ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ, ಸದಸ್ಯರಾಗಿ ಸೋಮನಾಥ ಪೂಜಾರಿ, ಗಂಗರತ್ನ ಪೆರಾಭೆ ನೇಮಕ

ಬಿಜೆಪಿ ಜಿಲ್ಲಾ  ಹಿಂದುಳಿದ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಹಾಗೂ ಸದಸ್ಯರಾಗಿ ಸೋಮನಾಥ ಪೂಜಾರಿ ಮತ್ತು ಗಂಗರತ್ನ ಪೆರಾಭೆ ಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ನೇಮಕ ಮಾಡಿದ್ದಾರೆ.ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಪನ್ನೆ ಯವರು ಬೆಳ್ಳಾರೆ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಸುಳ್ಯ...

ಮರ್ಕಂಜ : ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಯ ವಿರುದ್ಧ ದೂರು ನೀಡಿದ ಪೋಷಕರು

ಮುಡ್ನೂರು ಮರ್ಕಂಜ ಶಾಲೆಯ  ಶಿಕ್ಷಕಿಯೊಬ್ಬರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ಎಲ್ಲಾ ಮಕ್ಕಳಿಗೆ ಹೊಡೆದಿದ್ದರೆನ್ನಲಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಯೊರ್ವಳ ಅಂಗೈಯಲ್ಲಿ ರಕ್ತ ಕಂದು ಹೋಗಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಲ್ಲದೆ, ಶಿಕ್ಷಕಿ ಮೇಲೆ ಪೋಲೀಸ್ ದೂರು ನೀಡಿದ ಘಟನೆ ಜೂ.13 ರಂದು ವರದಿಯಾಗಿದೆ.
Ad Widget

“ರಕ್ತದಾನ ಜೀವದಾನ”

ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ.ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು...

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗಿ

ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡುವ ದೊಡ್ಡ ಹೊಣೆಗಾರಿಕೆ ಹೊಂದಿರುವವರು, ಅವರ ಬಗ್ಗೆ ಭಯ ಬೇಡ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬೆಳ್ಳಾರೆ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಸಂತೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಇಂದು (ಜೂ.13) ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ JJ Act , wepons, ಬಂದೀಖಾನೆ, ಸಂಚಾರಿ ನಿಯಮ, ಫೋಕ್ಸ್ ಮತ್ತು...

ಕುರುಂಜಿಗುಡ್ಡೆ : ಅಪಾಯಕಾರಿ ಮರ ತೆರವಿಗೆ ಮನವಿ

ಕುರುಂಜಿ ಗುಡ್ಡೆಯಲ್ಲಿ ಕುಮಾರ ಎಂಬವರ ಮನೆಯ ಬಳಿ ಕುಡಿಯುವ ನೀರಿನ ಪೈಪ್ ಕಾಮಗಾರಿಯ ವೇಳೆ ರಸ್ತೆ ಬದಿಯ ಬರೆಯ ಮಣ್ಣು ತೆಗೆದಿದ್ದು ಎರಡು ಮರಗಳು ವಿದ್ಯುತ್ ಲೈನ್ ಮೇಲೆ ಬಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.. ಆದ್ದರಿಂದ ಇದನ್ನು ಆದಷ್ಟು ಶೀಘ್ರ ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿರುತ್ತಾರೆ.

ಗುತ್ತಿಗಾರು : ನಿವೇದಿತಾ ಸಂಚಾಲನ ಸಮಿತಿ ರಚನೆ – ಸಂಚಾಲಕರಾಗಿ ವಿನುತಾ ಪ್ರಶಾಂತ್ ಜಾಕೆ – ಸಹ ಸಂಚಾಲಕರಾಗಿ  ಅನಿತಾ ನವೀನ್ ಪೈಕ

ಗುತ್ತಿಗಾರು :ನಿವೇದಿತಾ ಸಂಚಾಲನಾ ಸಮಿತಿ ಇದರ ಗುತ್ತಿಗಾರು ಗ್ರಾಮ ಸಮಿತಿ ಇತ್ತೀಚೆಗೆ ರಚನೆಗೊಂಡಿತು. ಸಂಚಾಲಕರಾಗಿ ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ ಹಾಗೂ ಸಹ ಸಂಚಾಲಕರಾಗಿ ಶ್ರೀಮತಿ ಅನಿತಾ ನವೀನ್ ಪೈಕ ಆಯ್ಕೆಯಾದರು, ಸದಸ್ಯರುಗಳಾಗಿ ಮಹಾದೇವಿ ಕಿಶೋರ್ ಕುಮಾರ್ ಪೈಕ, ಶ್ರೀಮತಿ ಶಿಸಿಮಾ ಜಿತೇಶ್ ಜಾಕೆ, ಶ್ರೀಮತಿ ದಿವ್ಯ ಪುರಂದರ ಬಾಕಿಲ,ಶ್ರೀಮತಿ ಪ್ರತಿಮಾ ಜಗದೀಶ್ ಗುತ್ತಿಗಾರು, ಶ್ರೀಮತಿ...

ನಿಂತಿಕಲ್ಲು : ಪ್ರತಿ ಶನಿವಾರ ನೃತ್ಯ ತರಬೇತಿ – ದಾಖಲಾತಿ ಆರಂಭ

ನಿಂತಿಕಲ್ಲಿನ ಎಣ್ಮೂರು ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ಪ್ರತಿ ಶನಿವಾರ ಮದ್ಯಾಹ್ನ 1:30 ರಿಂದ 3:30 ರ ವರೆಗೆ ಕಿಡ್ಸ್ ಪ್ಲಾಟ್ ಫಾರ್ಮ್ ನೃತ್ಯ ತರಗತಿ, ರೂಪಕ, ಜನಪದ ನೃತ್ಯ ಹಾಗೂ ಸಂಜೆ 4 ರಿಂದ 6 ರ ವರೆಗೆ ಅಭಿನಯ ರಂಗ ತರಬೇತಿ ನಡೆಯಲಿದೆ. ನಿಂತಿಕಲ್ಲು ಪರಿಸರದ ಆಸಕ್ತ ವಿದ್ಯಾರ್ಥಿಗಳು ದಾಖಲಾಗಬಹುದು. ಹೆಚ್ಚಿನ ಮಾಹಿತಿಗೆ 9686714517...

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷನಿಂದ ರಗಳೆ ರಂಪಾಟ , ನಾನು ಅಧ್ಯಕ್ಷ….. ನಾನು ಅಧ್ಯಕ್ಷ……

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ರವರ ನೃತ್ಯ ತರಬೇತಿ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ನಾನು ಅಧ್ಯಕ್ಷ ನನ್ನದೇ ಈ ಕಟ್ಟಡ ಎಂಬೆಲ್ಲ ಮಾತುಗಳನ್ನು ಆಡುತ್ತಾ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು ಈ ವೀಡಿಯೋ ಇದೀಗ ವೈರಲ್...

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷನಿಂದ ರಗಳೆ ರಂಪಾಟ , ನಾನು ಅಧ್ಯಕ್ಷ….. ನಾನು ಅಧ್ಯಕ್ಷ……

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ರವರ ನೃತ್ಯ ತರಬೇತಿ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. https://youtu.be/EGxqWMRjPDk?si=Qn6Kpab_WySLRzV- ನಾನು ಅಧ್ಯಕ್ಷ ನನ್ನದೇ ಈ ಕಟ್ಟಡ ಎಂಬೆಲ್ಲ ಮಾತುಗಳನ್ನು ಆಡುತ್ತಾ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು ಈ ವೀಡಿಯೋ ಇದೀಗ...

ಜೂನ್ 16, 17: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಜೂನ್ 16-17 ರಂದು ನಡೆಯಲಿದೆ. ಪೂರ್ವ ಸಂಪ್ರದಾಯದಂತೆ ನಡೆಯುವ ಈ ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಜೂ.16 ರ ಭಾನುವಾರ ಸಂಜೆ 6...
Loading posts...

All posts loaded

No more posts

error: Content is protected !!