- Wednesday
- July 29th, 2026
ದಿನಾಂಕ : 13-07-2026 ಗುರುವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197 *01,ಮೇಷರಾಶಿ* ,ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ, ಗಮನಿಸಿ:-ಇಂದು ಶುಭ ಸುದ್ಧಿಯನ್ನುಕೇಳುತ್ತೀರಿ, ಪರಿಹಾರ:-ಶ್ರೀಅನ್ನಪೂರ್ಣೇಶ್ವರಿಯನ್ನು ಸ್ಮರಣೆ ಮಾಡಿ, *02,ವೃಷಭರಾಶಿ* ,ಇಂದು ನೀವು ಹೊಸ ಆಸ್ತಿಯನ್ನು ಖರೀದಿಸುವ ವಿಚಾರವಾಗಿ ಕುಟುಂಬದ...
ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಬಂದ ಅನುದಾನ ರೂ.3 ಲಕ್ಷ ರೂಪಾಯಿ ವಿತರಣೆಯನ್ನು ಯೋಜನಾಧಿಕಾರಿಗಳು ಮಾಡಿದರು. “ಸುಳ್ಯ ತಾಲ್ಲೂಕು ಅತೀ ಹೆಚ್ಚು ದೇವಸ್ಥಾನ ದೈವಸ್ಥಾನ ಹೊಂದಿರುವ ತಾಲೂಕಾಗಿದೆ. ಹಾಗೆಯೇ ಸುಳ್ಯ ರಾಜ್ಯದಲ್ಲೇ ಧರ್ಮಸ್ಥಳದಿಂದ ಅತೀ ಹೆಚ್ಚು ಅನುದಾನ ಪಡೆದ ತಾಲೂಕಾಗಿದೆ. ಧರ್ಮಸ್ಥಳ ದಿಂದ ತಾಲೂಕಿನ 118 ದೈವ ದೇವಸ್ಥಾನ ಭಜನಾ ಮಂದಿರ ಗಳಿಗೆ 7.5 ಕೋಟಿ...
(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಳ್ಳತ್ತಡ್ಕ - ನಡುಗಲ್ಲು ಮುಖ್ಯ ರಸ್ತೆಯ ಮಲ್ಲಾರ - ಬಾರಡ್ಕ ರಸ್ತೆಯಲ್ಲಿ ನಿರಂತರವಾಗಿ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಹರಿಹರ ಪಲ್ಲತ್ತಡ್ಕದಿಂದ ನಡುಗಲ್ಲು ಮಾರ್ಗವಾಗಿ ಗುತ್ತಿಗಾರು, ಸುಳ್ಯ ಸೇರಿದಂತೆ ಎಲ್ಲಾ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿರುವ ಇಲ್ಲಿ ಇದೀಗ ಹಲವಾರು ಸಮಯಗಳಿಂದ ಸಂಭವಿಸುತ್ತಿರುವ ಈ ನಿರಂತರ ಅಪಘಾತಗಳಿಂದಾಗಿ ವಾಹನ ಸವಾರರು ಸಂಚರಿಸಲು...
ಜುಲೈ 7ರಂದು ನಿಧನರಾದ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ದಿವಂಗತ ಗಿರೀಶ್ ಭಾರದ್ವಾಜ್ ರಿಗೆ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದಶ್ರದ್ಧಾಂಜಲಿ ಸಭೆಯು ಸುಳ್ಯದ ಜೆಸಿ ಭವನದಲ್ಲಿ ಜುಲೈ 11ರಂದು ಘಟಕಾಧ್ಯಕ್ಷರಾದ ಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಿರೀಶ್ ಭಾರದ್ವಾಜರ ಭಾವಚಿತ್ರದ ಎದುರು ಎಸ್ ಪಿ ಲ್ಯಾಬ್ ನ...
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರವರ್ತಿತ ಇಂಟರ್ಯಾಕ್ಟ್ ಕ್ಲಬ್ ಆಫ್ ಜ್ಞಾನದೀಪ ಬೆಳ್ಳಾರೆಯ 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರೋಶನ್ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕೀರ್ತನಾ ಪಿ, ಖಜಾoಜಿಯಾಗಿ ದ್ವಿತೀಯ ಪಿಯುಸಿಯ ಯು ಎಸ್ ಶಮಂತ್,...
ಸುಳ್ಯ ನ್ಯಾಯಾಲಯದಲ್ಲಿ ಇಂದು ಲೋಕ ಅದಾಲತ್ ನಡೆದಿದು ಒಟ್ಟು 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ ಗೊಂಡಿರುತ್ತದೆ.. ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 251 ಪ್ರಕರಣಗಳಲ್ಲಿ 172 ಪ್ರಕರಣಗಳು ರೂ. 1,04,51,000/- ಇತ್ಯರ್ಥ ಗೊಂಡಿರುತ್ತದೆ... ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 155 ರಲ್ಲಿ 142 ಪ್ರಕರಣಗಳು ರೂ. 5,00,000/- ರ...
ಕೊಡಗು-ಸಂಪಾಜೆಯ ಹಿರಿಯ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ಕೋಣೆತೋಟ ರವರು ಅಲ್ಪಕಾಲದ ಅಸೌಖ್ಯದಿಂದ(ವಯೋಸಹಜ) ಜು.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ದೇವಿ, ಶುಭಾ, ಸೊಸೆ ರೇಷ್ಮಾ, ಮೊಮ್ಮಗ ಶಾಂತನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ನಾಳೆ(ಜು.12) ಬೆಳಿಗ್ಗೆ ಅಂದಾಜು 10:00 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನೆರವೇರಲಿದೆ...
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಲೆಯಾಳ ನಿವಾಸಿ ಗೋಪಾಲಕೃಷ್ಣ ಭಟ್ ಮಲೆಯಾಳ(93) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿಯೂ, ಹವ್ಯಾಸಿ ಯಕ್ಷಗಾನ ವೇಷ ಧಾರಿಯೂ, ಯಕ್ಷ ಗುರುಗಳಾಗಿಯೂ ಪ್ರಸಿದ್ಧಿ ಹೊಂದಿದ್ದರು. ಯಕ್ಷಗುರುಗಳಾದ ಇವರು ಪುತ್ತೂರು, ಸುಳ್ಯ ತಾಲೂಕಿನ ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡಿ ಮಕ್ಕಳು ಯಕ್ಷ ರಂಗಸ್ಥಳದಲ್ಲಿ ಮಿಂಚುವಂತೆ ಮಾಡಿದವರು....
ಸುಬ್ರಹ್ಮಣ್ಯ ಜುಲೈ 11 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗ ಪ್ರತಿಷ್ಠ ಮಂಟಪದಲ್ಲಿ ಶೇಖರಣೆಯಾದ ನಾಗ ಶಿಲಾ ಕಲ್ಲುಗಳನ್ನು ಶನಿವಾರ ಕುಮಾರಧಾರ ನದಿಯಲ್ಲಿ ಜಲ ಸ್ತಂಭಗೊಳಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕರು, ಸರ್ಪಸಂಸ್ಕಾರ ವಿಭಾಗದ ಅರ್ಚಕರು ಹಾಗೂ ಕ್ರಿಯಾಕರ್ತರು ನಾಗ ಪ್ರತಿಷ್ಠಾ ಶಿಲಾ ಕಲ್ಲುಗಳನ್ನು ಪ್ರತಿಷ್ಟಾ ಮಂಟಪದಿಂದ ತೆರವುಗೊಳಿಸಿ ಕುಮಾರಧಾರ ನದಿಗೆ ಕೊಂಡೊಯ್ಯಲು ಜುಲೈ...
ಸುಳ್ಯ: ಸುಳ್ಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ ಹಾಗೂ ಕಡಬ ತಾಲೂಕಿನ ಐನೆಕಿದು...
Loading posts...
All posts loaded
No more posts
