- Monday
- August 31st, 2026
ಕೊಲ್ಲಮೊಗ್ರದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಮಾಡುವ ಭಾಗ್ಯ ಒದಗಿಬಂದಿದ್ದು ವಿಮಾನವೇರುವ ಸಂಭ್ರಮದಲ್ಲಿದ್ದಾರೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ "ಸಂಜೀವಿನೀ"ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ...
೨೦೧೮ರಲ್ಲಿ ಆಗಿನ ಕರ್ನಾಟಕ ಸರಕಾರವು ರೈತರ ಸಂಕಷ್ಟ ಪರಿಹರಿಸಲು ರೈತರು ಸಹಕಾರಿ ಸಂಘಗಳಿAದ ಪಡೆದ ಸಾಲಗಳಲ್ಲಿ ರೂಪಾಯಿ ೧ ಲಕ್ಷದವರೆಗಿನ ಮೊಬಲಗನ್ನು ಮನ್ನಾ ಮಾಡಿ ಆದೇಶ ನೀಡಿತು. ಸಾಲವಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ಈ ಕುರಿತು ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಇದನ್ನು ನಂಬಿ ಸರಕಾರ ಸೂಚಿಸಿದ ಅರ್ಹತಾ ಪಟ್ಟಿಯಲ್ಲಿ ಬರುವ ರೈತರಿಂದ ಒತ್ತಾಯಿಸಿ ಅರ್ಜಿಗಳನ್ನು...
ವಿಜಯ ಕರ್ನಾಟಕ ಪತ್ರಿಕೆ ಕೊಡ ಮಾಡುವ ಸೂಪರ್ ಸ್ಟಾರ್ ರೈತ ಜಿಲ್ಲಾ ಪ್ರಶಸ್ತಿಯು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ. ನವೀನ್ ಚಾತುಬಾಯಿ ಅವರಿಗೆ ಲಭಿಸಿದೆ. ಫೆ. ೨೫ ರಂದು ಬಂಟ್ವಾಳದ ಒಡಿಯೂರಿನ ಜ್ಞಾನ ಮಂದಿರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ನವೀನ್ ಚಾತುಬಾಯಿಯವರು ಪ್ರಶಸ್ತಿ ಸ್ವೀಕರಿಸಿದರು.ನವೀನ್ ಚಾತುಬಾಯಿಯವರು ಐವರ್ನಾಡು ಮಾಜಿ ಗ್ರಾ.ಪಂ. ಸದಸ್ಯರಾಗಿ, ಸುಳ್ಯದ ಮಹಶೀರ್...
ಸುಳ್ಯ ಜ್ಯೋತಿ ಸರ್ಕಲ್ ಬಳಿ ಫೆ.೨೫ರಂದು ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ತಡೆದು ನಿಲ್ಲಿಸಿದ್ದರು. ಅದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಜಾನುವಾರು ಸಹಿತ ವಾಹನ ವಶಪಡಿಸಿಕೊಳ್ಳಲಾಗಿದೆ.ಸುಳ್ಯ ಎಸ್.ಐ. ಈರಯ್ಯ ದೂಂತೂರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆರೋಪಿ...
ಪಂಬೆತ್ತಾಡಿ ಸ.ಹಿ.ಪ್ರಾ.ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಅನೀಶ್ ಕಲ್ಚಾರು ಇನ್ ಸ್ಪೈಯರ್ ಅವಾರ್ಡ್ ಆಯ್ಕೆಯಾಗಿದ್ದಾರೆ.ಅನೀಶ್ ಕಲ್ಚಾರು ವಿದ್ಯುತ್ ಶಕ್ತಿ ಉತ್ಪಾದಕ ಎಂಬ ವಿಜ್ಞಾನ ಮಾದರಿ ತಯಾರಿಸಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೊಡಮಾಡುವ ಇನ್ ಸ್ಪೈಯರ್ ಆವಾರ್ಡ್ ಆಯ್ಕೆಯಾಗಿದ್ದಾರೆ.ವಿಜ್ಞಾನ ಶಿಕ್ಷಕಿ ಶ್ರೀಮತಿ ಭವ್ಯ ಬಿ ಮಾರ್ಗದರ್ಶನ ನೀಡಿದ್ದಾರೆ. ಇವರು ಸತ್ಯಶಂಕರ ಕಲ್ಚಾರು ಹಾಗೂ...
https://www.youtube.com/live/AJaadiivPWY?si=mmvrOpvwHpBhxM1h ಕಲ್ಮಡ್ಕ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. 25 ಮತ್ತು ಫೆ.26 ರಂದು ನಡೆಯಿತು.ಫೆ.25 ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ನಂತರ ಮೇಲೇರಿಗೆ ಕೊಳ್ಳಿ ಜೋಡಣೆ ಆರಂಭವಾಯಿತು. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ರಾತ್ರಿ ಮೇಲೇರಿಗೆ ಅಗ್ನಿ...
ಇಂದಿನಿಂದ ಮೂರು ದಿನಗಳ ಕಾಲ ಸುಳ್ಯ ನಗರದ ಶ್ರೀ ರಾಮ ಪೇಟೆಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವವು ನಡೆಯಲಿದೆ. ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.ಇಂದು ಪ್ರಾತ:ಕಾಲ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಹಸಿರುವಾಣಿ ಮೆರವಣಿಗೆ ಸಾಗಿ ಬರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಾಗಿ ದಾಸ...
ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಫೆ.24 ರಂದು ನಡೆದ 5ನೆ ವರ್ಷದ ಪುತ್ತೂರು ಮೆಸ್ಕಾಂ ವಿಭಾಗ ಮಟ್ಟದ ಪವರ್ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಉಪವಿಭಾಗ ತಂಡವು ಗೆದ್ದು ಪ್ರಥಮ ಸ್ಥಾನ ಗಳಿಸಿರುತ್ತದೆ.ಒಟ್ಟು 12 ತಂಡಗಳು ಭಾಗವಹಿಸಿದ್ದು, ಪುತ್ತೂರು ನಗರ ಉಪವಿಭಾಗದ ತಂಡದೆದುರು ಅಭೂತಪೂರ್ವ ಪ್ರದರ್ಶನ ತೋರ್ಪಡಿಸಿ ಸುಬ್ರಹ್ಮಣ್ಯ ಉಪವಿಭಾಗವು ಜಯಶಾಲಿಯಾಗಿರುತ್ತದೆ. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ...
ಫೆ. 24 ರಂದು ಪೇರಾಲು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22 ನೇ ವರ್ಷದ ಶ್ರೀ ಕೊರಗತನಿಯ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು ಜರುಗಿತು.ಫೆ. 24 ರಂದು ಬೆಳಗ್ಗೆ ಗಣಪತಿ ಹೋಮ ಮತ್ತು ನಾಗಪೂಜೆ, ನಂತರ ಶನಿ ಪೂಜೆ, ಹೂವಿನಪೂಜೆ, ಕಲಶ ಸ್ನಾನವಾಗಿ ನಂತರ ಸ್ಥಳೀಯ ಭಜನಾ ತಂಡಗಳ ಸದಸಸ್ಯರಿಂದ...
Loading posts...
All posts loaded
No more posts
