ಧರ್ಮ ಸಂಘರ್ಷ ಮುಂದುವರಿದರೆ ಜನರ ಬದುಕು ಸುಧಾರಣೆ ಅಸಾಧ್ಯ : ಅಣ್ಣಾ ವಿನಯಚಂದ್ರ

ಧರ್ಮ ಸಂಘರ್ಷ ಮುಂದುವರಿದರೆ ಈ ಜನರ ಬದುಕು ಸುಧಾರಣೆ ಅಸಾಧ್ಯ. ಈ ಬಗ್ಗೆ ಯೋಚನೆ ಆರಂಭವಾಗಬೇಕಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿವಿಚಾರ ವೇದಿಕೆ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಐವತ್ತೊಕ್ಲು ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಜಿದ್‌ ನ ಸಫಾ ಅಡಿಟೋರಿಯಂನಲ್ಲಿ ಶನಿವಾರ...

ಅರೆಭಾಷೆ ಅಕಾಡೆಮಿಯ ದೇಯೋದ್ದೇಶ ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಸಾಹಿತಿ ಎ.ಕೆ.ಹಿಮಕರ ಒತ್ತಾಯ

ಅರೆಭಾಷೆ ಅಕಾಡೆಮಿ ಸ್ಥಾಪನೆಯಾದಾಗ ಯಾವ ದೇಯೋದ್ದೇಶ ಇತ್ತೋ ಅದನ್ನು ಕಡೆಗಣಿಸಿರುವ ಅಧ್ಯಕ್ಷರನ್ನು ವಜಾ ಮಾಡುವಂತೆ ಎ.ಕೆ.ಹಿಮಕರ ಒತ್ತಾಯಿಸಿದರು. ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸ್ಥಾಪನೆಯಾಗಿ ದಶಮಾನೋತ್ಸವದ ಮೊದಲೇ ಆಕಾಡೆಮಿಯು ಅಧೋಗತಿಗೆ ತಲುಪಿರುವುದು ದುರಂತ. ಈ ದುಸ್ಥಿತಿಗೆ ತಲುಪಲು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಹಸದಸ್ಯ ಡಾ| ವಿಶ್ವನಾಥ...
Ad Widget

ಅಡ್ತಲೆ : ಮತದಾನ ಬಹಿಷ್ಕಾರ ನಿರ್ಧಾರ ಮಾಡದಂತೆ ಮನವಿ ಮಾಡಿದ ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ

ಆರಂತೋಡು - ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಆರಂತೋಡು ಶಕ್ತಿ ಕೇಂದ್ರದ ಪ್ರಮುಖ ಹಾಗೂ ಗ್ರಾ.ಪಂ‌.ಸದಸ್ಯ ಕೇಶವ ಅಡ್ತಲೆ ನಾಗರಿಕರ ಬಹು ವರ್ಷ ಗಳ ಬೇಡಿಕೆ ನಿಜವಾಗಿಯೂ ನ್ಯಾಯ ಸಮ್ಮತವಾಗಿದೆ. ಪಕ್ಷದ ಕಡೆಯಿಂದ ಈ ಬಗ್ಗೆ ವಿಶೇಷವಾಗಿ ಬಿ.ಜೆ....

ಕೃಷ್ಣಪ್ಪ ಗೌಡ ಪಡ್ಡಂಬೈಲು ರವರಿಗೆ ಪರಿಸರ ಸೇವಾ ರತ್ನ ರಾಜ್ಯ ಪ್ರಶಸ್ತಿ

ಕರುನಾಡ ಪರಿಸರ ಸಂರಕ್ಷಣಾ ವೇದಿಕೆ ಕೊಪ್ಪಳ ಇದರ ವತಿಯಿಂದ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರಿಗೆ "ಪರಿಸರ ಸೇವಾ ರತ್ನ ರಾಜ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳು,...

ಗುತ್ತಿಗಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಒಕ್ಕೂಟದ ವಿ ಎಲ್ ಇ ಕಲೆಕ್ಷನ್‌ ಪಾಯಿಂಟ್‌ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗುತ್ತಿಗಾರು ವಲಯದ ಗುತ್ತಿಗಾರು ಮತ್ತು ವಳಲಂಬೆ ಕಾರ್ಯಕ್ಷೇತ್ರದ ಸಿ ಎಸ್ ಸಿ ಕೇಂದ್ರದಲ್ಲಿ ವಿ ಎಲ್ ಇ ಕಲೆಕ್ಷನ್‌ ಪಾಯಿಂಟ್ ಇಂದು ಉದ್ಘಾಟನೆಗೊಂಡಿತು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಜಿ ಅಚ್ಯುತ ಗುತ್ತಿಗಾರು ಇವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಶ್ರೀ ಬಾಲಕೃಷ್ಣ...

ರಾಮ ಕಟ್ಟ ನಿಧನ

ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರದ ನಿವಾಸಿ ರಾಮ ಕಟ್ಟ ಎಂಬುವವರು ಜೂ.08 ರಂದು ಹೃದಯಾಘಾತದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.4 ದಿವಸಗಳ ಹಿಂದೆ ಬೈಪಾಸ್ ಸರ್ಜರಿ ಮಾಡಿದ್ದು, ಜೂ.07 ರಂದು ಸಂಜೆ ಎದೆನೋವು ಪ್ರಾರಂಭವಾಗಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂ.08 ರಂದು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಗಿರಿಜಾ,...

ಉದಯ ಕಜ್ಜೋಡಿಯವರಿಗೆ ಮ್ಯಾನೇಜರ್ ಆಗಿ ಧರ್ಮಸ್ಥಳ ಕೇಂದ್ರ ಕಛೇರಿಗೆ ವರ್ಗಾವಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ಕುಶಾಲನಗರ ಕಛೇರಿಯಲ್ಲಿ ಡಾಟಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉದಯ ಕಜ್ಜೋಡಿ ಅವರು ಬಿ.ಸಿ ಮ್ಯಾನೇಜರ್ ಆಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಛೇರಿಗೆ ವರ್ಗಾವಣೆಗೊಂಡಿದ್ದಾರೆ.ಇವರು ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ದಿ.ಕೃಷ್ಣಪ್ಪ ಗೌಡ ಹಾಗೂ ಹೊನ್ನಮ್ಮ ದಂಪತಿಯ ಪುತ್ರ.ಇವರು ಈ ಹಿಂದೆ ಚಾಮರಾಜನಗರ...

ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾಗಿ ಬಾಲಗೋಪಾಲ ಸೇರ್ಕಜೆ‌ ಆಯ್ಕೆ

ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಬಾಲಗೋಪಾಲ ಸೇರ್ಕಜೆ ಆಯ್ಕೆಯಾಗಿದ್ದಾರೆ.‌ ಸಿಎ ಬ್ಯಾಂಕ್ ಅಧ್ಯಕ್ಷರಾಗಿದ್ದ ಹರೀಶ್ ಬೂಡುಪನ್ನೆ ರಾಜಿನಾಮೆ ನೀಡಿದ ಕಾರಣ ತೆರವಾದ ಸ್ಥಾನಕ್ಕೆ ಇಂದು ಬಾಲಗೋಪಾಲ ಸೇರ್ಕಜೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾದ ದಾಮೋದರ ಮಂಚಿ ಸೂಚಿಸಿ, ಅಬ್ದುಲ್ಲ ಕುಂಞಿ ನೇಲ್ಯಡ್ಕ ಅನುಮೋದಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿ ಶೋಭಾ...

ಅರಂತೋಡು – ಎಲಿಮಲೆ ರಸ್ತೆಯ ಅಭಿವೃದ್ಧಿಗೆ ಆಗ್ರಹ
ಬೇಡಿಕೆ ಈಡೇರದಿದ್ದರೇ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು

ಅರಂತೋಡು - ಎಲಿಮಲೆ ರಸ್ತೆಯ ಅಭಿವೃದ್ಧಿಗೆ ವಿಳಂಬ ಮಾಡುತ್ತಿರುವ ಆಡಳಿತವನ್ನು ಎಚ್ಚರಿಸುವ ಸಲುವಾಗಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಪೋಸ್ಟರ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾಲೂಕಿನಲ್ಲಿ ಅತೀ ಅಗತ್ಯ ಆಗಲೇಬೇಕಾದ ಕೆಲಸಗಳ ಪಟ್ಟಿಯಲ್ಲಿರುವ ಈ ಪಿಡಬ್ಲ್ಯೂಡಿ ರಸ್ತೆ ಜನಪ್ರತಿನಿಧಿಗಳ ಉದಾಸಿನದಿಂದ ಅಭಿವೃದ್ಧಿಯಾಗದೇ ಜನತೆ ಸಂಕಷ್ಟ ಪಡುವಂತಾಗಿದೆ. ಈ ರಸ್ತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾಧಿಗಳು ಸೇರಿದಂತೆ...

ಸುಳ್ಯ : ಗುಂಡಿನ ದಾಳಿ ಪ್ರಕರಣ ಮೂವರು ಆರೋಪಿಗಳ ಬಂಧನ – ಗೆಳೆಯನೇ ಪ್ರಮುಖ ಆರೋಪಿ

ಸುಳ್ಯದಲ್ಲಿ ಜೂ.5 ರಂದು ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡವೊಂದು ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಭೇಧಿಸಿರುವ ಸುಳ್ಯ ಪೊಲೀಸರು ಮೂವರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳಗಿ ಕೊಲೆ ಪ್ರಕರಣದ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34) ಹೆಚ್.ಎಸ್...
Loading posts...

All posts loaded

No more posts

error: Content is protected !!