ಸುಳ್ಯ ;  ಕಾಂಗ್ರೆಸ್ ನ ಮೂವರಿಗೆ ಜವಾಬ್ದಾರಿ ನೀಡಿ ನೇಮಕ

ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಎಂ.ವೆಂಕಪ್ಪ ಗೌಡರು ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನ ಮೂವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿ ನೇಮಕ ಮಾಡಿದ್ದಾರೆ. ಸುಳ್ಯವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಸಹ ಸಂಚಾಲಕರಾಗಿ ಗೋಕುಲ್ ದಾಸ್ ಸುಳ್ಯ, ಪ್ರಚಾರ ಸಮಿತಿಯ ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ಚೇತನ್ ಕಜೆಗದ್ದೆ ಹಾಗೂ ಮಾಧ್ಯಮ ಸಂಯೋಜಕರಾಗಿ  ಭವಾನಿಶಂಕರ್...

ಕೆ.ಪಿ.ಸಿ.ಸಿ. ಫ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಶಹೀದ್ ತೆಕ್ಕಿಲ್ ನೇಮಕ

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯದ ಟಿ.ಎಂ ಶಾಹೀದ್ ತೆಕ್ಕಿಲ್ ಅವರನ್ನು ಎ.ಐ.ಸಿ.ಸಿ ನೇಮಕ ಮಾಡಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಶಿಫಾರಸ್ಸಿನೊಂದಿಗೆ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೆ.ಪಿ.ಸಿ.ಸಿ ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ. ಪ್ರತಿಷ್ಟಿತ ತೆಕ್ಕಿಲ್...
Ad Widget

ಮೊರಾರ್ಜಿ ದೇಸಾಯಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ  ರಿಷಿಕಾಳಿಗೆ ಜಿಲ್ಲಾಮಟ್ಟದಲ್ಲಿ 9 ನೇ  ರ‍್ಯಾಂಕ್‌

2024-25 ನೇ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವ ಕಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ರಿಷಿಕಾ.ಕೆ. 9 ನೇ ರ‍್ಯಾಂಕ್‌ ಗಳಿಸಿದ್ದಾಳೆ. ಮಡಪ್ಪಾಡಿ ಗ್ರಾಮದ ಕೆರೆಮೂಲೆ ಮನೆ ಮೋಹನ ಮತ್ತು ಶಶಿಕಲಾ ದಂಪತಿಗಳ ಪುತ್ರಿ.

ಕಾಂಗ್ರೆಸ್ ಮಹಿಳಾ ಸಂಯೋಜಕಿಯಾಗಿ ರಾಜೀವಿ ಆರ್. ರೈ ನೇಮಕ

ಕಾಂಗ್ರೆಸ್ ಮಹಿಳಾ ಸಂಯೋಜಕಿಯಾಗಿ ರಾಜೀವಿ ಆರ್. ರೈ ನೇಮಕಗೊಂಡಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಲೋಕಸಭಾ ಚುನಾವಣಾ ಮಹಿಳಾ ಸಂಯೋಜಕಿಯಾಗಿ ಸುಳ್ಯದ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ರಾಜೀವಿ ಆರ್. ರೈಯವರನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿಸ್ಕೌಟ್ಸ್ ಗೈಡ್ ಮಕ್ಕಳ ಬೇಸಿಗೆ ಶಿಬಿರ

ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ ಮಕ್ಕಳ ಬೇಸಿಗೆ ಶಿಬಿರವು ಎ.1ರಂದು ಉದ್ಘಾಟಿಸಲಾಯಿತು. ಸುಳ್ಯ  ಸಂತ ಜೋಸೆಫ್ ಶಾಲೆಯಲ್ಲಿ ಸ್ಕೌಟ್ ಗೈಡ್ ಮಕ್ಕಳ ಬೇಸಿಗೆ ಶಿಬಿರವನ್ನು ಶಾಲಾ ಸಂಚಾಲಕ ರೆ ಫಾ ವಿಕ್ಟರ್ ಡಿಸೋಜಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಜೆಕೆರೈ, ಗುರುಸ್ವಾಮಿ, ಸ್ಕೌಟ್ ಸಮಿತಿಯ ಅಧ್ಯಕ್ಷ...

ಸುಳ್ಯ- ಪುತ್ತೂರು ಬಸ್ ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಳ್ಳತನ

ಸುಳ್ಯ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ಕನಕಮಜಲಿನ ಮಹಿಳೆಯೊಬ್ಬರ ಮೊಬೈಲ್ ಕಳ್ಳತನವಾಗಿರುವ ಘಟನೆ ಇಂದು ನಡೆದಿದೆ. ಕನಕಮಜಲಿನ ನಿಶ್ಮಿತಾ ಎಂಬವರು ಸುಳ್ಯಕ್ಕೆ ಬಂದು ಸುಳ್ಯ ಬಸ್ ನಿಲ್ದಾಣದಿಂದ ಪುತ್ತೂರಿಗೆ ಬಸ್ ನಲ್ಲಿ ತೆರಳಿದ್ದರು. ಬಸ್ ನಲ್ಲಿ ಕುಳಿತುಕೊಳ್ಳಲು ಸೀಟು ಇಲ್ಲದಿದ್ದುದರಿಂದ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯೋರ್ವರ ಜತೆ ಬ್ಯಾಗ್ ನೀಡಿದರೆನ್ನಲಾಗಿದ್ದು, ಪುತ್ತೂರಲ್ಲಿ ಬ್ಯಾಗ್ ಪಡೆದುಕೊಂಡು ಕೆಲ ಸಮಯದ...

ಅಗಲಿದ ಕರಸೇವಕ ಗಂಗಾಧರ ಮಾವಿನಗೋಡ್ಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ರಾಷ್ಟೀಯ ಸ್ವಯಂ ಸೇವಾಸಂಘ ಎಲಿಮಲೆ ಶಾಖೆ, ವಿಶ್ವಹಿಂದು ಪರಿಷತ್ ಬಜರಂಗದಳ ಅಯ್ಯೋದ್ಯೆ ಶಾಖೆ ಎಲಿಮಲೆ ಮಿತ್ರ ಬಳಗ(ರಿ) ಎಲಿಮಲೆ ಇದರ ನೇತೃತ್ವದಲ್ಲಿ  ದಿ.ಗಂಗಾಧರ ಮಾವಿನಗೋಡ್ಲು ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಮಾ.೩೧ ಅದಿತ್ಯವಾರ ಸಂಜೆ ಗಂಟೆ ೬ಕ್ಕೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮೃತರು ಅನೇಕ ವರ್ಷಗಳ ಕಾಲ ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ...

ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಡಾ.ಅನುರಾಧಾ ಕುರುಂಜಿಯವರಿಂದ ಕವನವಾಚನ

ಸುಳ್ಯದ  ಕವಯತ್ರಿ ಹಾಗೂ ಬರಹಗಾರ್ತಿಯಾಗಿರುವ ಡಾ. ಅನುರಾಧಾ ಕುರುಂಜಿಯವರು ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು  ಮಾರ್ಚ್ 29, 2024 ರಂದು ಬೆಂಗಳೂರಿನ ಬಾಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ  ಆಯೋಜಿಸಿದ್ದ ವಿಶ್ವ ಕನ್ನಡ ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಮಹಿಳಾ ಕವಿಗೋಷ್ಠಿಗೆ ಆಯ್ಕೆಯಾಗಿ ಸ್ವರಚಿತ ಕವನವನ್ನು ವಾಚಿಸಿದ್ದರು. ಕನ್ನಡ ಜಾನಪದ ಪರಿಷತ್ತಿನ...

ಸುಳ್ಯ: ‘ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿ ವೇತನ’ ; ಏ. 10 ರಂದು ಆನ್  ಲೈನ್ ಪರೀಕ್ಷೆ

ವಿದ್ಯಾರ್ಥಿವೇತನಕ್ಕಾಗಿ ಏ. ೧೦ ರಂದು ಆನ್  ಲೈನ್  ಪರೀಕ್ಷೆ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ ಇದರ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು ತಮ್ಮ ತಂದೆಯವರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರ ಹೆಸರಿನಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕಲಿಕೆಗೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ‘ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿ...

ಕಲ್ಮಕಾರು : ಆನೆ ದಾಳಿಗೆ ಅಪಾರ ಕೃಷಿ ಹಾನಿ

ಹಳದಿ ಹಾಗೂ ಎಲೆಚುಕ್ಕಿ ರೋಗದಿಂದ ನಿರಂತರ ತೊಂದರೆ ಅನುಭವಿಸುತ್ತಿರುವ ಕೃಷಿಕರು ಇದೀಗ ಕಾಡು ಪ್ರಾಣಿಗಳ ಹಾವಳಿಯಿಂದ ಸಂಕಟಪಡುವಂತಾಗಿದೆ.ಕಳೆದ ರಾತ್ರಿ ಕಲ್ಮಕಾರು ಗ್ರಾಮದ ಇಡ್ಯಡ್ಕ ಕೆ ಆರ್ ಗೋಪಾಲಕೃಷ್ಣ ಮತ್ತು ಗಂಗಾಧರ ಕೆ ಎಸ್ ಇವರ ತೋಟಕ್ಕೆ ಆನೆ ದಾಳಿ ನಡೆಸಿ ಬಾಳೆ ಹಾಗೂ ಅಡಿಕೆ ಮರಗಳಿಗೆ ಹಾನಿ ಮಾಡಿದ್ದು ಅಪಾರ ನಷ್ಟ ಉಂಟು ಮಾಡಿದೆ.
Loading posts...

All posts loaded

No more posts

error: Content is protected !!