ಸಮಯದ ಜೊತೆಗೆ ಸಾಗಿದೆ ಬದುಕು

ಉರುಳುತಿದೆ ಕಾಲವು, ಸಾಗುತಿದೆ ಜೀವವು…ಕನಸನೆಲ್ಲಾ ಮೂಟೆ ಕಟ್ಟಿ, ಕೊನೆಯೇ ಇರದ ದಾರಿ ಮುಟ್ಟಿ ಸಾಗುತಿದೆ ಜೀವವು, ಉರುಳುತಿದೆ ಕಾಲವು…ಕನಸಿನ ದಾರಿಯ ದಾಟಿ, ಮನಸಿನ ಮೌನವ ಮೀರಿ ಮೈಲಿಗಲ್ಲು ಇರದ ದಾರಿ ಹುಡುಕಿ ಸಾಗಿ…ಉರುಳುತಿದೆ ಕಾಲವು, ಸಾಗುತಿದೆ ಜೀವವು…ಏತಕೆ ತಿಳಿಯದ ಪಯಣ, ಸಾಗಿದೆ ಹುಡುಕಿ ಕಾರಣ…ಸಾಗುವುದೆಲ್ಲೋ, ಸೇರುವುದೆಲ್ಲೋ ತಿಳಿದೇ ಇಲ್ಲ…ಕ್ಷಣಿಕದ ಬದುಕಿನಲ್ಲಿ ಕ್ಷಣ ಕ್ಷಣವು ಅನುಭವ ತಾನೇ,...

ಕೊಲ್ಲಮೊಗ್ರು : ಕಜ್ಜೋಡಿಯಲ್ಲಿ ನಾಗಪ್ರತಿಷ್ಠೆ

ಕೊಲ್ಲಮೊಗ್ರು ಗ್ರಾಮದ ಮೋಹನಾಂಗಿ ದೇವಿದಾಸ್ ಕಜ್ಜೋಡಿ ಅವರ ಜಾಗದಲ್ಲಿದ್ದ ನಾಗನ ಕಟ್ಟೆಯು ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.25 ರಂದು ನಾಗಪ್ರತಿಷ್ಠಾ ಕಲಶವು ನಡೆಯಿತು.ಎ.24 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ಥೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ,...
Ad Widget

ಕುಕ್ಕುಜಡ್ಕ :- ಶ್ರೀ ಮಹಾವಿಷ್ಣು ರಕ್ತೇಶ್ವರಿ ಪರಿವಾರ ದೈವಗಳ ದೈವಸ್ಥಾನಕ್ಕೆ ಅನುದಾನ ವಿತರಣೆ

ಕುಕ್ಕುಜಡ್ಕ ಶ್ರೀ ಮಹಾವಿಷ್ಣು ರಕ್ತೇಶ್ವರಿ ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಿಂದ 2 ಲಕ್ಷ ಅನುದಾನ ಮಂಜೂರುಗೊಂಡಿದ್ದು, ಅನುದಾನದ ಡಿಡಿ ಯನ್ನು ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್ ಹಾಗೂ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ್ ರೈ ಕಳಂಜ ಅವರು ಎ.28 ರಂದು ದೈವಸ್ಥಾನದ ಸಮಿತಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ...

ವೆಂಕಟರಮಣ ಸೊಸೈಟಿಯ ಕಡಬ ಶಾಖೆಯಲ್ಲಿ 10ನೇ ವರ್ಷದ ಅಂಗವಾಗಿ ಲಕ್ಷ್ಮೀ ಪೂಜೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಡಬ ಶಾಖೆ ಯು ಇಂದು ಹತ್ತನೆ ವರ್ಷ ಕ್ಕೆ ಪಾದಾರ್ಪಣೆ ಗೊಂಡಿದ್ದು ಈ ಪ್ರಯುಕ್ತ ಶಾಖೆಯಲ್ಲಿ ಗಣಹೋಮ ಹಾಗು ಲಕ್ಷ್ಮಿ ಪೂಜೆ ನಡೆಯಿತು ಈ ಶುಭ ಸಂದರ್ಭದಲ್ಲಿ ಸಹಕರಿಸಿದ ಆಡಳಿತ ಮಂಡಳಿಗೆ ಸಿಬ್ಬಂದಿ ವರ್ಗದವರಿಗೆ ಹಾಗು ಗ್ರಾಹಕರಿಗೆ ಸಂಸ್ಥೆ ಯ ವತಿಯಿಂದ ಕೃತಜ಼್ನತೆ ಸಲ್ಲಿಸಲಾಯಿತುಸಂಸ್ಥೆ ಯ ಅಧ್ಯಕ್ಷ...

ಬಾಳಿಲ: ಪಾನ್ ಕಾರ್ಡ್ ಬಿದ್ದುಸಿಕ್ಕಿದೆ

ಬಾಳಿಲದ ಸುರಕ್ಷಾ ಕ್ಲಿನಿಕ್ ಬಳಿ ಒಂದು ಪಾನ್ ಕಾರ್ಡ್ ಇಂದು ಬೆಳಗ್ಗೆ ಬಿದ್ದುಸಿಕ್ಕಿರುತ್ತದೆ. ಕಳೆದುಕೊಂಡವರು ಕ್ಲಿನಿಕ್ ನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

ಕೊಲ್ಲಮೊಗ್ರು : ಬೃಹತ್ ನದಿ ಸ್ವಚ್ಛತಾ ಅಭಿಯಾನದ ಪೂರ್ವಭಾವಿ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ.08 ರಂದು ಬೃಹತ್ ನದಿ ಸ್ವಚ್ಛತಾ ಅಭಿಯಾನ ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಎ.28 ರಂದು ಶ್ರೀ ಮಯೂರ ಕಲಾಮಂದಿರ ಕೊಲ್ಲಮೊಗ್ರು ಇಲ್ಲಿ...

ಶ್ರೀ ಕ್ಷೇ.ಧ.ಗ್ರಾ. ಯೋಜನಾಧಿಕಾರಿ ಚೆನ್ನಕೇಶವರಿಗೆ ಬೀಳ್ಕೊಡುಗೆ – ನೂತನ ಯೋಜನಾಧಿಕಾರಿಗಳಾಗಿ ನಾಗೇಶ್ ಪಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಚೆನ್ನಕೇಶವ ಅವರು ಮಂಗಳೂರಿಗೆ ವರ್ಗಾವಣೆ ಆಗಿದ್ದು, ಸುಳ್ಯ ತಾಲೂಕು ನೂತನ ಯೋಜನಾಧಿಕಾರಿಗಳಾಗಿ ನಾಗೇಶ್.ಪಿ ಅವರು ಎ.27 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಚೆನ್ನಕೇಶವ ಅವರಿಗೆ ಸುಳ್ಯ ಯೋಜನಾ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಎನ್.ಎ ರಾಮಚಂದ್ರ, ತಾಲೂಕು ಜನಜಾಗೃತಿ...

ಗುತ್ತಿಗಾರು : ಹೃದಯಾಘಾತದಿಂದ ಯುವಕ ಮೃತ್ಯು

ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಗುತ್ತಿಗಾರಿನಿಂದ ವರದಿಯಾಗಿದೆ. ಗುತ್ತಿಗಾರು ಗ್ರಾಮದ ಪೈಕ ಕೊರ್ತ್ಯೆಡ್ಕ ಪರಶುರಾಮ ಕೆ. ಮೃತಪಟ್ಟ ದುರ್ದೈವಿ. ಮರ್ಕಂಜಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎದೆನೋವು ಬಂದುದರಿಂದ ರಸ್ತೆ ಬದಿ ಕುಳಿತಲ್ಲಿ ಕುಸಿದು ಬಿದ್ದರೆನ್ನಲಾಗಿದೆ. ಜತೆಗಿದ್ದ ತೇಜಕುಮಾರ್ ಎಂಬವರು ಅತನನ್ನು ಸುಳ್ಯ ಸರಕಾರಿ ಸಾಗಿಸಿದರಾದರೂ ಮೃತಪಟ್ಟರೆಂದು ತಿಳಿದುಬಂದಿದೆ.

ಬಾವಿ ಕೆಲಸಗಾರರಿಂದ ಎರಡು ಮೂರು ದಿನದಿಂದ ಗುಂಡಿಯಲ್ಲಿದ್ದ ಗಂಡು ಕರುವಿನ ರಕ್ಷಣೆ

ಕುಕ್ಕೆಶ್ರೀ ಸುಬ್ರಹ್ಮಣ್ಯ ಸಮೀಪದ ಇಂಜಾಡಿಯ ಬೆಳ್ಳಿ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ನ ಬಳಿಯಲ್ಲಿರುವ ಮುಂಡೋಡಿ ಮನೆತನದವರ ಜಾಗದಲ್ಲಿ ಬಾವಿ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ನೀರು ಸಿಕ್ಕಾಗ ತೆಂಗಿನ ಕಾಯಿ ಒಡೆಯುವ ಕ್ರಮಕ್ಕಾಗಿ ವೀಳ್ಯದೆಲೆ, ಅಡಿಕೆ, ತುಂಬೆ ಹೂ, ಕಾಡು ಕೇಪುಲ ಹೂ, ಬೆಳ್ತಿಗೆ ಅಕ್ಕಿಯೊಂದಿಗೆ ದಾನ ಬಿಡುವುದಕ್ಕಾಗಿ ಬಾಳೆ ಎಲೆಯ ಅಗತ್ಯವಿರುತ್ತದೆ. ಹಾಗಾಗಿ ಬಾಳೆ...

ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸಾಹಿತಿ ಟಿ ಜಿ ಮುಡೂರು ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಇತ್ತೀಚಿಗೆ ಅಗಲಿದ ಹಿರಿಯ ಸಾಹಿತಿಗಳು, ವಿದ್ವಾನ್ ಶ್ರೀ ಟಿ ಜಿ ಮುಡೂರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಾಹಿತಿಗಳಾದ ಅನುರಾಧಾ ಶಿವಪ್ರಕಾಶ್ ,...
Loading posts...

All posts loaded

No more posts

error: Content is protected !!