ಅಜ್ಜನಗದ್ದೆ : ಬಿಜೆಪಿ ಬಂಡಾಯ ಅಭ್ಯರ್ಥಿ ಭೇಟಿ ಮಾಡಿದ ಎಸ್.ಎನ್. ಮನ್ಮಥ

ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರಾಧಾಕೃಷ್ಣ ಗೌಡ ಕೊರತ್ಯಡ್ಕ ಮತ್ತು ಬೆಂಬಲಿಗರನ್ನು ಎಸ್.ಎನ್. ಮನ್ಮಥ ಭೇಟಿ ಮಾಡಿ ಮಾತನಾಡಿದರು.

ವೆಂಕಪ್ಪ ಗೌಡರಿಂದ ಕಾಂಗ್ರೆಸ್ ಕಾರ್ಯಕರ್ತರ ಭೇಟಿ

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಕೆಪಿಸಿಸಿ ಮಾಜಿ ಸದಸ್ಯ ಎಂ. ವೆಂಕಪ್ಪ ಗೌಡ ರವರು ಅರಂಬೂರು, ಅರಂತೋಡು, ಗೂನಡ್ಕ, ಸಂಪಾಜೆ, ಜಾಲ್ಸೂರು ಕನಕಮಜಲು ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.
Ad Widget

ಸುಳ್ಯ ಜಾತ್ರೆ – ಇಂದು ಗೊನೆ ಮುಹೂರ್ತ

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜ.02 ರಿಂದ ಜ.12 ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದ್ದು ಗೊನೆ ಮುಹೂರ್ತ ಡಿ. 27 ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಶ್ರೀಮತಿ ಎಂ.ಮೀನಾಕ್ಷಿ ಗೌಡ,ಎ.ರಮೇಶ ಬೈಪಡಿತ್ತಾಯ, ಎನ್.ಎ.ರಾಮಚಂದ್ರ, ಎನ್.ಜಯಪ್ರಕಾಶ್...

ಅರಂಬೂರು : ಬಿಜೆಪಿ ಅಭ್ಯರ್ಥಿಗಳಿಂದ ಮತಯಾಚನೆ

ಆಲೆಟ್ಟಿ ಗ್ರಾಮ ಪಂಚಾಯತ್ ನ ಅರಂಬೂರು 6 ಮತ್ತು 7ನೇ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುದೇಶ್ ಪುಷ್ಪಾವತಿ ಅನಿತಾ, ರತೀಶ್ ವೇದಾವತಿ ರವರಿಂದ ಮತಯಾಚನೆ ನಡೆಸಿದರು.

ಕಡಬ : ಕೈಕಂಬಕ್ಕೆ ಶಾಸಕ ಎಸ್. ಅಂಗಾರ ಭೇಟಿ

ಕಡಬ ತಾಲೂಕಿನ ಕೈಕಂಬಕ್ಕೆ ಶಾಸಕರಾದ ಎಸ್. ಅಂಗಾರರವರು ಚುನಾವಣಾ ವೀಕ್ಷಣೆಗಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮುರಳೀಧರ ಎರ್ಮಾಯಿಲ್, ಜಯಪ್ರಕಾಶ್ ಎರ್ಮಾಯಿಲ್, ಪುರುಷೋತ್ತಮ ಎರ್ಮಾಯಿಲ್, ವಾಡ್ಯಪ್ಪ ಗೌಡ ಎರ್ಮಾಯಿಲ್, ಹರೀಶ್ ಚೆರು, ಯಶೋಧರ ಬಳ್ಳಡ್ಕ, ದಾಮೋದರ ಪಲ್ಲಿಗದ್ದೆ, ಮೋಹನ್ ಪಲ್ಲಿಗದ್ದೆ, ಭವ್ಯಶ್ರೀ ಕುಕ್ಕಾಜೆ, ಶಾರದ ಲಕ್ಷ್ಮಣ ಆಚಾರ್ಯ, ಪುರುಷೋತ್ತಮ ಪಲ್ಲಿಗದ್ದೆ, ಶಾರದ ಕುಕ್ಕಾಜೆ ಹಾಗೂ...

ಮಡಪ್ಪಾಡಿ : ಶೇ 50 ಗಡಿ ದಾಟಿದ ಮತದಾನ

ಮಡಪ್ಪಾಡಿ ಗ್ರಾಮ ಪಂಚಾಯತ್ ನ 2 ವಾರ್ಡ್ ಗಳ 5 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ಮತ ಬೇಟೆಗೆ ಕೊನೆಯ ಕಸರತ್ತು ನಡೆಸುವುದು ಕಂಡುಬರುತ್ತಿದೆ. ಚುನಾವಣೆ ಕೇಂದ್ರದಲ್ಲಿ ಕೊರೊನ ಮುಂಜಾಗೃತಾ ಕ್ರಮಗಳೊಂದಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೆ ವಾರ್ಡ್-1 ರಲ್ಲಿ 53.55% ವಾರ್ಡ್-2 ರಲ್ಲಿ 49.16% ಮತದಾನ ನಡೆದಿದೆ.

ಕಲ್ಮಡ್ಕ : ಅತ್ಯಾಚಾರ ಪ್ರಕರಣ ಬಿಜೆಪಿ ಅಭ್ಯರ್ಥಿ ಅರೆಸ್ಟ್

ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತನ್ನ ಸೋದರ ಸಂಬಂಧಿಯಾಗಿರುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೋಲೀಸರು ಬಂಧಿಸಿದ ಘಟನೆ ಡಿ.25 ರಂದು ವರದಿಯಾಗಿದೆ. ಕಲ್ಮಡ್ಕ ಗ್ರಾಮದ ವಾರ್ಡ್ 1 ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬವರು ಪೊಲೀಸರ ವಶವಾಗಿದ್ದಾರೆ. ಚಿಕ್ಕಪ್ಪನ ಮಗಳಿಗೇ ಅವರು ಈ ರೀತಿ...

ಎಣ್ಮೂರು ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಎಣ್ಮೂರು ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಾಯಿಲಪ್ಪ ಗೌಡ, ರಾಜೀವಿ ರೈ, ಸುಮಿತ್ರಾ ಹಾಗೂ ಜ್ಯೋತಿ ಎನ್ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಎಣ್ಮೂರು ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಎಣ್ಮೂರು ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪ್ರವೀಣ್ ಹೇಮಳ, ದಿವ್ಯಾ ಯೋಗಾನಂದ, ರೇವತಿ ರಘು ಹಾಗೂ ಸವಿತಾ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಕಲ್ಮಡ್ಕ : ಎಸ್ ಡಿ ಪಿ ಐ ಬೆಂಬಲಿತ ಹಮೀದ್ ಮರಕ್ಕಡ ಮತಯಾಚನೆ

ಕಲ್ಮಡ್ಕ ಗ್ರಾ.ಪಂ.ನ ಒಂದನೇ ವಾರ್ಡ್ ನ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ಹಮೀದ್ ಮರಕ್ಕಡ ಪಡ್ಪಿನಂಗಡಿ ಶಾಲಾ ಬೂತ್ ಬಳಿ ಕೊನೆ ಹಂತದ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಬಲಿಗರಾದ ಅಶ್ರಫ್ ಮರಕ್ಕಡ, ಜಕಾರಿಯ ಮುಚ್ಚಿಲ ಮತ್ತಿತರರಿದ್ದರು.
Loading posts...

All posts loaded

No more posts

error: Content is protected !!