ಡಿ.30 ರಂದು ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ನಿಷೇದಾಜ್ಞೆ – ಡಿಸಿ ಆದೇಶ

ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಡಿ.30 ರಂದು ಮತ ಎಣಿಕಾ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಿರಣ್ ದೇವರಗುಂಡ

ಮಂಡೆಕೋಲು ಮುರೂರು ರಸ್ತೆಯಲ್ಲಿ ಬಿದ್ದು ಸಿಕ್ಕಿದ ಸುಮಾರು 8500 ರೂ ಹಣವಿದ್ದ ಪರ್ಸನ್ನು ವಾರಿಸುದಾರರಿಗೆ ಹಿಂತಿರುಗಿಸಿದ ಕಿರಣ್ ದೇವರಗುಂಡ ಅವರ ಪ್ರಾಮಾಣಿಕತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Ad Widget

ಸುಳ್ಯ : ರಿಕ್ಷಾದಿಂದ ಬಿದ್ದ ಮಗು – ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ವೈರಲ್ ವಿಡಿಯೋ ಇಲ್ಲಿದೆ

ಸುಳ್ಯದ ಮುಖ್ಯರಸ್ತೆಯ ಜಟ್ಟಿಪಳ್ಳ ತಿರುವಿನಲ್ಲಿ ರಿಕ್ಷಾವೊಂದಕ್ಕೆ ಕಾರು ಅಡ್ಡಬಂದಾಗ ರಿಕ್ಷಾದಲ್ಲಿದ್ದ ಮಗು ರಸ್ತೆಗೆ ಬಿದ್ದ ಘಟನೆ ಡಿ.26 ನಡೆದಿದೆ. ತಕ್ಷಣ ಆಟೋ ಚಾಲಕ ಮಗು ಬೀಳುತ್ತಿದ್ದಂತೆ ಮೇಲಕ್ಕೆತ್ತಿದ್ದಾನೆ. ಈ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://youtu.be/Uel6UKYaP7Q

ಕಾನಾವುಜಾಲು : ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಪೆರುವಾಜೆ ಗ್ರಾಮದ ಕಾನಾವುಜಾಲಿನಲ್ಲಿ ಧರ್ಮದೈವ, ಪಿಲಿಭೂತ, ಶಿರಾಡಿದೈವ ಹಾಗೂ ಉಪದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಭಿಷೇಕ ಡಿ.28 ರಂದು ವೇ.ಮೂ. ಪಂಜ‌ ನಾರಾಯಣ ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಿತು.ಡಿ.21 ರಿಂದ‌ ಡಿ.28 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಪವಮಾನ ಹೋಮ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸೋಮವಾರ ಬೆಳಗ್ಗೆ ಧರ್ಮದೈವ,ಪಿಲಿಭೂತ,...

ಬೆಳ್ಳಾರೆ : ಉಮಿಕ್ಕಳ ಶ್ರೀ ನಾಗರಾಜ ಕ್ಷೇತ್ರದಲ್ಲಿ ಪ್ರತಿಷ್ಠೆ ಮತ್ತು ಕಲಶಾಭಿಷೇಕ

ಬೆಳ್ಳಾರೆ ಗ್ರಾಮದ ಉಮಿಕ್ಕಳ ( ಕೊಳಂಬಳ) ಶ್ರೀ ನಾಗರಾಜ ಕ್ಷೇತ್ರದಲ್ಲಿ ದೇರೆಬೈಲು ತಂತ್ರಿ ಮುಕ್ಕೂರು ಶ್ರೀ ಪತಂಜಲಿ ಶಾಸ್ತ್ರಿಯವರ ನೇತೃತ್ವದಲ್ಲಿ ನಾಗದೇವರಾದ ನಾಗವೀಣಾ ಬ್ರಹ್ಮ,ನಾಗಕನ್ನಿಕೆ,ಸಂತಾನ ನಾಗ, ನಾಗರಾಜ ಹಾಗೂ ನಾಗ ಚಾಮುಂಡಿಯ ಪ್ರತಿಷ್ಠೆ ಮತ್ತು ಕಲಶಾಭಿಷೇಕವು ಡಿ.28 ರಂದು ನಡೆಯಿತು. ಡಿ.27 ರಂದು ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ,ಸಪ್ತಶುದ್ದಿ,ಪ್ರಾಸಾದ ಶುದ್ಧಿ,ಭೂವರಾಹ ಹೋಮ,ಮಹಾಗಣಪತಿ ಹೋಮ, ಸಾಯಂಕಾಲ ರಾಕ್ಷೋಘ್ನಹೋಮ,...

ಜಯನಗರ : ದೃಷ್ಟಿ ಚಾರಿಟೇಬಲ್ ವತಿಯಿಂದ ಕ್ಯಾಲೆಂಡರ್ ವಿತರಣೆ

ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿಯವರ ನೇತೃತ್ವದಲ್ಲಿ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಯನಗರ 3ನೇ ವಾರ್ಡ್ ನ ಮನೆಗಳಿಗೆ 2021 ರ ಕ್ಯಾಲೆಂಡರ್ ಗಳನ್ನು ಡಿಸೆಂಬರ್ 28ರಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಅಭಿವೃದ್ಧಿ ಕಾವಲು ಸಮಿತಿ ಅಧ್ಯಕ್ಷ ದೀಕ್ಷಿತ್ ಕುಮಾರ್ ಜಯನಗರ,...

ಸುಂದರ್ ರಾಜ್ ರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ

ಕೊರೋನಾ ಸಂಕಷ್ಟ ಕಾಲದಲ್ಲಿ ಸುಳ್ಯದಿಂದ ಹೊರರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳಲು ಕೂಲಿ ಕಾರ್ಮಿಕರಿಗೆ, ಹಾಗೂ ಪ್ರಯಾಣಿಕರಿಗೆ ಸರಕಾರದ ನಿರ್ದೇಶನದ ಮೇರೆಗೆ ಬಸ್ ಸೌಲಭ್ಯವನ್ನು ಸೂಕ್ತ ಸಮಯಕ್ಕೆ ಒದಗಿಸಿ ಕರ್ತವ್ಯ ನಿಷ್ಠೆ ಮೆರೆದ ಸುಳ್ಯ ಘಟಕದ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್ ಸುಂದರ್ ರಾಜ್ ರವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಿಸೆಂಬರ್ 28ರಂದು ಟ್ರಸ್ಟ್ ಕಚೇರಿಯಲ್ಲಿ...

ರಕ್ತದಾನಿ ಪಿಬಿ ಸುಧಾಕರ ರೈ ರವರಿಗೆ ಮಂಗಳೂರಿನಲ್ಲಿ ಸನ್ಮಾನ

ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ (ಐ ಎನ್ ಟಿ ಯು ಸಿ ) ಮುಖಂಡ ರಾಕೇಶ್ ಮಲ್ಲಿ ಯವರ 50 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ರಕ್ತದಾನದಲ್ಲಿ ದಾಖಲೆ ಮಾಡಿದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ್ ರವರಿಗೆ ಸನ್ಮಾನ ನಡೆಯಿತು....

ಕೊಲ್ಲಮೊಗ್ರ : ಬಿಜೆಪಿ ಕಾರ್ಯಕರ್ತರ ಜತೆ ಅಭ್ಯರ್ಥಿಗಳು

ಕೊಲ್ಲಮೊಗ್ರ ಬೂತ್ ನ ಬಿಜೆಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಹಾಗೂ ಅಭ್ಯರ್ಥಿ ಉದಯ ಕೊಪ್ಪಡ್ಕ, ಅಭ್ಯರ್ಥಿ ಜಯಶ್ರೀ ಎಸ್., ಗ್ರಾ.ಪಂ‌‌. ಮಾಜಿ ಸದಸ್ಯರಾದ ಕಮಲಾಕ್ಷ ಮುಳ್ಳುಬಾಗಿಲು, ಪ್ರೇಮಾ ಚಾಂತಾಳ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ಯ : ಗರಿಷ್ಠ ಮತದಾನ ದಾಖಲಾದ ಬೂತ್ ಬಾಳುಗೋಡು – ಕನಿಷ್ಠ ಬಾಳಿಲ

ಈ ಬಾರಿಯ ಗ್ರಾಮ ಪಂಚಾಯತ್ ಮತದಾನ ಶಾಂತಿಯುತವಾಗಿ ಮುಗಿದಿದ್ದು ತಾಲೂಕಿನಲ್ಲಿ ಶೇ 80.54 ಮತದಾನ ದಾಖಲಾಗಿದೆ. ಬಾಳುಗೋಡು ಹಿ.ಪ್ರಾ.ಶಾಲಾ ಬೂತ್ ನಲ್ಲಿ ಶೇ. 92.15 ಗರಿಷ್ಠ ಮತದಾನ ಹಾಗೂ ಕನಿಷ್ಠ ಮತದಾನ ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲಾ ಬೂತ್ ನಲ್ಲಿ ಶೇ. 62.74 ದಾಖಲಾಗಿದೆ.
Loading posts...

All posts loaded

No more posts

error: Content is protected !!