2ನೇ ದಿನಕ್ಕೆ ಕಾಲಿರಿಸಿದ ಮರಳು ಸಾಗಾಟಗಾರರ ಸಂಘದ ಪ್ರತಿಭಟನೆ – ಅಕ್ರಮ ಮರಳುಗಾರಿಕೆ ತಡೆದು ಸಕ್ರಮಗೊಳಿಸಲು ಒತ್ತಾಯ

ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಿ ಅಧಿಕೃತವಾಗಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಸುಳ್ಯ ತಾಲೂಕು ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಎರಡನೇಯ ದಿನಕ್ಕೆ ಕಾಲಿರಿಸಿದೆ.ಜ.17 ರಂದು ಸುಳ್ಯದ ಪರಿವಾರಕಾನ ನಿವಾಸಿ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಪ್ರತಿಭಟನೆಯು ಏಕಾಂಗಿ ಹೋರಾಟದ ಮೂಲಕ ಒಂದು ದಿನ ಪೂರೈಸಿ ಇದೀಗ...

ಗುತ್ತಿಗಾರು : ಸಹಕಾರ ಸಂಘದ ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಮೋಹನ್ ಕುಮಾರ್ ಮುಂಡೋಡಿ ಅವರ ಮರಣ ನಿಧಿ ರೂ.5,000/- ವನ್ನು ಅವರ ಧರ್ಮಪತ್ನಿ ದುರ್ಗ ಸುಮಿತ್ರಾ ಇವರಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಕುಮಾರ್ ಮತ್ತು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸೂಪರ್ ವೈಸರ್ ಮನೋಜ್ ಕುಮಾರ್ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರು ಹಸ್ತಾಂತರಿಸಿದರು.
Ad Widget

ಪುತ್ತೂರಿನಲ್ಲಿ ಯುವತಿ ಹತ್ಯೆ ಪ್ರಕರಣ – ಕನಕಮಜಲಿನ ಯುವಕನ ಬಂಧನ

ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಯುವತಿಯನ್ನು ಮನೆಯ ಅಂಗಳದಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದು,...

ಮಾವಿನಕಟ್ಟೆ : ಪಿಕಪ್ ಡಿಕ್ಕಿ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಯಲ್ಲಿರುವ ಕಟ್ಟೆಗೆ ಜ.17 ರಂದು ರಾತ್ರಿ ಕಟ್ಟೆಗೆ ಡಿಕ್ಕಿಯಾದ ಘಟನೆ ನಡದಿದೆ. ಹಾಸನದಿಂದ ಬೈಹುಲ್ಲು ತಂದು ಮಾರಾಟ ಹಿಂತಿರುಗುವ ವೇಳೆ ಕಟ್ಟೆಗೆ ಡಿಕ್ಕಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅರಂತೋಡು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಅರಂತೋಡು ಮಾಣಿ ಮೈಸೂರು ರಸ್ತೆ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ. ಚಾಲಕ ಮಡಿಕೇರಿ ಯಿಂದ ಸುಳ್ಯ ಕಡೆ ಕಾರು ಚಲಾಯಿಸಿಕೊಂಡು ಬರುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾಧನೆ ಸುಲಭವಲ್ಲ ; ಆತ್ಮವಿಶ್ವಾಸವಿದ್ದರೆ ಕಷ್ಟ ಎನ್ನುವುದೇ ಇಲ್ಲ…

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕನಸುಗಳಿರುತ್ತವೆ, ಏನಾದರೂ ಸಾಧಿಸ್ಬೇಕು ಅನ್ನೋ ಆಕಾಂಕ್ಷೆ ಇರುತ್ತದೆ. ಹಾಗಂತ ಸಾಧನೆ ಅನ್ನೋದು ಅಂದುಕೊಂಡ ತಕ್ಷಣ ಸಿಗುವಂಥದ್ದಲ್ಲ ಅಥವಾ ಒಂದೆರಡು ದಿನದಲ್ಲಿ ಆಗುವಂಥದ್ದಲ್ಲ.ಈಗ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾನೆ ಅಂದ್ರೆ ಅವನೇನು ಒಂದೆರಡು ದಿನದಲ್ಲಿ ಆ ಮಟ್ಟಕ್ಕೆ ಬೆಳೆದಿರುವುದಿಲ್ಲ ಅಥವಾ ಸಾಧನೆ ಮಾಡಿರುವುದಿಲ್ಲ. ಆದರೆ ನಮಗೆ ನೋಡುವವರಿಗೆ ಅವನ ಸಾಧನೆ...

ಅಜ್ಜಾವರ,ಮಂಡೆಕೋಲು ಹಾಗೂ ಕನಕಮಜಲು ವ್ಯಾಪ್ತಿಯಲ್ಲಿ ಸಚಿವ ಅಂಗಾರರಿಂದ ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ

ಅಜ್ಜಾವರ, ಮಂಡೆಕೋಲು ಹಾಗೂ ಕನಕಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಚಿವರಾದ ಎಸ್. ಅಂಗಾರರವರು ಇಂದು ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು. *ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯರಾಜ್ ಕುಕ್ಕೇಟಿ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಂಕರ್ ಪೆರಾಜೆ,...

ಜ.23: ಕಳಂಜ ಗ್ರಾಮ ಸಭೆ

ಕಳಂಜ ಗ್ರಾಮ ಪಂಚಾಯತಿನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ.23 ಸೋಮವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ಇದರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಭಾಗವಹಿಸಲಿದ್ದಾರೆ....

ಜ.26-ಜ.29: ಅಯ್ಯನಕಟ್ಟೆ ಜಾತ್ರೋತ್ಸವ; ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಭಕ್ತರ ಸಭೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ ಜ.29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜಾತ್ರೋತ್ಸವ ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಭಕ್ತರ ಸಭೆಯು ಇಂದು(ಜ.17) ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ನಡೆಸುವ ಸಲುವಾಗಿ ವಿವಿಧ ತಂಡಗಳನ್ನು ರಚಿಸಲಾಯಿತು. ಸಭೆಯಲ್ಲಿ...

ಅಮರಮುಡ್ನೂರು ನಿವೇದಿತಾ ಸಂಚಲನಾ ತಂಡ ರಚನೆ

ಅಮರಮುಡ್ನೂರು ಗ್ರಾಮದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಗ್ರಾಮವಾರು ಸಮಿತಿ ರಚನೆ ಗೊಂಡಿತು. ಸಂಚಾಲಕರಾಗಿ ಹೇಮಾವತಿ ತಂಟೆಪಾಡಿ ಹಾಗು ಸಹ ಸಂಚಾಲಕ ರಾಗಿ ಶ್ವೇತಾ ನಾಯರ್ ಕೆರೆ ಆಯ್ಕೆಯಾಗಿದ್ದಾರೆ.. ಸದಸ್ಯ ರುಗಳಾಗಿ ಸೀತಾ ರತ್ನ ಹಿರಿಯಡ್ಕ, ಕಮಲ ಹಾಸನಡ್ಕ,, ಶೋಭಾ ಕಾನಡ್ಕ,. ಸವಿತಾ ಚಿಲ್ಪಾರ್. ರೇಷ್ಮಾ ಮೇರ್ಕಜೆ ಆಯ್ಕೆ ಯಾದರು. ಈ ಸಂದರ್ಭದಲ್ಲಿ...
Loading posts...

All posts loaded

No more posts

error: Content is protected !!