ಅಜ್ಜಾವರ : ವಿಶ್ವ ವಿಕಲಚೇತನ ದಿನಾಚರಣೆ -ಕಾರ್ಡ್ ವಿತರಣೆ

ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಪ್ರಯುಕ್ತ ವಿಶೇಷ ಗ್ರಾಮ ಸಭೆಯು ಗ್ರಾ.ಪಂ. ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ವಹಿಸಿದ್ದರು . ಕಾರ್ಯಕ್ರಮದಲ್ಲಿ ವಿಕಲಚೇತನರ ತಾಲೂಕು ಅಧಿಕಾರಿ ಚಂದ್ರಶೇಖರ ಬಿ ವಿಕಲ ಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯತ್...

ಸುಳ್ಯ : ತಾಲೂಕು ಪಂಚಾಯತ್ ನಲ್ಲಿ ಆಧಾರ್ ಸೇವಾ ಕೇಂದ್ರ ಆರಂಭ

ಸುಳ್ಯ ನಗರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವೆಗಳು ಕಾರಣಾಂತರಗಳಿಂದ ತಾತ್ಕಾಲಿಕ ನಿಲುಗಡೆಯಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಪರಿಗಣಿಸಿ ತಾಲೂಕು ಪಂಚಾಯತ್ ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಆರಂಭಗೊಂಡಿದ್ದು, ವಿಳಾಸ ತಿದ್ದುಪಡಿ, ಹೆಸರು ತಿದ್ದುಪಡಿ, ಮೊಬೈಲ್ ನಂಬರ್ ಸೇರ್ಪಡೆ, ಹೊಸ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಅಪ್ಲೇಟ್ ಸೇವೆಗಳು ಲಭ್ಯವಿರುತ್ತದೆ. ತಿದ್ದುಪಡಿಗಾಗಿ ಸಂಬಂಧಪಟ್ಟ...
Ad Widget

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಭೇಟಿ

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಸ್ಮೃತಿ ಇರಾನಿ ಅವರು ಡಿ.27 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.ಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ದೇವರ ದರುಶನ ಪಡೆದು ವಿಶೇಷ ಪೂಜೆ ಹಾಗೂ ಮಹಾಭಿಷೇಕ ಸೇವೆ ಮಾಡಿಸಿದರು.ಕಿರುಷಷ್ಠಿ ಸಭಾಭವನದಲ್ಲಿ ಸಚಿವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಆನಂತರ...

ಡಾ.ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ

ಡಾ.ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವದ ಅಂಗವಾಗಿ ನುಡಿ ನಮನ ಕಾರ್ಯಕ್ರಮವನ್ನು ಕೆ.ವಿ.ಜಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಯಲ್ಲಿ ಡಿ. 26 ರಂದು ಆಚರಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಲೀಲಾಧರ ಡಿ.ವಿ. ಯವರು, ಡಾ.ಕುರುಂಜಿ ವೆಂಕಟರಮಣ ಗೌಡರವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಶ್ರೀ ಕುರುಂಜಿ ಯವರ ತತ್ವ ಆದರ್ಶದ ಬಗ್ಗೆ ತಿಳಿ...

ಅದ್ದೂರಿಯಾಗಿ ನಡೆದ ದೇವ ಶಾಲೆಯ ಬೆಳ್ಳಿಹಬ್ಬ ಆಚರಣೆ

ದೇವಚಳ್ಳ ಗ್ರಾಮದ ದೇವ ಕಿ.ಪ್ರಾ‌.ಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮ ಡಿ.24 ರಂದು ಅದ್ದೂರಿಯಾಗಿ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಕವಿತಾ. ಕೆ. ಎನ್ ದ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾ.ಪಂ.ಸದಸ್ಯೆ ಶ್ರೀಮತಿ ಸೀತಮ್ಮ ಕರಂಗಲ್ಲು ಉಪಸ್ಥಿತರಿದ್ದರು. ಸಂಜೆ ಅಂಗನವಾಡಿ ಪುಟಾಣಿಗಳಿಂದ ಮತ್ತು ದೇವ ಶಾಲಾ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು....

ಪ್ರಕೃತಿ ವಿಸ್ಮಯ – ಕಡಿದು ಹಾಕಿದ ಬಾಳೆಯಲ್ಲಿ ಮತ್ತೆ ಗೊನೆ

ಪೆರುವಾಜೆ ಗ್ರಾಮದ ಜಾಲ್ಪಣೆಯ ವನಿತಾ ಅವರ ಜಾಗದಲ್ಲಿ ಕಡಿದು ಹಾಕಿದ ಬಾಳೆ ಗಿಡದಲ್ಲಿ ಮತ್ತೆ ಗೊನೆ ಮೂಡಿದೆ.

ಸುಳ್ಯ : ಬೃಹತ್ ರಕ್ತದಾನ ಶಿಬಿರ

ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸ, ಕೆವಿಜಿ ಸುಳ್ಯ ಹಬ್ಬ ಅಂಗವಾಗಿ ಸುಳ್ಯದಲ್ಲಿ ಬೃಹತ್ ರಕ್ತದಾನ ಶಿಬಿರ ಡಿ.26 ರಂದು ನಡೆಯಿತು. ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ ಯುವಜನರನ್ನು ಹೆಚ್ಚು ಹೆಚ್ಚು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸುಳ್ಯ ಘಟಕದ ನಿರ್ದೇಶಕಿ ಶ್ರೀಮತಿ ಪ್ರಮೀಳಾ ಟಿ ಹೇಳಿದರು ಆದಿ ಡ್ರಾವಿಡ ಯುವ ವೇದಿಕೆ ದ....

ಇತರರಿಗೆ ನೆರವಿನ ಹಸ್ತ ಚಾಚುತ್ತಿದ್ದ ಯುವಕನಿಗೆ ಬೇಕಾಗಿದೆ ನಿಮ್ಮ ನೆರವಿನ ಹಸ್ತ

ಕಷ್ಟಗಳ ಮೇಲೆ ಕಷ್ಟ ಎರಗಿ ಬಂದಾಗ ಅವರ ಕಷ್ಟಕ್ಕೆ ಹೆಗಲು ಕೊಟ್ಟವನ ಬಾಳಿಗೆ ಇಂದು ಕಷ್ಟವು ಬಂದೆರಗಿದೆ. ಕಷ್ಟ ಎಂದು ಹೇಳಿ ಬಂದ ಪ್ರತಿಯೊಬ್ಬರಿಗೂ ತನ್ನ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆ ಬಗ್ಗೆ ಸಹಾಯ ಹಸ್ತ, ನೆರವಿನ ಹಸ್ತ ಅನ್ನುವ ಪ್ರಕಟನೆ ಹಾಕುವ ಮುಖಾಂತರ ಮಾಹಿತಿಯನ್ನು ಹಂಚಿ ಹಲವಿಗೆ ದಾನಿಗಳ ಮೂಲಕ...

ಕಡೆಪಾಲ : ದ್ವಿಚಕ್ರ ವಾಹನ ಡಿಕ್ಕಿ – ಪಾದಾಚಾರಿ ಮೃತ್ಯು

ಕಲ್ಲುಗುಂಡಿ ಕಡೆಪಾಲ ಬಳಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಇಂದು ನಡೆದಿದೆ. ಕಳೆದ ಕೆಲ ದಿನಗಳಿಂದ ಈ ಅಪರಿಚಿತ ವ್ಯಕ್ತಿ ರಸ್ತೆಯುದ್ದಕ್ಕೂ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಕೂಟರ್ ಸವಾರ ಕೊಯನಾಡು ಚಡಾವು ನಿವಾಸಿ ಅಲ್ಪಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ...

ಸುಳ್ಯ : ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಯ ಕುರುಂಜಿಭಾಗ್ ಸಮೀಪ ಇರುವ ಬಿ ಸಿ ಎಂ ಹಾಸ್ಟೆಲ್ ನಲ್ಲಿ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ‌ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಸೋನಿಯಾ (18) ಬೆಂಗಳೂರು ರಾಮನಾಥ ಪುರದ, ಕಾರಮಂಗಲ ತಾಲೊಕಿನ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ ಎಂಬವರ ಪುತ್ರಿ. ಸೋನಿಯಾ ಇಂದು ಕಾಲೇಜಿಗೆ ಹೋಗದೇ...
Loading posts...

All posts loaded

No more posts

error: Content is protected !!