- Friday
- May 8th, 2026
ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಸಂಸ್ಕಾರ ವಾಹಿನಿ ಶಿಬಿರದಸಮಾಪನಾ ಸಮಾರಂಭವು ದಿನಾಂಕ ೦೯-೦೫-೨೦೨೨ ರಂದು ಸುಳ್ಯದ ಹಳೆಗೇಟಿನ ವಿದ್ಯಾನಗರದ ಶ್ರೀ ಕೇಶವಕೃಪಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ಭಟ್ಶಿವನಿವಾಸ ವಹಿಸಿದ್ದರು. ಸಪಾಮನಾ ಮುಖ್ಯ ಭಾಷಣವನ್ನು ವೇ| ಮೂ| ಅಭಿರಾಮ ಭಟ್ ಸರಳಿಕುಂಜ ಮಾತನಾಡುತ್ತಾ ಹಣ ಸಂಪಾದನೆಯೊಂದೇ ಜೀವನದ...
ವಿವೇಕ ಜಾಗೃತ ಬಳಗ, ಹರಿಹರ ಪಲ್ಲತ್ತಡ್ಕ-ಸುಬ್ರಮಣ್ಯ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಕಾರದೊಂದಿಗೆ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೇ.08 ರಂದು ರಕ್ತದಾನ ಶಿಬಿರ ನಡೆಯಿತು.ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ ಅವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿ...
ದ.ಕ. ಸಂಪಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ 2022-27 ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಉದಯ ಕುಮಾರ್ ಕೆ ಸಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಆಶ್ಲೇಷಾ ನಕ್ಷತ್ರವಾಗಿರುವುದರಿಂದ ಶ್ರೀ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಮುಂಜಾನೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಕಾಯುತ್ತಿದ್ದಾರೆ. ದೇವಳದ ಮುಂಭಾಗದಲ್ಲಿ ರಥಬೀದಿಯವರೆಗೆ 2 ಸಾಲಿನಲ್ಲಿ ಭಕ್ತರನ್ನು ಕಾಣಬಹುದು. ಎಂದಿನಂತೆ ಮುಂಜಾನೆ 6.00ರಿಂದ ಪೂಜೆಗಳು ಪ್ರಾರಂಭಗೊಂಡಿದ್ದು,ಮುಂಜಾನೆಯ ಪೂಜೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ವರದಿ: ಅನನ್ಯ ಹೆಚ್...
ಸಮಾಜ ಕಟ್ಟಿದವರು, ಸಮಾಜಕ್ಕೆ ಬೆಳಕಾದವರನ್ನು ಸಮಾಜ ಎಂದೂ ನೆನಪಿಸುತ್ತದೆ. ಅದರಂತೆ ಆದರ್ಶ ಪುರುಷರ ಪುತ್ಥಳಿ ನಿರ್ಮಾಣವಾಗಿದೆ. ಆದರ್ಶ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದ, ಹೊಸ ತಲೆಮಾರಿಗೆ ಪ್ರೇರಣೆಯಾದ ದಿ. ಎನ್.ಎಂ.ಬಾಲಕೃಷ್ಣ ಗೌಡ ಅವರು ಸದಾ ಸ್ಮರಣೀಯರು ಇವರ ಮಾರ್ಗದರ್ಶನದಂತೆ ಯುವ ಜನತೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಐವರ್ನಾಡಿನ...
ಸ ಕಿ ಪ್ರಾ ಶಾಲೆ ಸೇವಾಜೆಯಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರ ಸಹಕಾರದೊಂದಿಗೆ ಮೇ.07ರಂದು ಶ್ರಮದಾನ ನಡೆಯಿತು. ಶಾಲಾ ಆವರಣ ಗೋಡೆಗೆ ಅವಶ್ಯವಾಗಿರುವ ಮಣ್ಣನ್ನು ಸತತ ಮೂರನೇ ಬಾರಿ ಹೊತ್ತು ಸಮತಟ್ಟು ಮಾಡಿ ಶ್ರಮದಾನದ ಮೂಲಕ ಸಹಕರಿಸಿ ಶಾಲೆ ಹಾಗೂ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯದಲ್ಲೂ ಶ್ರಮದಾನದ ಮೂಲಕ ಸಹಕರಿಸಿರುತ್ತಾರೆ....
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಜರುಗಿತು. ಈ ಸಂದರ್ಭದಲ್ಲಿ ಜನರು ತಾಲೂಕು ಕಚೇರಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ತಿಳಿದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು...
ಐವರ್ನಾಡು ಗ್ರಾಮದ ಜಗತ್ ಜಬಳೆ ರವರ ಮನೆಯಲ್ಲಿ ಅಪರೂಪದ ಬ್ರಹ್ಮಕಮಲ ಪುಷ್ಪ ನಿನ್ನೆ ರಾತ್ರಿ ಅರಳಿದ್ದು ಮನಮೋಹನ ದೃಶ್ಯವನ್ನು ನೀಡಿದೆ. ಬಹಳ ಅಪರೂಪವಾಗಿ ಕಂಡುಬರುವ ಈ ಪುಷ್ಪವು ರಾತ್ರಿ ಸಮಯದಲ್ಲಿ ಅರಳುವುದು ವಿಶೇಷ.
ಸ.ಕಿ.ಪ್ರಾ ಶಾಲೆ ವಾಲ್ತಾಜೆಯಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇವರು ನಿರ್ವಹಿಸುತ್ತಿರುವ ಮಕ್ಕಳ ಬೇಸಿಗೆ ಶಿಬಿರ 2022 ರ ಶಿಬಿರಾರ್ಥಿಗಳಿಗೆ ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆಯ ವತಿಯಿಂದ ಸಾಹಿತ್ಯ ಕೃತಿಗಳನ್ನು ವಿತರಿಸಲಾಯಿತು.ಕಿರಣ ಸಂಸ್ಥೆ ಅಧ್ಯಕ್ಷ ಸಾಹಿತಿ ಯೋಗೀಶ್ ಹೊಸೋಳಿಕೆ, ಜಲಶ್ರೀ ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಕಡ್ಲಾರು, ಕಿರಣ ಸಂಸ್ಥೆಯ ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್ ವೈ...
ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ3ನೇ ವರ್ಷದ ವಾರ್ಷಿಕೋತ್ಸವಮೇ. 7ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಿತು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಉದಯ ಕೆ.ಯವರು ದೀಪ ಪ್ರಜ್ವಲನೆಗೊಳಿಸಿದರು. ನಂತರ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಟುಕುಕ್ಕೆ ಭಜನಾ...
Loading posts...
All posts loaded
No more posts
