- Saturday
- August 22nd, 2026
ಸುಳ್ಯದ ರಥಬೀದಿಯಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶೈಲು ಆರಂಬೂರು ಮಾಲಕತ್ವದ ನೂತನ ಮೆನ್ಸ್ ಫ್ಯಾಶನ್ ಮಳಿಗೆ ಶೈನ್ ಬ್ರೈಟ್ ನ.28 ರಂದುಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಲ್ಲಿ ಹುಡುಗರ ಹೊಸ ವಿನ್ಯಾಸದ ಬ್ರಾಂಡೆಡ್ ಕಂಪೆನಿಯ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೊಂದು ಕನ್ನಡ ಫ್ಯೂಷನ್ ಸಾಂಗ್ 'ಶಾಂತಿನಗರ ಕ್ಷೇತ್ರದೊಡೆಯನೇ' ಪದ್ಯದ ಸಾಹಿತ್ಯವನ್ನು ಚಿದು ಪಾಂಗಲ್ಪಾಡಿ ಬರೆದಿದ್ದು, ತೇಜಸ್ವಿನಿ ಕುಕ್ಕಿಲ ಇವರು ಹಾಡಿದ್ದಾರೆ. ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಛಾಯಾಗ್ರಹಣ, ಹಿತೇಶ್ ಪಮ್ಮನಮಜಲು ಸಂಕಲನ, ಕೀರ್ತಿರಾಜ್ ಕೆ ಸಂಗೀತ ಮತ್ತು ಪದ್ಯದ...
ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ. 15 ಮತ್ತು 16ರಂದು ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು. ಡಿ.15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಹ ವಾಚನ, ಮಹಾ ಗಣಪತಿ ಹೋಮ, ಚಂಡಿಕಾಯಾಗ ಪ್ರಾರಂಭ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ಸುಹಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ...
ಗುತ್ತಿಗಾರು ಗ್ರಾಮದ ದೇವಶ್ಯ ಡಿ.ಜೆ ರೋಹಿತಾಕ್ಷ ಇವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರತ್ನಾವತಿ ದೇವಶ್ಯ, ಪುತ್ರರಾದ ಯೋಗಿತ್ ದೇವಶ್ಯ, ನಿಶ್ಚಿತ್ ದೇವಶ್ಯ, ಸಹೋದರರಾದ ಡಿ.ಜೆ ಜನಾರ್ಧನ ದೇವಶ್ಯ, ಡಿ.ಜೆ ಚಂದ್ರಶೇಖರ ದೇವಶ್ಯ, ಸಹೋದರಿಯರಾದ ಭಾನುಮತಿ ಗಂಗಾಧರ ಬಾಳಿಕಳ, ತ್ರಿವೇಣಿ ಯಶವಂತ...
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕಲ್ಲೋಣಿ ಇದರ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ದ. 4ರಂದು ಆಡಳಿತ ಸಮಿತಿಯ ಅಧ್ಯಕ್ಷರಾದ ವಿ. ಕಂದಸ್ವಾಮಿ ಇವರ ನೇತೃತ್ವ ದಲ್ಲಿ ನಡೆಯಿತು. ಆಡಳಿತ ಸಮಿತಿಯ ಪ್ರದಾನ ಕಾರ್ಯದರ್ಶಿ ಲೋಕನಾಥ್ ಸ್ವಾಗತಿದರು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಪ್ರದೀಪ್ ರೈ ಪನ್ನೇ ಪ್ರಾಸ್ತಾವಿಕಾ ಬಾಷಣ ಮಾಡಿದರು.ಸುನಿಲ್...
ಪೋಲೀಸ್ ದೌರ್ಜನ್ಯ ಖಂಡಿಸಿ ವಕೀಲರ ಸಂಘದ ವತಿಯಿಂದ ಡಿ.7 ರಂದು ಸುಳ್ಯ ಕೋರ್ಟ್ ಬಳಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣ ಪಾಟಾಳಿ ಮಾತನಾಡಿ " ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ ಹಾಗಾಗಿ ತಪ್ಪಿತಸ್ಥರ ವಿರುದ್ದ ಹೋರಾಟ...
2022 ರ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ ಡಿ. 06 ರಂದು ಬೆಳಿಗ್ಗೆ 11:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್ ಮಂಗಳೂರು ಇಲ್ಲಿ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲೀಸ್ ಅಧೀಕ್ಷಕ ಸೋನಾವಣೆ ಹೃಷಿಕೇಶ ಭಗವಾನ್ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗೃಹರಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ದಿನದ 24 ಗಂಟೆಯು...
ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳ ಪೂಜಾಲಕಟ್ಚೆಯ ಪೋಲೀಸ್ ಠಾಣೆಯ ಪೊಲೀಸರು ದೌರ್ಜನ್ಯವನ್ನು ನಡೆಸಿದ್ದಾರೆಂದು ಖಂಡನೆ ವ್ಯಕ್ತಪಡಿಸಿರುವ ಸುಳ್ಯ ವಕೀಲರ ಸಂಘ ನಿರ್ಣಯ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಗೃಹ ಸಚಿವರಿಗೆ ಸುಳ್ಯ ತಹಶೀಲ್ದಾರರ ಮೂಲಕ ಡಿ.6 ರಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸುಳ್ಯ ವಕೀಲರ...
ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪಲ್ಲತಡ್ಕ ರಾಘವ ಗೌಡ ಅವರ ಮಿಲ್ಕ್ ಮಾಸ್ಟರ್ ಹಾಲು ಕರೆಯುವ ಯಂತ್ರದ ಕೈಗಾರಿಕಾ ಸಂಸ್ಥೆ ಮುರುಳ್ಯ ಇಲ್ಲಿಗೆ ಭೇಟಿ ನೀಡಲಾಗಿತ್ತು. ಸ್ವ ಉದ್ಯಮ, ಮತ್ತು ಉದ್ಯಮ ಶೀಲತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಭೇಟಿ ನಡೆಸಲಾಗಿತ್ತು. ಸಂಸ್ಥೆಯ ಸಿಇಓ ಕುಸುಮಾಧರ ಕೇಪುಳಕಜೆ ಮತ್ತು...
ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ನಾಂದಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಕಾಲೇಜಿನ ವೃತ್ತಿ ನಿಯೋಜನಾ ಕೋಶದ ಮುಂದಾಳತ್ವದಲ್ಲಿ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ೭ ದಿನಗಳ ಉಚಿತ ಮೃದು ಕೌಶಲ್ಯ ತರಬೇತಿ ಉದ್ಘಾಟನಾ ಕಾರ್ಯಕ್ರಮ ಡಿ.೫ರಂದು ಜರುಗಿತು. ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ...
Loading posts...
All posts loaded
No more posts
