ಜೂನ್ 16, 17: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಜೂನ್ 16-17 ರಂದು ನಡೆಯಲಿದೆ. ಪೂರ್ವ ಸಂಪ್ರದಾಯದಂತೆ ನಡೆಯುವ ಈ ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಜೂ.16 ರ ಭಾನುವಾರ ಸಂಜೆ 6...

ಪಂಜ : ಶ್ರಮದಾನ

ಪಂಜ ಶ್ರೀ ಪರಿವಾರ ಪಂಚಲಿoಗೇಶ್ವರ ದೇವಸ್ಥಾನಕೆ ಹೋಗುವ ರಸ್ತೆಯಲ್ಲಿ ಇದ್ದ ಕೆಸರನ್ನು ಶ್ರಮದಾನ ಹಾಗೂ ಜೆಸಿಬಿ ಮೂಲಕ ಸರಿ ಮಾಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಲ, ವ್ಯವಸ್ಥಾಪ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ರಜಿತ್...
Ad Widget

ದ.ಕ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಭೇಟಿಯಾದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಹಿಲನ್ ಅವರನ್ನು ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿದರು. ಭೇಟಿಯ ವೇಳೆ ಸುಳ್ಯ ಕ್ಷೇತ್ರದ ತೊಡಿಕಾನದ ಗ್ರಾಮಸ್ಥರ ಬಹುಬೇಡಿಕೆಯ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯ ಪರಿಹಾರದ ಕುರಿತು ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಉಚ್ಚಿಲದ ಸ್ಥಳೀಯರ ಕಂದಾಯ ಇಲಾಖೆಗೆ ಸಂಬoಧಪಟ್ಟ...

ಬೆಳ್ಳಾರೆ : ವಿಷದ ಹಾವು ಕಚ್ಚಿ ಮಹಿಳೆ ಸಾವು

ವಿಷದ ಹಾವು ಕಚ್ಚಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಬೆಳ್ಳಾರೆ ಸಮೀಪದ ಬೂಡು ಎಂಬಲ್ಲಿ ನಡೆದಿದೆ. ಬೂಡು ಚೋಮ ಎಂಬವರ ಪತ್ನಿ 42 ವರ್ಷದ ಸುಶೀಲ ಎಂಬವರು ನೆಟ್ಟಾರಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ಸಂಜೆ ಹಾವು ಕಚ್ಚಿದ್ದು ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ...

ದೊಡ್ಡೇರಿ ಶಾಲಾ ಮಂತ್ರಿಮಂಡಲ ರಚನೆ – ಮುಖ್ಯಮಂತ್ರಿಯಾಗಿ ಪ್ರಣೀಶ್ ಎ.ಪಿ.

ದೊಡ್ಡೇರಿ ಸ.ಕಿ.ಪ್ರಾ.ಶಾಲಾ 2024-25 ನೇ ಸಾಲಿನ ಮಂತ್ರಿಮಂಡಲ ರಚನೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಪ್ರಣೀಶ್ ಎ.ಪಿ., ವಿದ್ಯಾಮಂತ್ರಿಯಾಗಿ ಸುಪ್ರೀತ್, ನೀರಾವರಿ ಮಂತ್ರಿಯಾಗಿ ರಿತೇಶ್ ಕುಮಾರ್, ಸ್ವಚ್ಛತಾ ಮಂತ್ರಿಯಾಗಿ ದ್ರುವಿ, ಹಣಕಾಸು ಮಂತ್ರಿಯಾಗಿ ಮನ್ವಿತ್, ಆರೋಗ್ಯ ಮಂತ್ರಿ ಆರ್ಯ ಎನ್.ಜಿ., ರಕ್ಷಣಾ ಮಂತ್ರಿ ಜೀವನ್, ಸಾಂಸ್ಕೃತಿಕ ಮಂತ್ರಿ ಪೂರ್ವಿ ಡಿ.ಬಿ., ವಾರ್ತಾ ಮಂತ್ರಿ ಇಂಚರ ಡಿ.ಜೆ. ಆಯ್ಕೆಯಾದರು.

ಸುಳ್ಯ ತಾಲೂಕು ಸಖಾಫಿ ಕೌನ್ಸಿಲ್ ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರು ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ
ಪ್ರಧಾನ ಕಾರ್ಯದರ್ಶಿ ಸ್ವಬಾಹ್ ಸಖಾಫಿ ಬೀಜಕೊಚ್ಚಿ
ಫೈನಾನ್ಸ್ ಸೆಕ್ರಟರಿ ಜಬ್ಬಾರ್ ಸಖಾಫಿ ಅಜ್ಜಾವರ

ಪ್ರತಿಷ್ಠಿತ ಜಾಮಿಅಃ ಮರ್ಕಝ್ ನಿಂದ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯ್ಯುವ ಸಖಾಫಿ ವಿದ್ವಾಂಸರ ಸುಳ್ಯ ತಾಲೂಕು ಘಟಕದ ವಾರ್ಷಿಕ ಕೌನ್ಸಿಲ್ ಹಾಗೂ ಜುಲೈ ಎಂಟರಂದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ಉಪಸ್ಥಿತಿಯಲ್ಲಿ ನಡೆಯಲಿರುವ ಕರ್ನಾಟಕ ಸಖಾಫಿ ಸಂಗಮದ ಪ್ರಚಾರ ಕಾರ್ಯಕ್ರಮ ಸುನ್ನೀ ಸೆಂಟರ್ ಸುಳ್ಯದಲ್ಲಿ ನಡೆಯಿತು.ಕೌನ್ಸಿಲ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ಅಧ್ಯಕ್ಷತೆ...

ಚೂರಿ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ಶಾಸಕಿ ಕು.ಭಾಗೀರಥಿ ಮುರುಳ್ಯ

ಮಂಗಳೂರಿನ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಬೊಳಿಯಾರಿನಲ್ಲಿ  ಚೂರಿ ಇರಿತಕ್ಕೆ ಒಳಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಇಂದು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ,ದೀಪಕ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ದಯಾನಂದ ಕುರುಂಜಿ,ಭವಾನಿ...

ಹರಿಹರ ಪಲ್ಲತ್ತಡ್ಕ : 10 ದಿನಗಳ ಹಿಂದೆ ನಾಗರಹಾವು ಕಡಿದು ವೃದ್ಧೆ ಸಾವು ; ಇಂದು ಮತ್ತೆ ಪ್ರತ್ಯಕ್ಷಗೊಂಡ ಹಾವು

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿ ದೇವಮ್ಮ(67) ಎಂಬುವವರು ಜೂ.03 ರಂದು ನಾಗರಹಾವು ಕಡಿದು ಮೃತಪಟ್ಟಿದ್ದು, ಅವರು ತಮ್ಮ ಮನೆಯ ಕೋಳಿ ಕಾಪುವಿಗೆ ಕೈ ಹಾಕಿದ ಸಂದರ್ಭದಲ್ಲಿ ಹಾವು ಕಡಿದಿದ್ದು, ಆಸ್ಪತ್ರೆಗೆ ತೆರಳುವ ದಾರಿ ಮಧ್ಯೆ ದೇವಮ್ಮ ಕೊನೆಯುಸಿರೆಳೆದಿದ್ದರು.ಇಂದು 10 ದಿನಗಳ ಬಳಿಕ ಆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷಗೊಂಡಿದ್ದು, ಇದೇ ಹಾವು ಕಡಿದು ದೇವಮ್ಮ ಅವರು...

ಕುಕ್ಕೆಯಲ್ಲಿ ಕ್ರಿಕೆಟಿಗ ಮಾಯಾಂಕ್ ಅಗರ್ವಾಲ್ ಹಾಗೂ ಪತ್ನಿಯಿಂದ ಸರ್ಪಸಂಸ್ಕಾರ ಸೇವೆ

            ಸುಬ್ರಮಣ್ಯ ಜೂನ್ 12: ಐಪಿಎಲ್ ಆಟಗಾರ  ಮಾಯಾಂಕ್ ಅಗರ್ವಾಲ್ ಪತ್ನಿ ಹಾಗೂ ಕುಟುಂಬದವರು ಕುಕ್ಕೆ ಸುಬ್ರಮಣ್ಯದಲ್ಲಿ ನಿನ್ನೆ ಹಾಗೂ ಇಂದು ಸರ್ಪ ಸಂಸ್ಕಾರ ಸೇವೆ ಆಶ್ಲೇ ಬಲಿ ಹಾಗೂ ನಾಗ ಪ್ರತಿಷ್ಠಾ ಸೇವಾಗಳನ್ನು ಮಾಡಿರುವರು.  ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆದರು.   ದೇವಳದ ಮುಖ್ಯ ಪುರೋಹಿತರು   ದೇವರ ಪ್ರಸಾದವನ್ನು ನೀಡಿ  ಶಾಲು ಹೊದಿಸಿ...

ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸವನ್ನು ತೆರವುಗೊಳಿಸಿದ ಮಾಜಿ ಅಧ್ಯಕ್ಷರು – ಅಧಿಕಾರ ಇರುವಾಗ ಮಾಡಿಸದವರೂ ಈಗ ನಾಟಕ ಮಾಡುತ್ತಿದ್ದಾರೆ ಎಂದು ಜನರಿಂದ ಜಾಲತಾಣದಲ್ಲಿ ಆಕ್ರೋಶ

ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ ಪ್ರಯತ್ನಿಸಿದ್ದು, ಜತೆಗೆ ಅಧಿಕಾರಿಗಳ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದರು. ಜನರಿಗೆ ಸಮಸ್ಯೆಗಳು ಆಗುತ್ತಿರುವಾಗ ಕೆಲಸ ಮಾಡಿಸಲು ಗಮನಿಸಲು ಅರೋಗ್ಯ ಶಾಖೆಗೆ ಸಮಯವಿಲ್ಲ. ಅಧಿಕಾರಿಗಳಿಗೆ ಊರವರು ಮನವಿಕೊಟ್ಟು ಪ್ರಯೋಜನವಿಲ್ಲ ಎಂಬಂತಾಗಿದ್ದು ಗುತ್ತಿಗೆದಾರರಿಗೆ ಹಿಟಾಚಿ ಸಿಗೋದಿಲ್ಲ ಎನ್ನುವ...
Loading posts...

All posts loaded

No more posts

error: Content is protected !!