ಮುರುಳ್ಯ : ಕೆಸರ್ ಡ್ ಒಂಜಿದಿನ ಕಾರ್ಯಕ್ರಮ

ಹಿಂದೂ ಭಾಂದವರು ಮುರುಳ್ಯ ಇದರ ವತಿಯಿಂದ ಕೆಸರ್ ಡ್ ಒಂಜಿದಿನ ಕಾರ್ಯಕ್ರಮ ನಡೆಯಿತು. ಮುರುಳ್ಯ ಗ್ರಾಮದ ಪೂದೆ ಕೋಡಿಯಡ್ಕ ಗದ್ದೆಯಲ್ಲಿ ಕೆಸರ್ ಡ್ ಒಂಜಿದಿನ ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು. ನಂತರ ಆಟಿಯ ಮಹತ್ವ ಮತ್ತು ಸಂಸ್ಕೃತಿ ಉಳಿಸುವುದರ ಬಗ್ಗೆ ಮಾನ್ಯ ಶಾಸಕರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ...

ಪಾಲಡ್ಕ : ಮೃತದೇಹ ಮೇಲಕ್ಕೆತ್ತಿದ ಪೈಚಾರಿನ ಮುಳುಗು ತಜ್ಞರ ತಂಡ

ಸುಳ್ಯದ ಪಾಲಡ್ಕ ಪಯಸ್ವಿನಿ ನದಿಯಲ್ಲಿ ಆ.13ರಂದು ಕಂಡು ಬಂದ ಅಪರಿಚಿತ ಮೃತದೇಹವನ್ನು ಮೇಲೆತ್ತಲು ಸುಳ್ಯದ ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಸಹಕರಿಸಿದ್ದಾರೆ. ತಂಡದಲ್ಲಿ ಸದಸ್ಯರುಗಳಾದ ಆರ್ ಬಿ ಬಶೀರ್, ಅಬ್ಬಾಸ್ ಶಾಂತಿನಗರ, ಶಿಯಾಬ್ ಬೆಟ್ಟಂಪಾಡಿ, ನೂರುದ್ದೀನ್, ಶಾರಿಕ್, ಅಶ್ರಫ್ ಅಚ್ಚಪ್ಪು, ಮೊದಲಾದವರು ಪಾಲ್ಗೊಂಡಿದ್ದರು. ಪೈಚಾರಿನ ಈಜು ತಜ್ಞರ ತಂಡದ ಸದಸ್ಯರು ಇಂತಹ ನೂರಾರು ಕಾರ್ಯಗಳ...
Ad Widget

ಕನಕಮಜಲು :  ಕೆಸರುಗದ್ದೆ ಕ್ರೀಡಾಕೂಟ ; ತುಳುನಾಡಿನ ಆಚರಣೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು – ಭಾಗೀರಥಿ ಮುರುಳ್ಯ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ  ಸಹಕಾರಿ ಸಂಘ ನಿ. ಜಾಲ್ಸೂರು, ಯುವಕ ಮಂಡಲ, ಕನಕಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ಯಡ್ಕ (ಕನ್ನಡ್ಕ) ಗದ್ದೆ, ಶ್ರೀರಾಮ್ ಪೇಟೆ ಕನಕಮಜಲಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು. ನಂತರ ಮಾತನಾಡಿದ ಶಾಸಕರು ತುಳುನಾಡಿನ ಆಚರಣೆಗಳನ್ನು ಪಾಲಿಸಿಕೊಂಡು ಮುಂದಿನ ಯುವ...

ಸುಳ್ಯ : ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ  –  ವಾಹನ ಸವಾರರು ಎಚ್ಚರ ವಹಿಸಲು ಸೂಚನೆ

ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಇದೀಗ ಪೈಪ್ ದುರಸ್ತಿ ಕಾರ್ಯವು ನಡೆಯುತ್ತಿದೆ. ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ರಸ್ತೆ ಮಧ್ಯದಲ್ಲಿ ಅಗೆದು ಪೈಪ್ ದುರಸ್ತಿ ಕಾರ್ಯ ನಡೆಯುತ್ತಿದೆ. ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕು ಹಾಗೂ ಸಹಕಾರ ನೀಡಬೇಕು ಎಂದು ಗುತ್ತಿಗೆದಾರರು ವಿನಂತಿಸಿಕೊಂಡಿದ್ದಾರೆ.

ಸುಳ್ಯ : ನೈತಿಕ ಪೋಲೀಸ್ ಗಿರಿ ಪ್ರಕರಣ – ಮಾಹಿತಿದಾರನ ಬಂಧನ

ಆ.12 ರಂದು ಸಂಜೆ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಹಿಂದು ಸಂಘಟನೆಗಳಿಗೆ ಮಾಹಿತಿ ನೀಡಿದಾತನ ಬಂಧಿಸಿರುವ ಬಗ್ಗೆ ತಿಳಿದುಬಂದಿದೆ. ಸುಳ್ಯದ ಖಾಸಗಿ ಹೋಟೆಲ್ ಬಂದ ಜೋಡಿಯ ಬಗ್ಗೆ ಸಿಬ್ಬಂದಿ ವಿಡಿಯೋ ದೃಶ್ಯಾವಳಿಗಳನ್ನು ಸಂಘಟನೆಯ ಕಾರ್ಯಕರ್ತರಿಗೆ ಹಂಚಿದ್ದು ಇದರಿಂದಾಗಿ ನಿನ್ನೆಯ ಎಲ್ಲಾ ಘಟನೆಗಳಿಗೆ ಮುಖ್ಯ ಕಾರಣವೆಂದು ಮನಗಂಡ ಸುಳ್ಯ ಪೋಲೀಸರು ಆತನನ್ನು ಬಂಧಿಸಿದ ಘಟನೆ ಇದೀಗ...

ಸುಳ್ಯ : ನೈತಿಕ ಪೋಲೀಸ್ ಗಿರಿ ಹಿನ್ನೆಲೆ : ಓರ್ವನ ಬಂಧನ – ಬಿಡುಗಡೆ, ನೈಜ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೋಲೀಸರು

ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವನನ್ನು ಬಂಧಿಸಿ, ಬಿಜೆಪಿ ಹಾಗೂ ಹಿಂದೂ ಮುಖಂಡರ ಆಗಮನದ ಬಳಿಕ ಹೈಡ್ರಾಮ ನಡೆದು ಬಿಡುಗಡೆಗೊಳಿಸಿದ ಘಟನೆ ಆ.12 ರಂದು ನಡೆದಿದೆ. ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿ,ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದ...

ಪೈಕ : ವಿವಿಧ ಸಂಘಸಂಸ್ಥೆ ಹಾಗೂ ಊರವರಿಂದ ಶಾಲಾ ಆವರಣ ಸ್ವಚ್ಛತೆ

ಪೈಕ ಸ.ಕಿ‌.ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,  ಗುತ್ತಿಗಾರು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ದ ಸದಸ್ಯರು ಗಳು ಮತ್ತು ಎಸ್ .ಡಿ.ಎಂ.ಸಿ.ಅಧ್ಯಕ್ಷ ರು ಮತ್ತು ಸದಸ್ಯರು ,ಪೋಷಕ ರು,ವಿದ್ಯಾಭಿಮಾನಿಗಳು,ಹಿರಿಯ ವಿದ್ಯಾರ್ಥಿಗಳು  ಶಾಲೆಯ...

ಬೆಳ್ಳಾರೆ : ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಬೆಳ್ಳಾರೆಯ ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆ. 06 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ನಿರ್ದೇಶಕರಾದ ಹನೀಫ್ ನೆಟ್ಟಾರವರ ಗೌರವ ಉಪಸ್ಥಿತಿಯಲ್ಲಿ ಕುಟುಂಬದ ಹಿರಿಯರೂ ಆದ ಮೂಸ ಕಲ್ಲಪ್ಪಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದರು. ಮುಸ್ತಫ ಸಖಾಫಿ ಈಶ್ವರಮಂಗಲ ಮತ್ತು ಇಸ್ಮಾಯಿಲ್ ಮದನಿ ಚೆನ್ನಾರು...

ಗುಂಡೇಟಿಗೆ ಕಡವೆ ಬಲಿ – ಖಚಿತ ಪಡಿಸಿದ ಪಶು ವೈದ್ಯಾಧಿಕಾರಿ

ಉಕ್ರಾಜೆ ಬೈಲು ಕಾಡಿನೊಳಗೆ ಆ.12ರಂದು ಸಂಜೆ ಕಡವೆ ದೇಹವೊಂದು ಪತ್ತೆಯಾಗಿದ್ದು, ಈ ಕಡವೆ ಗುಂಡೇಟಿನಿಂದ ಮೃತಪಟ್ಟಿದೆ ಎಂದು ಖಚಿತಪಟ್ಟಿದೆ. ಇಂದು ಸುಳ್ಯ ಎ.ಸಿ.ಎಫ್. ಪ್ರವೀಣ್ ಶೆಟ್ಟಿ, ರೇಂಜರ್ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ, ಸುಳ್ಯ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿ ವರ್ಗದ ಜೊತೆಗೆ ಅರಂತೋಡು ಉಕ್ರಾಜೆ ಬೈಲಿಗೆ ಹೋಗಿ ಪೋಸ್ಟ್ ಮಾರ್ಟಂ ನಡೆಸಿದ ವೇಳೆ...

ಸುಬ್ರಹ್ಮಣ್ಯ : ಪ್ರೆಸ್ ಕ್ಲಬ್ ರಚನೆ – ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ

    ಕರ್ನಾಟಕ ಸರಕಾರದ ಜಿಲ್ಲಾ ನೊಂದನಾಧಿಕಾರಿಯವರಿಂದ ನೋಂದಾವಣೆಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ವಿಶ್ವನಾಥ ನಡುತೋಟ ನೇಮಕಗೊಂಡರು. ಕಾರ್ಯದರ್ಶಿ ಯಾಗಿ ವಿಜಯವಾಣಿ /ಹೊಸ ದಿಗಂತ ಪತ್ರಿಕೆಯ ರತ್ನಾಕರ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಲೋಕೇಶ್ ಬಿ ಎನ್, ಕೋಶಾಧಿಕಾರಿಯಾಗಿ ವಿಜಯ ಕರ್ನಾಟಕ/ ಕನ್ನಡ ಪ್ರಭ ಪತ್ರಿಕೆಯ...
Loading posts...

All posts loaded

No more posts

error: Content is protected !!