರಂದು ನಡೆಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಬೆಕಲ್ಲು ಕುಟುಂಬದ ತಂಡ...

ಜೆಸಿಐ ಸುಳ್ಯ ಸಿಟಿಯ ವತಿಯಿಂದ ಮೌನ ಸಾಧಕ ಗೌರವಾರ್ಪಣೆ

ಜೆಸಿಐ ಸುಳ್ಯ ಸಿಟಿಯ ವತಿಯಿಂದ ಮೌನ ಸಾಧಕ ಗೌರವಾರ್ಪಣೆ ಕಾರ್ಯಕ್ರಮವನ್ನು ಮಾ.28 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸಿಬ್ಬಂದಿಗಳಾದ ಗಂಭೀರ್ ನಾಯ್ಕ್ ಮತ್ತು ಚನ್ನವೀರ್ ನಾಯ್ಕ್ ಇವರುಗಳನ್ನು ಮೌನ ಸಾಧಕ ಗೌರವಾರ್ಪಣೆಯನ್ನು ನೀಡಿ ಗೌರವಿಸಲಾಯಿತು. ಗೌರವಾರ್ಪಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಕೊಡಪಾಲ ನೆರವೇರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ವಹಿಸಿದ್ದರು. ಜೆಸಿಐ...

ಮರಕತ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರ ಶ್ರೀ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿಯವರು ಊರಿನ ಹಾಗೂ ಭಕ್ತಾಭಿಮಾನಿಗಳ ನೆರವಿನೊಂದಿಗೆ ಅಂದಾಜು 1೦ ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ್ದು, ಇದರ ಉದ್ಘಾಟನೆ ಮಾ. 28 ರಂದು ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರರವರು ನೂತನ ದ್ವಾರವನ್ನು ಉದ್ಘಾಟಿಸಿದರು. ಮರಕತ ದುರ್ಗಾಪರಮೇಶ್ವರಿ ಉಪಾಸನಾ ಸಮಿತಿ ಅಧ್ಯಕ್ಷೆ...

ಮುಕ್ಕೂರು : ಉದ್ಯೋಗ ಖಾತರಿ ನೋಂದಣಿ ಹಾಗೂ ಅರ್ಜಿ ಸ್ವೀಕಾರ – ಜನಪರ ಕಾರ್ಯ ಸಂಘಟನೆಗಳ ಆದ್ಯತೆಯಾಗಬೇಕು : ಸುಬ್ರಾಯ ಭಟ್ ನೀರ್ಕಜೆ

ಸಂಘಟನೆಗಳು, ಜನಪ್ರತಿನಿಧಿಗಳು ಸರ್ವರ ಹಿತಕ್ಕೆ ಪೂರಕವಾಗಿ ಜನಪರ ಚಿಂತನೆಯ ಕಾರ್ಯಕ್ರಮ ಅನುಷ್ಠಾನಿಸಿದಾಗ ಅದರಿಂದ ಊರಿಗೆ ಒಳಿತಾಗುತ್ತದೆ. ಉದ್ಯೋಗ ಖಾತರಿ ನೋಂದಣಿ ಮೂಲಕ ಅಂತಹ ಪ್ರಯತ್ನ ಇಲ್ಲಿ ಸಾಕಾರಗೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಹೇಳಿದರು. *ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ...

ಸಂಪಾಜೆಯಲ್ಲಿ ಅಡಿಕೆ ಹಳದಿ ರೋಗ ವಿರುದ್ದ ಸಮಾಲೋಚನಾ ಸಭೆ – ಗ್ರಾಮ ಮಟ್ಟದ ಮನೆಮನಗಳಲ್ಲಿ ಜಾಗೃತಿಯಾಗಲಿ : ಕಿಶೋರ್ ಶಿರಾಡಿ

ಸಂಪಾಜೆ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಅಡಿಕೆ ಹಳದಿರೋಗ ವಿರುದ್ಧ ಹೋರಾಟ ಸಮಿತಿ ಸಭೆ ಶನಿವಾರ ಸಂಪಾಜೆಯ ಯಶೋದ ಮುತ್ತಯ್ಯ ಗೌಡ ಸಭಾಂಗಣದಲ್ಲಿ ಜರಗಿತು. ರಾಜಾರಾಮ್ ಕಳಗಿ ಅಧ್ಯಕ್ಷ ತೆ ವಹಿಸಿದ್ದರು. ಮಲೆನಾಡು‌ ಜನಹಿತ ರಕ್ಷಣಾ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಪ್ರತೀ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮತ್ತು...

ಸುಳ್ಯ ರಂಗಮನೆಯಲ್ಲಿ ರಂಗೇರಿದ ರಂಗಗೀತೆ ಗಾಯನ

  ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಯ ಅಂಗವಾಗಿ ರಂಗ ಗೀತೆ ಗಾಯನ  ನಡೆಯಿತು.    ಕಾರ್ಯಕ್ರಮವನ್ನು ರಂಗಮನೆ ನಾಟಕ ಶಾಲೆಯ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ಜಯಪುರದಲ್ಲಿ ಬುಡಕಟ್ಟು ಜನಾಂಗ ಸಂಸ್ಕೃತಿಯ ವಿಶೇಷ ಅಧ್ಯಯನ ನಡೆಸುತ್ತಿರುವ ಪ್ರಿಯಾಂಶು ಕೆ. ಅವರು ಡೋಲು ಬಾರಿಸಿ ಉದ್ಘಾಟಿಸಿದರು. ಬಳಿಕ' ನನ್ನ ಈಗಿನ  ಅಧ್ಯಯನಕ್ಕೆ ರಂಗಭೂಮಿಯಿಂದ...

ಕಳಂಜ ಗ್ರಾಮ ಪಂಚಾಯತ್ – ಸತತ ನಾಲ್ಕನೇ ಬಾರಿಗೆ ಶೇ. 100 ತೆರಿಗೆ ಸಂಗ್ರಹಣೆ

ಕಳಂಜ ಗ್ರಾಮ ಪಂಚಾಯತ್ ಈ ಬಾರಿಯೂ ಕೂಡ ಶೇ.100 ರಷ್ಟು ಕಟ್ಟಡ/ಭೂಮಿ ತೆರಿಗೆ ವಸೂಲಾತಿಯನ್ನು ದಾಖಲಿಸಿದೆ. ಸತತ ನಾಲ್ಕು ವರ್ಷಗಳಿಂದ ಈ ಸಾಧನೆಯನ್ನು ಕಳಂಜ ಗ್ರಾಮ ಪಂಚಾಯಿತಿಯು ಮಾಡುತ್ತಾ ಬಂದಿದೆ. ಕಳೆದ ವರ್ಷ ತೆರಿಗೆಯನ್ನು ಪರಿಷ್ಕರಿಸಿ ತನ್ನ ಸ್ವಂತ ಆದಾಯವನ್ನು ಶೇ.126 ರಷ್ಟು ಹೆಚ್ಚಿಸಿಕೊಂಡಿದ್ದು, ಈ ಮೂಲಕ ಗ್ರಾಮದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ....

ದರ್ಖಾಸ್ತು : ಮಹಿಳಾ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮ

ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇದರ ವತಿಯಿಂದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇವುಗಳ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮವು ದರ್ಖಾಸ್ತು ಸ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಶ್ವಥಿಯವರು...
Loading posts...

All posts loaded

No more posts

error: Content is protected !!