- Tuesday
- August 18th, 2026
ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಒತ್ತೆಕೋಲ ನಡೆಯಲಿದ್ದು, ಫೆ.07 ರಂದು ಗೊನೆ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಅದ್ಯಕ್ಷರಾದ ದಿನೇಶ್ ಕುಮಾರ್ ಮಡ್ತಿಲ, ಉಪಾಧ್ಯಕ್ಷರಾದ ಸತೀಶ್.ಟಿ.ಎನ್, ಕಾರ್ಯದರ್ಶಿ ನಾರಾಯಣ ಪನ್ನೆ, ಸದಸ್ಯರಾದ ವೆಂಕಟರಮಣ.ಕೆ, ಪ್ರದಾನ ಅರ್ಚಕ ಚಂದ್ರಶೇಖರ ಕುಲ್ಕುಂದ, ಪವಿತ್ರ ಗಡಿಕಲ್ಲು, ಕೃಷ್ಣ ಪನ್ನೆ, ಸುರೇಶ್ ಕೆರೆಕೋಡಿ...
ನಿರಂತರ ಯೋಗ ಕೇಂದ್ರ ಸುಳ್ಯ ಇದರ ಶಾಖೆ ಪಂಜದಲ್ಲಿ ಫೆ.6 ರಂದು ಉದ್ಘಾಟನೆಗೊಂಡಿತು. ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಉದ್ಘಾಟಿಸಿದರು. ಪ್ರತಿ ಶನಿವಾರ ಸಂಜೆ ಗಂಟೆ 4 ರಿಂದ 5.30ವರೆಗೆ ಯೋಗ ತರಗತಿ ನಡೆಸಲಾಗುವುದು ಎಂದು ತಿಳಿಸಿದರು.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21ನೇ ಸಾಲಿನ ದ್ವಿತೀಯ ಹಂತದ ಮತ್ತು 2021-22ನೇ ಸಾಲಿನ ಪ್ರಥಮ ಹಂತದ ಹಾಗೂ 2020-21ನೇ ಸಾಲಿನ 14&15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯು ಫೆ.07 ರ ಸೋಮವಾರದಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಸಭಾಭವನದಲ್ಲಿ ನಡೆಯಿತು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ...
ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಿಂದ ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.12 ಶನಿವಾರದಂದು ರಾತ್ರಿ 8.00ಕ್ಕೆ ಧ್ವಜಾರೋಹಣ ನಡೆಯಲಿದ್ದು ನಂತರ ಬಲಿ ಹೊರಟು ಉತ್ಸವ,...
ಕೈಗಾರಿಕೀಕರಣದ ಈ ಸಂದರ್ಭದಲ್ಲಿ ನಮ್ಮ ಹಿರಿಯರು ಹಾಡುತ್ತಿದ್ದ ಪಾಡ್ದನಗಳು ಇಂದು ಸಮಾಜದಿಂದ ಮರೆಯಾಗುತ್ತಾ ಇದೆ. ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ನಾವೆಲ್ಲ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಾಪಿತಗೊಂಡ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇಂದು ಅರ್ಥಪೂರ್ಣವಾಗಿ ಉದ್ಘಾಟನೆಗೊಂಡಿದೆ. ಎಂದು ಸ.ಪ.ಪೂ. ಕಾಲೇಜು ಪಂಜದ ಪ್ರಭಾರ ಪ್ರಾಂಶುಪಾಲ ಶ್ರೀ ವೆಂಕಪ್ಪ ಕೇನಾಜೆ ಹೇಳಿದರು. ಅವರು ಜ.21ರಂದು ಕಡ್ಲಾರುವಿನಲ್ಲಿ...
ಸುಳ್ಯ ನಾಗಪಟ್ಟಣದ ನಿವಾಸಿ 64 ವರ್ಷ ಪ್ರಾಯದ ರಾಧಾ ಎಂಬ ಮಹಿಳೆ ಮೂತ್ರಪಿಂಡದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಚಿಕಿತ್ಸೆ ಮಾಡಬೇಕಾಗಿರುತ್ತದೆ. ಈ ಬಡ ಜೀವಕ್ಕೆ ವಾರ್ಷಿಕವಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ಹಣ ಖರ್ಚಾಗುತ್ತಿದ್ದೂ, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರಾಧಾ ರವರು ಚಿಕಿತ್ಸೆಗೆಂದು ದಾನಿಗಳ ನೆರವು ನಿರೀಕ್ಷೆಯಲ್ಲಿದ್ದಾರೆ....
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಫೆ.06ರಂದು ದೊಡ್ಡಿಹಿತ್ಲು ಕುಟುಂಬದವರಿಂದ ಶ್ರಮಸೇವೆ ನಡೆಯಿತು.
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಫೆ.06ರಂದು ಕಾಯಾರ ಕಲ್ಲೇರಿತ್ತಾಯ ಮಾಡದಲ್ಲಿ ಭಗವದ್ಭಕ್ತರಿಂದ ಶ್ರಮಸೇವೆ ನಡೆಯಿತು.
ಅರಂತೋಡು ಗ್ರಾಮ ಪಂಚಾಯತ್ ನ ಅಡ್ತಲೆ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಅಂಗಾರರವರು ಫೆ.5 ರಂದು ಚಾಲನೆ ನೀಡಿದರು. ರೂಪಾಯಿ 20.00 ಲಕ್ಷ ಅನುದಾನದ ಪಿಂಡಿಮನೆ - ಅರಮನೆಗಯ ರಸ್ತೆಯ ಕಾಂಕ್ರಿಟೀಕರಣ, ರೂಪಾಯಿ 22.50 ಲಕ್ಷ ಅನುದಾನದಲ್ಲಿ ಪಿಂಡಿಮನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಆಣೆಕಟ್ಟು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ರೂಪಾಯಿ 7.00 ಲಕ್ಷ ಅನುದಾನದಲ್ಲಿ...
Loading posts...
All posts loaded
No more posts
