‘ಅನ್ವೇಷಣಾ -2022’ ಸಾಂಸ್ಕೃತಿಕ ಮತ್ತು ಸೃಜನಶೀಲ ಸ್ಪರ್ಧೆಗಳಲ್ಲಿ ಎನ್ನೆಂಸಿ ವಿದ್ಯಾರ್ಥಿಗಳಿಗೆ ಬಹುಮಾನ

ಸುಳ್ಯ ಎನ್ನೆಂಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ ಅಂಬಿಕಾ ಮಹಾ ವಿದ್ಯಾಲಯ ಪುತ್ತೂರು ಇವರು ಆಯೋಜಿಸಿದ 'ಅನ್ವೇಷಣಾ -2022' ಸಾಂಸ್ಕೃತಿಕ ಮತ್ತು ಸೃಜನಶೀಲ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರ. ವಾಣಿಜ್ಯ ವಿಭಾಗದ ಯಶಸ್ ಎಂ ಗೀತಾ ಪ್ರಸ್ತುತಿಯಲ್ಲಿ (ಪ್ರಥಮ), ದ್ವಿ ವಿಜ್ಞಾನ ವಿಭಾಗದ ನಿಶ್ವಿತಾ ಸುಗಮ ಸಂಗೀತದಲ್ಲಿ (ದ್ವಿತೀಯ)ಪ್ರ. ವಿಜ್ಞಾನ ವಿಭಾಗದ ಅಖಿಲೇಶ್.ಕೆ. ಮತ್ತು...

ಹಿರಿಯ ಸಾಹಿತಿ ಜಯಮ್ಮ ಚೆಟ್ಟಿಮಾಡರಿಗೆ ತೌಳವ ಸಿರಿ ಪ್ರಶಸ್ತಿ

ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ.) ಮಂಗಳೂರು ಇದರ ವತಿಯಿಂದ ಡಿ.4 ರಂದು ಮಂಗಳೂರಿನ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆಯುವ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಸುನೀತಾ ಶೆಟ್ಟಿ ಮುಂಬೈ ಪ್ರಾಯೋಜಿತ ದತ್ತಿನಿಧಿ “ತೌಳವ ಸಿರಿ” ಪ್ರಶಸ್ತಿಗೆ ಸುಳ್ಯದ ಹಿರಿಯ ಕಾದಂಬರಿಗಾರ್ತಿ, ನಿವೃತ್ತ ಉಪನ್ಯಾಸಕಿ, ಸಾಹಿತಿ ಜಯಮ್ಮ ಚೆಟ್ಟಿಮಾಡರವರು ಆಯ್ಕೆಯಾಗಿದ್ದಾರೆ. ದ.ಕ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಪ್ರಶಸ್ತಿ ಪ್ರದಾನ...
Ad Widget

ಮಡಪ್ಪಾಡಿ : ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಅಂಗಾರರಿಂದ ಚಾಲನೆ

ಮಡಪ್ಪಾಡಿ ಗ್ರಾಮದ 85 ಲಕ್ಷ ರೂ. ಮೊತ್ತದ ಅನುದಾನದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಾದ ಎಸ್. ಅಂಗಾರರವರು ಡಿ.5 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಮಡಪ್ಪಾಡಿ - ಜೇಡಿಗುಂಡಿ ರಸ್ತೆ 50 ಲಕ್ಷದಲ್ಲಿ, ಪಣಿಯಾಲ - ಕಡ್ಯ ರಸ್ತೆ 25 ಲಕ್ಷದಲ್ಲಿ, ಮಡಪ್ಪಾಡಿ - ಕಾಶಿ ನಡುಬೆಟ್ಟು ರಸ್ತೆ 10 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿ...

ನ್ಯಾಷನಲ್ ಕರಾಟೆಯಲ್ಲಿ ಗ್ರ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ ಸಹೋದರರಾದ ಪ್ರತೀಕ್ ಮತ್ತು ಪ್ರಣಮ್ ದೇವ

ಡಿ.03 ರಿಂದ ಡಿ.4 ರವರೆಗೆ ನಡೆದ ಶೋಭೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ 18ನೇ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಬ್ಲ್ಯಾಕ್ ಬೆಲ್ಟ್ ಹಿರಿಯ ವಿಭಾಗದಲ್ಲಿ ಪ್ರತೀಕ್ ದೇವ ಮತ್ತು ಕಿರಿಯ ವಿಭಾಗದಲ್ಲಿ ಪ್ರಣಮ್ ದೇವ ಗ್ರ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರು ಪ್ರಕೃತಿ ಸ್ಟುಡಿಯೋ ಮಾಲಕರಾದ ಶಿವರಾಮ ದೇವ ಹಾಗೂ ಶ್ರೀಮತಿ ಯಶೋಧ ದೇವ...

ಜಾಲ್ಸೂರು: ಕ್ಯಾನ್ಸರ್ ಪೀಡಿತ ಮಹಿಳೆಯ ಆರೋಗ್ಯ ವಿಚಾರಿಸಿದ ಹೆಚ್ ಎಂ ನಂದಕುಮಾರ್

ಕೆಪಿಸಿಸಿ ಕಾರ್ಯದರ್ಶಿ ಉದ್ಯಮಿ ಹೆಚ್ ಎಂ ನಂದಕುಮಾರ್ ರವರು ಜಾಲ್ಸೂರು ಗ್ರಾಮದ ಕಡಿಕಡ್ಕ ಕಾಲೋನಿಯಲ್ಲಿ ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ಪೀಡಿತರಾಗಿ ಜೀವನ್ಮರಣ ಹೋರಾಟದಲ್ಲಿರುವ ಮಹಿಳೆಯ ಆರೋಗ್ಯ ವಿಚಾರಿಸಿ ಮನೆಯವರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಜರಿದ್ದು ಕಳೆದ 30 ವರ್ಷಗಳಿಂದ ತಮ್ಮ ತಮ್ಮ ಮನೆಯ ಅಡಿ ಸ್ಥಳ ಮಂಜೂರಾಗದೆ, ಯಾವುದೆ ಮೂಲ...

ರಾಷ್ಟ್ರ ಮಟ್ಟದ ಸೋಲೋ ಡ್ಯಾನ್ಸ್ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ

ಮರ್ಕ್ಯುರಿ ಡ್ಯಾನ್ಸ್ ಕ್ರೀವ್ ಬೆಳ್ಳಂಪಳ್ಳಿ ಉಡುಪಿ ಇದರ ವತಿಯಿಂದ ಡಿ.03 ರಂದು ನಡೆದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ.ಇವರು ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ.ತರುಣ್ ರಾಜ್...

ಯುವವಾಹಿನಿ ಸುಳ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ – ನೂತನ ಅಧ್ಯಕ್ಷರಾಗಿ ಲೋಹಿತ್ ರೆಂಜಾಳ ಹಾಗೂ ಕಾರ್ಯದರ್ಶಿಯಾಗಿ ಮಹೇಶ್ ಬೆಳ್ಳಾರೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸುಳ್ಯ ಘಟಕ ಇದರ 2022 - 23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಬಿಲ್ಲವ ಸಂಘ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾದ ನವೀನ್ ಸಾರಕೆರೆ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ...

ತೊಡಿಕಾನ : ಕಾಂಕ್ರೀಟಿಕರಣ ಕಾಮಗಾರಿಗೆ ಸಚಿವರಿಂದ ಗುದ್ದಲಿಪೂಜೆ

ತೊಡಿಕಾನ ಗ್ರಾಮದ ಅಡ್ಯಡ್ಕ - ಚಾಂಬಾಡು ರಸ್ತೆಯ ರೂ.50 ಲಕ್ಷ ಅನುದಾನದ ಕಾಂಕ್ರೀಟೀಕರಣ ಹಾಗೂ ಕಾಡುಪಂಜ - ಊರುಪಂಜಕ್ಕೆ ಎರುಕಡಪುವಿನಲ್ಲಿ ಪಶ್ಚಿಮವಾಹಿನಿ ಜಲಸಮೃದ್ಧಿ ಯೋಜನೆಯಡಿಯಲ್ಲಿ ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಚಿವರಾದ ಎಸ್. ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿದರು.

ಐನೆಕಿದು : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಅಂಗಾರರಿಂದ ಗುದ್ದಲಿಪೂಜೆ

ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸುಮಾರು 1.25 ಕೋಟಿ ರೂಗಳ ಹಾಗೂ ಐನೆಕಿದು - ಕೋಟೆ - ಕುಡುಮುಂಡೂರು ಸಂಪರ್ಕ ರಸ್ತೆಗೆ 30 ಲಕ್ಷ ಅನುದಾನದ ಗುದ್ದಲಿ ಪೂಜೆಯನ್ನು ಇಂದು ಮಾನ್ಯ ಸಚಿವರಾದ ಎಸ್.ಅಂಗಾರರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ ತಿರ್ಥರಾಮ, ದ.ಕ....

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ; ಸಂಪತ್ತಿನ ಔನತ್ಯಕ್ಕೆ ವಿದ್ಯೆ ರಹದಾರಿ – ಡಾ.ನಿಂಗಯ್ಯ ಅಭಿಮತ

ಶಿಸ್ತುಬದ್ದವಾದ ಜೀವನ ನಿರ್ವಹಣೆಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣವು ಮಾನವನಿಗೆ ಇರುವ ಶ್ರೇಷ್ಠ ಕೊಡುಗೆ, ಅದನ್ನು ನೀಡುವ ಉತ್ಕೃಷ್ಠ ಕೈಂಕರ್ಯವನ್ನು ಶಿಕ್ಷಣವು ಮಾಡುತ್ತದೆ. ವಿದ್ಯೆಗೆ ಸರಿಸಾಟಿ ಯಾವುದೂ ಇಲ್ಲ. ಸುಧಾರಿತ ಮತ್ತು ಕ್ರೋಢೀಕೃತವಾದ ಸಂಸ್ಕೃತಿಯನ್ನು ವಿದ್ಯೆ ಒದಗಿಸುತ್ತದೆ. ಹಿಂದಿನ ವಿಚಾರಧಾರೆಗಳು ಇಂದಿಗೂ ಪ್ರಸ್ತುವಾಗಿ ಸರ್ವರಿಗೂ ಒದಗುತ್ತಿರಲು ಮಾನವನ ವಿದ್ಯಾ ಸಂಪತ್ತು ಪೂರಕವಾಗಿದೆ. ಸಂಸ್ಕಾರ ಸಂಪತ್ತಿನ ಔನತ್ಯಕ್ಕೆ ವಿದ್ಯೆ...
Loading posts...

All posts loaded

No more posts

error: Content is protected !!