- Wednesday
- July 29th, 2026
ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿಯವರ ತಾಯಿ ಆಯಿಷಾ ಅವರು ಅಲ್ಪಕಾಲದ ಅಸೌಖ್ಯದಿಂದ ಜು 10ರಂದು ನಿಧನರಾದರು.ಅವರಿಗೆ 80 ವರುಷ ವಯಸ್ಸಾಗಿತ್ತು.ಅವರು ದಾವೂದ್ ಸಅದಿ ಸೇರಿದಂತೆ ಐದು ಗಂಡು ಹಾಗೂ ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.(ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)
ಇತ್ತೀಚೆಗೆ ಪೆರಾಜೆ ಕಲ್ಚರ್ಪೆ ಸಮೀಪ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಐವರ್ನಾಡು ನಿವಾಸಿ ಗೋಪಿನಾಥ ನಿಡುಬೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಕಲ್ಲಪಣೆಯ ದಿವಾಕರ ಆಚಾರ್ಯ(45) ಎಂಬವರು ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಾಗಿ ಮೃತಪಟ್ಟ ಘಟನೆ ನಡೆದಿದ್ದು, ಅವರು ವೈರ್ ಅನ್ನು ಕೈಯಲ್ಲಿ ಹಿಡಿಕೊಂಡ ಸ್ಥಿತಿಯಲ್ಲಿದ್ದರು.ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
ಸುಳ್ಯದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅಜ್ಜಾವರ ಗ್ರಾಮದ ಪಡ್ಡಂಬೈಲ್ ವಿಜಯ ರವರು ಜು.04 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 63 ವರ್ಷ ವಯಸ್ಸಾಗಿತ್ತು.ಅವರ ಪಾರ್ಥಿವ ಶರೀರವನ್ನು ರಾತ್ರಿಯೇ ಪಡ್ಡಂಬೈಲಿನ ಅವರ ಮನೆಗೆ ತರಲಾಗಿದ್ದು, ಇಂದು ಪೂರ್ವಾಹ್ನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ, ಪುತ್ರಿ, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು...
ಎಡಮಂಗಲ ಗ್ರಾಮದ ಏನಡ್ಕ ಮಾಧವ ಗೌಡ ರವರು ಜು.03 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುನಂದಾ, ಸಹೋದರರಾದ ಈಶ್ವರ ಗೌಡ ಏನಡ್ಕ, ಲೋಕಪಾಲ ಗೌಡ ಏನಡ್ಕ, ಆನಂದ ಗೌಡ ಏನಡ್ಕ, ಪದ್ಮನಾಭ ಗೌಡ ಏನಡ್ಕ, ಶಿವರಾಮ ಗೌಡ ಏನಡ್ಕ, ಸಹೋದರಿ ಮೋಹಿನಿ ದಾಸಪ್ಪ ಪಾಲೋಳಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆ ಗ್ರಾಮದ ಪಳ್ಳಿಮಜಲು ನಿವಾಸಿ ಗುರುವ ಮೊಗೇರ ರವರು ಜೂ.23 ರಂದು ರಾತ್ರಿ ನಿಧನರಾದರು.ಮೃತರಿಗೆ 43 ವರ್ಷ ವಯಸ್ಸಾಗಿತ್ತು.ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದೆರಡು ತಿಂಗಳಿನಿಂದ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು.ಮೃತರು ಪತ್ನಿ ಸುಶೀಲಾ, ಪುತ್ರರಾದ ತೇಜಸ್, ಶೈಲೇಶ್, ಪುತ್ರಿ ವಿದ್ಯಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.(ವರದಿ : ಎಂ.ಎ ಮುಸ್ತಫಾ ಬೆಳ್ಳಾರೆ)
ಮನೆಯಲ್ಲಿ ನಿಲ್ಲಿಸಿದ್ದ ಕಾರು ತನ್ನಷ್ಟಕ್ಕೆ ಹಿಂದಕ್ಕೆ ಚಲಿಸಿದ ಪರಿಣಾಮ ಅಂಗಳದಲ್ಲಿ ನಿಂತಿದ್ದ ನಿವೃತ್ತ ರೇಂಜರ್ ಜೋಸೇಫ್ ರವರಿಗೆ ಗುದ್ದಿದ್ದರಿಂದ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಮಾ.15 ನಡೆದಿದೆ. ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ರೇಂಜರ್ ಜೋಸೇಫ್ ರವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದ್ದು, ಮನೆಯಲ್ಲಿದ್ದ...
ಮಂಡೆಕೋಲು ಗ್ರಾಮದ ಪೇರಾಲು ಮೂಲೆ ಗಂಗಮ್ಮ-ಚಂಗಪ್ಪ ದಂಪತಿಗಳ ಚತುರ್ಥ ಪುತ್ರರಾದ ಕುಶಾಲಪ್ಪ ಗೌಡ ಪೇರಾಲು ಮೂಲೆ ರವರು ಜ.02 ರಂದು ನಿಧನರಾದರು.ಮೃತರಿಗೆ 47 ವರ್ಷ ವಯಸ್ಸಾಗಿತ್ತು.ಮೃತರು ಸಹೋದರರಾದ ಚಿನ್ನಪ್ಪ ಗೌಡ, ಗೋಪಾಲಕೃಷ್ಣ, ಪರಮೇಶ್ವರ್ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಅನಿತಾ ಹಾಗೂ ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ದೇವಚಳ್ಳ ಗ್ರಾಮದ ದೇವ ಪಾಲೇಪ್ಪಾಡಿ ಪದ್ಮಾವತಿ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಲೋಕಯ್ಯ,ಲವಪ್ಪ, ಧರ್ಮಪಾಲ, ದಾಮೋದರ, ಜಗದೀಶ ಪುತ್ರಿಯರಾದ ಕುಸುಮಾವತಿ ಮೋಹಿನಿ, ಹಿತಾಕ್ಷಿ, ಹರಿಣಾಕ್ಷಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts
