- Friday
- August 28th, 2026
ಗುತ್ತಿಗಾರು ಸರಕಾರಿ ಪ್ರೌಢಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.31 ರಂದು ನಡೆಯಿತು. ಸುವರ್ಣ ಮಹೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಾಣ ಗೊಂಡ ಪ್ರಯೋಗಾಲಯ ಕೊಠಡಿ, ಶಾಲಾ ರಸ್ತೆಯ ಕಾಂಕ್ರೀಟ್ , ಶಾಲಾ ಎದುರಿನ ಇಂಟರ್ ಲಾಕ್ ನ್ನು ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿದರು. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ...
ಸುಳ್ಯ ತಾಲೂಕು ನಿವೃತ್ತ ನೌಕರರ ಸಂಘ (ರಿ) ಹಾಗೂ ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಸಂಘದ ‘ ಸಂಧ್ಯಾರಶ್ಮಿ” ಯಲ್ಲಿ ಪುಸ್ತಕಗಳನ್ನು ಬಿಡುಗಡೆ ಹಾಗೂ ಕುವೆಂಪು ಜಯಂತಿ ಆಚರಿಸಲಾಯಿತು. ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗದ ಅಧ್ಯಕ್ಷ ನೀರಬಿದಿರೆ ನಾರಾಯಣ ಸುಳ್ಯ (ನೀನಾಸು)ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ| ಎಸ್ ರಂಗಯ್ಯ, ಗೌರವಾಧ್ಯಕ್ಷ ಶ್ರೀ ಅಚ್ರಪ್ಪಾಡಿ ಬಾಬು...
ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ "ಬಾಬು ಮಾಸ್ಟರ್ ನೆನಪು" ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್...
ಬದುಕು ಕಲಿಸುತ್ತಿದೆ ನೂರಾರು ಪಾಠ,ಮನವು ಹೇಳುತ್ತಿದೆ ಇದು ನಿನ್ನದೇ ಓಟ,ಸೋಲು ಗೆಲುವುಗಳೇ ಜೀವನ ಪಾಠ,ಕಷ್ಟ ನಷ್ಟಗಳೇ ಬದುಕಿನ ಪರೀಕ್ಷೆ…ಕನಸೆಂಬುವುದು ಗೆಲುವಲ್ಲ,ಕನಸಿನೊಳಗಡೆ ಗೆಲುವಡಗಿಹುದು,ಹುಡುಕಿ ಸಾಗಿದಾಗಲೇ ಕೈಗೆ ಸಿಗುವುದು, ಗೆಲುವು ಕೈಗೆ ಸಿಗುವುದು…ಇಲ್ಲಿ ನೋವು ಬದುಕ ಅಂತ್ಯವಲ್ಲ,ಕಷ್ಟ ಕನಸ ಮರೆಸೋದಿಲ್ಲ,ಸೋಲೆಂಬುವುದು ಶಾಶ್ವತವಲ್ಲ,ಸೋಲನ್ನು ಸೋಲಿಸುವ ಕ್ಷಣವು ಬರುವುದು,ಬದುಕಿನಲ್ಲಿ ಅವಮಾನಕ್ಕುತ್ತರಿಸುವ ದಿನವು ಬರುವುದು ಛಲವಿದ್ದರೆ ಮನದಲ್ಲಿ, ಗೆಲ್ಲುವ ಛಲವಿದ್ದರೆ ಮನದಲ್ಲಿ… ✍️ಉಲ್ಲಾಸ್...
ಅಖಿಲ ಭಾರತ ಶ್ರೀ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಮತ್ತು ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ಹದಿನಾಲ್ಕನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಭಕ್ತಿ ಸಂಭ್ರಮದಿಂದ ಉಮೇಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶನಿವಾರ ರಾತ್ರಿ ಜರುಗಿತು.ಈ ಪ್ರಯುಕ್ತ ಬೆಳಗ್ಗೆ ಶ್ರೀ ಗಣಪತಿ ಹೋಮ ನಡೆಯಿತು.ಮದ್ಯಾಹ್ನ...
ಪಯಸ್ವಿನಿ ಪ್ರೆಂಡ್ಸ್ ಕ್ಲಬ್ ಸಂಪಾಜೆ ಕೊಡಗು ಇದರ ವತಿಯಿಂದ ನಡೆದ 18 ವರ್ಷಗಳಿಗೆ ಒಳಪಟ್ಟು ಯುವಕರ ಕಬಡ್ಡಿ ಪಂದ್ಯಾವಳಿಯು ಜ.1 ರಂದು ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ನೆರವೇರಿಸಿದರು.ಈ ಶುಭ ಸಂದರ್ಭದಲ್ಲಿ ತೀರ್ಥಪ್ರಸಾದ್ ದುಗ್ಗಳ ಅಧ್ಯಕ್ಷರು, ಪಯಸ್ವಿನಿ...
ಸುಳ್ಯ ತಾಲೂಕಿನ ಪೆರುವಾಜೆ, ಕೊಡಿಯಾಲ, ಮುರುಳ್ಯ, ಬಾಳಿಲ ಹಾಗೂ ಬೆಳ್ಳಾರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ.3.15 ಕೋಟಿ ಮೊತ್ತದ ವಿವಿಧ ರಸ್ತೆ ಕಾಮಗಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಪೆರುವಾಜೆ ಗ್ರಾಮದ ಮಠತ್ತಡ್ಕ ಎಸ್.ಸಿ.ಕಾಲನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಪೆರುವಾಜೆ ಗ್ರಾಮದ ಕೊಲ್ಯ ಸಂಪರ್ಕ ರಸ್ತೆ...
ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸಿ ಡಿ.31ರಂದು ನಿವೃತ್ತರಾದ ಅಚ್ಚುತ ಪಿ. ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮರ್ಕಂಜ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಆನಂದ ಬಾಣೂರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಚಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ...
'ಕೋಟಿವಿಧ್ಯೆಗಿಂತ, ನಾಟಿವಿಧ್ಯೆ ಮೇಲು' ಎಂಬ ಮಾತಿನಂತೆ ಇಲ್ಲೊಬ್ಬರು ತನಗೆ ವಂಶಪಾರಂಪರ್ಯವಾಗಿ ಸಿದ್ಧಿಸಿದ ನಾಟಿವಿದ್ಯೆಯ ಜ್ಞಾನವನ್ನು ಬಳಸಿ ಆಸ್ಪತ್ರೆಯಲ್ಲಿ ವೈದ್ಯರಿಂದಲೇ ಗುಣಪಡಿಸಲಾಗಂತಹ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಹಲವು ಜನರಿಗೆ ನೆರವಾದಂತಹ ತೆರೆಮರೆಯ 'ನಾಟಿವೈದ್ಯ' ರೊಬ್ಬರು ನಮ್ಮ ನಡುವೆ ಇದ್ದಾರೆ.ನೋಡಲು ಸರಳ ವ್ಯಕ್ತಿಯಾಗಿ ಕಂಡರೂ ಇವರ ಕಾರ್ಯ ಮಾತ್ರ ನೂರಾರು ಜನರಿಗೆ ನೆರವಾಗುವಂತಹವು. ದಕ್ಷಿಣ ಕನ್ನಡ ಜಿಲ್ಲೆಯ...
ಸುಳ್ಯದ ಬಹುದಿನಗಳ ಬೇಡಿಕೆಯಾದ 110 ಕೆವಿ ಸಬ್ಸ್ಟೇಷನ್ನ ಕಾಮಗಾರಿಗೆ ಜ.10 ರಂದು ಗುದ್ದಲಿಪೂಜೆ ನೆರವೇರಲಿದ್ದು, ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭೇಟಿ ಪರಿಶೀಲನೆ ನಡೆಸಿದರು. ಕೆಪಿಟಿಸಿಎಲ್ ಹಾಗು ಮೆಸ್ಕಾಂ ಇಂಜಿನಿಯರ್ಗಳು ಜತೆಗಿದ್ದರು. 110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಆಂಧ್ರ ಮೂಲದ ಕಂಪೆನಿ...
Loading posts...
All posts loaded
No more posts
