ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. ೨೫ ಮತ್ತು ೨೬ರಂದು ನಡೆಯಲಿದೆ. ಕಾರ್ಯಕ್ರಮವು ಪೂಜ್ಯ ಬ್ರಹ್ಮಶ್ರೀ ರವೀಶ್ರೀ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ. ಫೆ.೨೫ರಂದು ಬೆಳಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ಮೇಲೇರಿಗೆ ಕೊಳ್ಳಿ ಜೋಡಣೆ, ನಂತರ ಶ್ರೀ ರಾಮ ಭಜನಾ ಮಂಡಳಿ ಕಾಚಿಲ ಇವರಿಂದ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ತಯಾರಿ ಕಾರ್ಯಕ್ರಮ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿ ಬಳಸಿ ಮತ್ತು ಬೆಂಕಿ ಬಳಸದೇ ಅಡುಗೆ ತಯಾರಿ ನಡೆಯಿತು. ಶಾಲೆಯ ಸ್ಕೌಟ್ಸ್ 28 ಮತ್ತು ಗೈಡ್ಸ್ 16 ವಿದ್ಯಾರ್ಥಿಗಳು ಭಾಗವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ಉಡುವೆಕೋಡಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ, ಉಪಾಧ್ಯಕ್ಷರಾದ...
Ad Widget

ಮಾ- 01 ; ಅಲೆಕ್ಕಾಡಿಯಲ್ಲಿ ಕಟೀಲು ಮೇಳದವರಿಂದ “ಶ್ರೀ ದೇವಿಲಲಿತೋಪಖ್ಯಾನ” ಯಕ್ಷಗಾನ ಬಯಲಾಟ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದ ಶ್ರೀ ದೇವಿಲಲಿತೋಪಖ್ಯಾನ ಯಕ್ಷಗಾನ ಬಯಲಾಟ ಮಾ.01 ರಂದು ಅಲೆಕ್ಕಾಡಿ ಶಾಲಾ ವಠಾರಲ್ಲಿ ಪ್ರದರ್ಶನಗೊಳ್ಳಲಿದೆ. ಮಾ.01 ರಂದು ಸಾಯಂಕಾಲ ಗಂಟೆ 05.30ಕ್ಕೆ ಸರಿಯಾಗಿ 'ಚೌಕಿ ಪೂಜೆ' ಹಾಗೂ ರಾತ್ರಿ ಗಂಟೆ 08.00ರ ನಂತರ ಅನ್ನಸಂತರ್ಪಣೆ ಜರಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸಮಿತಿ ಅಲೆಕ್ಕಾಡಿ, ಮುರುಳ್ಯ...

ಸುಳ್ಯ ಮಂಡಲ ನೂತನ ಪದಾಧಿಕಾರಿಗಳ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಘೋಷಣೆ.

ಸುಳ್ಯ ಮಂಡಲ ನೂತನ ಅಧ್ಯಕ್ಷರಾದ ವೆಂಕಟ್ ವಳಲಂಬೆರವರಿಗೆ ನಿರ್ಗಮಿತ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅಧಿಕಾರವನ್ನು ಹಸ್ತಾಂತರಿಸಿದರು. ನೂತನ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ ಕುಮಾರ್ ಕಂದಡ್ಕ , ಪ್ರದೀಪ್ ರೈ ಮನವೊಳಿಕೆ ಖಜಾಂಜಿಯಾಗಿ ಸುಬೋದ್ ಶೆಟ್ಟಿ ಮೇನಾಲ , ಉಪಾಧ್ಯಕ್ಷರುಗಳಾಗಿ ಶ್ರೀನಾಥ್ ರೈ ಬಾಳಿಲ , ರಮೇಶ್ ಕಲ್ಪುರೆ , ಬಾಸ್ಕರ ಗೌಡ ಇಚ್ಲಾಂಪಾಡಿ...

ಸುಳ್ಯ ಬಿಜೆಪಿ ಕಾರ್ಯನಿರ್ವಹಣಾ ಸಭೆ, ಜಿಲ್ಲಾಧ್ಯಕ್ಷರು ಭಾಗಿ

ಕಾರ್ಯನಿರ್ವಹಣಾ ಸಭೆಯಲ್ಲಿ ಗೊಂದಲಗಳ ಬಗ್ಗೆ ಒಪ್ಪಿಕೊಂಡ ಅಧ್ಯಕ್ಷರು ಸುಳ್ಯ ಬಿಜೆಪಿ ಮಂಡಲ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಿನ್ನಲೆಯಲ್ಲಿ ಇಂದು ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯನಿರ್ವಹಣಾ ಸಭೆಯು ಸುಳ್ಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಕಂಜಿಪಿಲಿ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಸತೀಶ್ ಕುಂಪಲ ಮಾತನಾಡುತ್ತಾ ಸುಳ್ಯದಲ್ಲಿ ಗೊಂದಲ ಇರುವುದು ನಿಜ ಆದರೆ ಅವೆಲ್ಲವನ್ನು...

ಫೆ-25;  ಮಂಡೆಕೋಲಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮತ್ತು ರಕ್ತದಾನ ಶಿಬಿರ

ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ , ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಫೆಬ್ರವರಿ 25 ಅದಿತ್ಯವಾರದಂದು ಮಂಡೆಕೋಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಧಾರ್ ನೊಂದಾಣಿ ಹಾಗೂ ತಿದ್ದುಪಡಿ ಶಿಬಿರ ಬೆಳ್ಳಿಗೆ 9 ರಿಂದ ಸಂಜೆ 5...

ಆಶಿಕಾ ಜಿ.ಆರ್ ಬಿ ಫಾರ್ಮ್ ನಲ್ಲಿ ದ್ವಿತೀಯ ರ‍್ಯಾಂಕ್‌

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ರಾಜೇಶ್ ತುಳಸಿ ಗೋರಡ್ಕ ದಂಪತಿಗಳ ಪುತ್ರಿ ಕುಮಾರಿ ಆಶಿಕಾ ಜಿ.ಆರ್,ಇವರು ಬಿ. ಫಾರ್ಮ ನಲ್ಲಿ ಕರಾವಳಿ ಕಾಲೇಜು ಆಫ್ ಫಾರ್ಮಸಿ,ಮಂಗಳೂರಿನಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದು ಯುನಿವರ್ಸಿಟಿಯಲ್ಲಿ ಐದು ವಿಷಯಗಳಲ್ಲಿ ಹಾಗೂ ಒಂದು ಪ್ರಾಜೆಕ್ಟ್ ನಲ್ಲಿ ರ‍್ಯಾಂಕ್‌ ಪಡೆದಿರುವ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಜ್ಜಾವರ ವಿವೇಕ್ ಶಾಲೆ, ಗ್ರೀನ್ ವ್ಯೂ ಹಾಗೂ...

ನಿವೇದಿತಾ ಸಂಚಾಲನಾ ಸಮಿತಿ ಜಾಲ್ಸೂರು ರಚನೆ.

ನಿವೇದಿತಾ ಸಂಚಾಲನಾ ಸಮಿತಿ ಜಾಲ್ಸೂರು ರಚನೆಗೊಂಡಿತು. ಸಂಚಾಲಕರಾಗಿ ಶ್ರೀಮತಿ ಪ್ರಸನ್ನ ಹೇಮಕರ ನೆಕ್ರಾಜೆ, ಸಹಸಂಚಾಲಕರಾಗಿ ಶ್ರೀಮತಿ ವಿಜಯ ಕಾಳಮನೆ, ಆಯ್ಕೆಯಾದರು ಸದಸ್ಯರುಗಳಾಗಿ ಶ್ರೀಮತಿ ರಶ್ಮಿ ಕೆ ,ಯಂ. ಕುತ್ಯಾಳ, ಶ್ರೀಮತಿ ಪದ್ಮಾವತಿ ರೈ ಕುಕ್ಕಂದೂರು, ಶ್ರೀಮತಿ ರಶ್ಮಿ ಕಾಳಮನೆ, ಶ್ರೀಮತಿ ಪವಿತ್ರ ಎಂ ಕೆ ,,ಶ್ರೀಮತಿ ಆಶಾ ರೈ ಕುಕ್ಕಂದೂರು, ಶ್ರೀಮತಿ ಬೇಬಿ ವಿಶ್ವನಾಥ ಪದವು...

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಸಂಪನ್ನ

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಿತು.ಫೆ.20 ರಂದು ಹಸಿರುವಾಣಿ ಸಮರ್ಪಣೆಗೊಂಡು ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ತಂತ್ರಿಗಳ ಆಗಮನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು,...

ಫೆ.28 ರಂದು ದೇವಚಳ್ಳ ಗ್ರಾಮ ಸಭೆ – ಫೆ.26 ರಂದು ವಾರ್ಡ್ ಸಭೆ

ದೇವಚಳ್ಳ ಗ್ರಾಮ ಪಂಚಾಯತ್ ನ 2023- 24 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಫೆ.28 ರಂದು ಪೂ. ಗಂಟೆ 11.00 ಕ್ಕೆ ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆಯಲಿದೆ. ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಸಮನ್ವಯ ಅಧಿಕಾರಿ ಆಗಮಿಸಲಿದ್ದಾರೆ. ದೇವಚಳ್ಳ ಗ್ರಾ.ಪಂ ವ್ಯಾಪ್ತಿಯ ವಾರ್ಡ್ ಸಭೆ ಫೆ.26 ರಂದು ನಡೆಯಲಿದೆ. 4 ನೇ ವಾರ್ಡ್ ಸಭೆ ಪೂ.10 ಗಂಟೆಗೆ...
Loading posts...

All posts loaded

No more posts

error: Content is protected !!