ಮಡಪ್ಪಾಡಿ : ಶೆಟ್ಟಿಮಜಲು ವೀರಾಂಜನೇಯ ಶಾಖೆ ಉದ್ಘಾಟನೆ- ಅಧ್ಯಕ್ಷರಾಗಿ ವಿನೋದ್ ಪೂಂಬಾಡಿ, ಕಾರ್ಯದರ್ಶಿಯಾಗಿ ಭಗತ್ ದೇರಾಜೆ

ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡ ಇದರ ನೂತನ ವೀರಾಂಜನೇಯ ಶಾಖೆ ಶೆಟ್ಟಿಮಜಲು ಇದರ ಉದ್ಘಾಟನಾ ಕಾರ್ಯಕ್ರಮವು ಸೆ. 26 ರಂದು ಮಡಪ್ಪಾಡಿ ಯುವಕ ಮಂಡಲದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಪ್ರಖಂಡದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ ವಹಿಸಿದ್ದರು. ಮಡಪ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎನ್.ಟಿ. ಹೊನ್ನಪ್ಪ ದೀಪ ಬೆಳಗಿಸಿ...

ಪೆರಾಜೆ : ಭಂಡಾರ್ಕರ್ ಕೋವಿ ಮತ್ತು ಮದ್ದುಗುಂಡು ಮಾರಾಟ ಮತ್ತು ಸರ್ವಿಸ್ ಸೆಂಟರ್ ಶುಭಾರಂಭ

ಬಿ. ಪ್ರಭಾಕರ ಭಂಡಾರಿಯವರ ಕೋವಿ ಮತ್ತು ಮದ್ದುಗುಂಡು ಮಾರಾಟ ಮತ್ತು ಸರ್ವೀಸ್ ಸೆಂಟರ್‌ನ ಉಪಶಾಖೆಯು ಪ್ರಶಾಂತ್ ಭಂಡಾರಿಯವರ ಮಾಲಕತ್ವದಲ್ಲಿ ಭಂಡಾರ್ಕರ್ ಸರ್ವೀಸ್ ಸೆಂಟರ್ ಪೆರಾಜೆಯಲ್ಲಿ ಸೆ.೨೭ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಶ್ರೀಮತಿ ಲೀಲಾವತಿ ಜಯಪ್ರಕಾಶ್ ಊರುಬೈಲು, ಶ್ರೀಮತಿ ಶಾಂತಿ ಭಂಡಾರಿ ಹಾಗೂ ರೇಷ್ಮಾ ಶೇಟ್‌ರವರು ಉದ್ಘಾಟಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಪ್ರಶಾಂತ್ ಭಂಡಾರಿ ಸ್ವಾಗತಿಸಿ, ಪ್ರಾರ್ಥನಾ ಭಂಡಾರಿ ವಂದಿಸಿದರು.
Ad Widget

ಮಸೂದೆ ತಿದ್ದುಪಡಿ ವಿರೋಧಿಸಿ ಸಂಪಾಜೆ ಗೇಟ್ ಬಳಿ ಕಾಂಗ್ರೆಸ್ ಪ್ರತಿಭಟನೆ

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ಮಸೂದೆ ಯನ್ನು ವಿರೋಧಿಸಿ ಗಡಿಭಾಗವಾದ ಸಂಪಾಜೆ ಗೇಟ್ ಬಳಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಯುವ ಕಾಂಗ್ರೆಸ್...

ಸುಬ್ರಹ್ಮಣ್ಯ : ಪೋಷಣ್ ಅಭಿಯಾನ ಮಾಸಾಚರಣೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮವು ಸೆ.28 ರಂದು ಸುಬ್ರಹ್ಮಣ್ಯ ರಾಜೀವ್‌ಗಾಂಧಿ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್‌ನ ಆಡಳಿತಾಧಿಕಾರಿ ದಾಮೋದರ ಕೆ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾ.ಪಂ....

ಗಾಂಧಿನಗರದಲ್ಲಿ ನ.ಪಂ.ಮೀಸಲಿಟ್ಟ ಬಾಡಿಗೆ ಕೋಣೆಯ ವಿವರ ನೀಡುವಂತೆ ಮನವಿ

ಸುಳ್ಯ ಗಾಂಧಿನಗರದ ಮೀನು ಮಾರುಕಟ್ಟೆ ಬಳಿ ಇರುವ ಬಾಡಿಗೆ ಕೋಣೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಕೋಣೆಗಳನ್ನು ಕೆಲವು ಪ್ರಭಾವಿ ಬೇನಾಮಿ ವ್ಯಕ್ತಿಗಳು ಮೀಸಲು ಹೆಸರಿನಲ್ಲಿ ಕಡಿಮೆ ಬಾಡಿಗೆಗೆ ಗೊತ್ತುಪಡಿಸಿಕೊಂಡು ಪಡೆದು 3 ನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆ ನಿಗದಿ ಪಡಿಸಿ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಪೂರ್ಣ...

ಕೃಷಿ ಮಸೂದೆ ವಿರೋಧಿಸಿ ಸಂಪಾಜೆ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತ ದಲಿತ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದರ ವಿರುದ್ಧವಾಗಿ ಇಂದಿನ ಭಾರತ ಬಂದ್ ನ ಭಾಗವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ವತಿಯಿಂದ ಉಸ್ತುವಾರಿ ಅಶ್ರಫ್ ಟರ್ಲಿಯವರ ನೇತ್ರತ್ವದಲ್ಲಿ ಸಂಪಾಜೆ ಗೇಟ್ ನ್ನು ಸಾಂಕೇತಿಕವಾಗಿ ಬಂದ್ ಮಾಡಿ ಪ್ರತಿಭಟನಾ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ...

ಮಸೂದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆಯ ಮೂಲಕ ದೇಶದ ಜನತೆಯ ಮೇಲೆ ದಬ್ಬಾಳಿಕೆ ಸರಿಯಲ್ಲ – ಕೆಪಿ ಜೋನಿ

ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಕರ್ನಾಟಕ ಬಂದ್ ಪ್ರತಿಭಟನೆಯ ಅಂಗವಾಗಿ ಸುಳ್ಯ ತಾಲೂಕಿನ ರೈತ ಹಾಗೂ ಕಾರ್ಮಿಕ ಸಂಘಟನೆಗಳು ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನಡೆದ ಕೇಂದ್ರ ಸರಕಾರದ ರೈತ ಮಸೂದೆ ತಿದ್ದುಪಡಿ ವಿರೋಧಿಸಿ ಸೆ.೨೮ರಂದು ಪ್ರತಿಭಟನಾ ಸಭೆ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು. ಸಭೆಗೂ ಮುನ್ನ ಸುಳ್ಯ ಜ್ಯೋತಿ ವೃತ್ತದಿಂದ...

ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಮಸೂದೆಗಳನ್ನು ಹಿಂಪಡೆಯಬೇಕೆಂದು ವಿವಿಧ ಸಂಘಟನೆಗಳಿಂದ ಸುಳ್ಯದಲ್ಲಿ ಇಂದು ಪ್ರತಿಭಟನೆ

ರೈತ, ಕಾರ್ಮಿಕ ವಿರೋಧಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ ವಾಣಿಜ್ಯ ಮತ್ತು ಇತರ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ,ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯದ ರೈತ-ಕಾರ್ಮಿಕ ದಲಿತ ಸಂಘಗಳು ನೀಡಿದ್ದ ಕರ್ನಾಟಕ ಬಂದ್ ಪ್ರತಿಭಟನೆ ಅಂಗವಾಗಿ ಸುಳ್ಯದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಇಂದು ನಡೆಯಿತು. ಸಭೆಗೂ ಮುನ್ನ ಸುಳ್ಯ...

ಗುತ್ತಿಗಾರು : ಜಾನುವಾರು ಅಕ್ರಮ ಸಾಗಾಟ ಪತ್ತೆ -ಪೋಲಿಸರಿಗೆ ಒಪ್ಪಿಸಿದ ಸಂಘಟನೆ ಕಾರ್ಯಕರ್ತರು

ಗುತ್ತಿಗಾರಿನ ಭಜರಂಗದಳ ಭಗತ್ ಸಿಂಗ್ ಶಾಖೆಯ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಕಡ್ತಲ್ಕಜೆ ಎಂಬಲ್ಲಿ ಯಾವುದೇ ಅನುಮತಿ ಪಡೆಯದೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಡಿದು ಸುಬ್ರಹ್ಮಣ್ಯ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಹಾಲೆಮಜಲು ಶಾಲೆಯಲ್ಲಿ ಶ್ರಮದಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಾಲ್ಕೂರು ಹಾಲೆಮಜಲು ಒಕ್ಕೂಟದ ವತಿಯಿಂದ ಹಾಲೆಮಜಲು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಶಾಲಾ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು. ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರು ಉಪಹಾರ ನೀಡಿ ಸಹಕರಿಸಿದರು.
Loading posts...

All posts loaded

No more posts

error: Content is protected !!