ಶಾಂತಿನಗರ : ಶಾಲಾ ಪ್ರಾರಂಭೋತ್ಸವ

ಶಾಂತಿನಗರ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶಾಲೆಯ ಸುತ್ತಲೂ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು‌. ಒಂದರಿಂದ ಎಂಟನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೂ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನಝೀರ್ ಶಾಂತಿನಗರ ವಹಿಸಿದ್ದರು. ಮುಖ್ಯಶಿಕ್ಷಕಿ ಶ್ರೀಮತಿ ತುಳಸಿ ಸ್ವಾಗತಿಸಿದರು. ಪಠ್ಯದ ಬಗ್ಗೆ ಶಿಕ್ಷಕಿ...

ಬೇಂಗಮಲೆ : ಕ್ಷೀರ ಭಾಗ್ಯ ಯೋಜನೆಯ ಪ್ಯಾಕೆಟ್ ಎಸೆದಿರುವುದು ಪತ್ತೆ ; ಉಚಿತವಾಗಿ ನೀಡುವುದು ತಪ್ಪೇ? ಕಳಪೆಯಾಗಿದೆಯೇ? ಜನರ ಪ್ರಶ್ನೆ

ಬೇಂಗಮಲೆಯ ಪರಿಸರವನ್ನು ಸ್ವಚ್ಛವಾಗಿರಿಸಲು ಐವರ್ನಾಡು ಗ್ರಾಮ ಪಂಚಾಯತ್ ಸತತ ಪ್ರಯತ್ನ ಮಾಡುತ್ತಿದ್ದರೂ ಕೆಲವರ ಮಾತ್ರ ಅನಾಗರಿಕತೆಯನ್ನು ಬಿಡುತ್ತಿಲ್ಲ. ಸರಕಾರದ ಕ್ಷೀರ ಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪ್ಯಾಕೇಟನ್ನು ಬೇಂಗಮಲೆಯಲ್ಲಿ ಎಸೆದಿರಿವುದನ್ನು ಪಿಡಿಓ ಶ್ಯಾಮ್ ಪ್ರಸಾದ್ ಪರಿಶೀಲನೆಗೆ ತೆರಳಿದಾಗ ಕಂಡುಬಂದಿದೆ.ಸರಕಾರ ಉಚಿವಾಗಿ ನೀಡುವುದು ತಪ್ಪೇ, ಅಥವ ಕಳಪೆ ಆಹಾರ ನೀಡುತ್ತಿದೆಯೇ ಎಂಬ ಸಂಶಯ ಕೂಡ...
Ad Widget

ನಾಲ್ಗುತ್ತು-ಕಳಂಜ ಕಾಲುದಾರಿ ದುರಸ್ತಿ

ಕಳಂಜ ಗ್ರಾಮಪಂಚಾಯಿತಿಗೆ ಒಳಪಟ್ಟ ನಾಲ್ಗುತ್ತು -ಕಳಂಜ ಕಾಲುದಾರಿಯು ಸಾರ್ವಜನಿಕ ಸಂಚಾರಕ್ಕೆ ಕೆಲವು ವರ್ಷಗಳಿಂದ ತೊಂದರೆಯಾಗುತ್ತಿದ್ದು ಚರಂಡಿ ನೀರು ಕಾಲು ದಾರಿಯ ಮೂಲಕವೇ ಹರಿಯುತ್ತಿದೆ. ತೋಟದ ಮಧ್ಯೆ ಇರುವ ಕಾಲುದಾರಿಯು ಜರಿದು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ನಾಳೆಯಿಂದ ಶಾಲಾ ಆರಂಭೋತ್ಸವ ಆಗಿರುವುದರಿಂದ ಇದನ್ನು ಮನಗಂಡ ಊರವರಾದ ಕುಶಾಲಪ್ಪ ನಾಲ್ಗುತ್ತು ,ಮೋಹನ ತಂಟೆಪ್ಪಾಡಿ ,ಲೋಕೇಶ್ ತಂಟೆಪ್ಪಾಡಿ ,ಉಮೇಶ್...

ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡ ಚಂದ್ರಶೇಖರ ಪಾರೆಪ್ಪಾಡಿಯವರಿಂದ ಮಡಪ್ಪಾಡಿ ಶಾಲೆಗೆ ದತ್ತಿನಿಧಿ ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡಪ್ಪಾಡಿಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಇವರು ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಮಡಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಗೆ ದತ್ತಿನಿಧಿ ಕೊಡುಗೆಯಾಗಿ ₹6,666/- ಯನ್ನು ನೀಡಿದರು. ದತ್ತಿನಿಧಿಯನ್ನು ಪ್ರಸ್ತುತ ಪ್ರಭಾರ ಮುಖ್ಯ ಶಿಕ್ಷಕರಾಗಿರುವ...

ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕರ ಸಂಘ (citu) ಚೆಂಬು ಘಟಕ ಗ್ರಾಮ ಪಂಚಾಯತ್ ಚೆಂಬು ಜಂಟಿ ಸಹಭಾಗಿತ್ವದಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮೇ. 15 ರಂದು ಬಾಲೆಂಬಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಿಐಟಿಯು ತಾಲೂಕು ಅಧ್ಯಕ್ಷರಾದ ಜಾನಿ.ಕೆ.ಪಿ ಮತ್ತು ಕಟ್ಟಡ...

ನಿವೃತ್ತ ಸಿಇಓ ಸುಬ್ರಹ್ಮಣ್ಯ ಜೋಷಿ ಯವರಿಗೆ ಬೀಳ್ಕೊಡುಗೆ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಯವರಿಗೆ ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವು ಮೇ 7ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಸುಳ್ಯ ಸಿ .ಎ ಬ್ಯಾಂಕ್ ನ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಮತ್ತು ಸುಳ್ಯ...

ಸಾಗುತಿದೆ ಪಯಣ

ಅಳುತ ನಗುತ ನೋವ ಮರೆಸುತ, ಕಲಿತು ಕಲಿಯುತ ಕಲಿಸಿ ನಲಿಯುತ ಸಾಗುತಿದೆ ಪಯಣ…ಬದುಕ ಪುಟಗಳ ತಿರುವು ಹಾಕುತ, ಪ್ರತೀ ಪುಟದಲೂ ಪಾಠ ಕಲಿಯುತ ಸಾಗುತಿದೆ ಪಯಣ…ಸೋಲು ಕಲಿಸುವ ಪಾಠ ಕಲಿಯುತ, ಗೆಲುವಿನಂಚಿನ ದಾರಿ ಹುಡುಕುತ ಸಾಗುತಿದೆ ಪಯಣ…ತಿಳಿದೋ ತಿಳಿಯದೇ ತಪ್ಪು ಮಾಡುತ, ತಪ್ಪುಗಳಿಗೆ ಕ್ಷಮೆಯ ಕೇಳುತ ಸಾಗುತಿದೆ ಪಯಣ…ಬದುಕಿನುದ್ದಕ್ಕೂ ಬಿದ್ದು ಏಳುತ, ಏಳು ಬೀಳಿನ ಜೊತೆಗೆ...

ನಿಂತಿಕಲ್ಲು: ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ ಸಂಸ್ಥೆಯಲ್ಲಿ “ಲಕ್ಕೀ ಡ್ರಾ” ಯೋಜನೆ ಆರಂಭ – ಮೇ.30ರಂದು ಪ್ರಥಮ ಡ್ರಾ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯು ವಿನೂತನ ಯೋಜನೆಗಳ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ ಗ್ರಾಹಕರ ಅಪೇಕ್ಷೆಯ ಮೇರೆಗೆ "ಲಕ್ಕೀ ಡ್ರಾ" ಎಂಬ ಹೊಸ ಯೋಜನೆಯನ್ನು ಆರಂಭಿಸುತ್ತಿದೆ. ಈ "ಲಕ್ಕೀ ಡ್ರಾ" ದಲ್ಲಿ 15 ದಿನಗಳಿಗೊಮ್ಮೆ ರೂ.500/- ರಂತೆ 12 ಕಂತುಗಳನ್ನು ಪಾವತಿಸಬೇಕಾಗಿದ್ದು,...

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸತೀಶ್ ಕೊಯಿಂಗಾಜೆ

ಸುಳ್ಯದ ಕೊಡಿಯಾಲಬೈಲ್‌ನ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಸತೀಶ್ ಕುಮಾರ್ ಕೊಯಿಂಗಾಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಅಚ್ಚುತ ಪೂಜಾರಿ ಅವರಿಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಸತೀಶ್ ಕೊಯಿಂಗಾಜೆಯವರು ಪ್ರಭಾರ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಎಂಪಿಎಡ್ ಎಂಫಿಲ್...

ಅಡಿಕೆ ಹಳದಿ ಎಲೆ ರೋಗ ಭಾದಿತ ಕೃಷಿಕರಿಗೆ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಮಾಹಿತಿ ಕಾರ್ಯಕ್ರಮ

2022-23 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಧನ ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಮಾಹಿತಿ ಕಾರ್ಯಗಾರ ನಡೆಯಲಿದ್ದು, ಈ ಮಾಹಿತಿ ಕಾರ್ಯಾಗಾರದಲ್ಲಿ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು. ಅಡಿಕೆ ಬೆಳೆಗಾರರು ಇತರೆ ಬೆಳೆಗಳಾದ...
Loading posts...

All posts loaded

No more posts

error: Content is protected !!