ಅಗ್ನಿಪಥ್ ನೇಮಕಾತಿಯಲ್ಲಿ ಮತ್ತೆ ಪಾರಮ್ಯ ಮೆರೆದ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ – ಪ್ರತಿಷ್ಠಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ 5 ಸಾಧಕರು ಭಾರತೀಯ ಭೂ ಸೇನೆಗೆ ಆಯ್ಕೆ – ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಗ್ರಾಮೀಣ ಪ್ರತಿಭೆಗಳು

ಹಲವಾರು ಸೇನಾ ನೇಮಕಾತಿಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪೂರ್ವ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಯಶಸ್ವೀ ಪಯಣಕ್ಕೆ ಮತ್ತೊಂದು ಬಹುದೊಡ್ಡ ಯಶಸ್ಸು ದೊರಕಿದ್ದು, ನಿರಂತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಈ ಸಲದ ಅಗ್ನಿಪಥ್ ನೇಮಕಾತಿಯ ಫಲಿತಾಂಶ ಸಾಕ್ಷಿಯಾಗಿದೆ. ವಿದ್ಯಾಮಾತಾ ಅಕಾಡೆಮಿಯು ನೀಡಿದ ನಿರಂತರ ತರಬೇತಿಯ ಫಲವಾಗಿ ಅಕಾಡೆಮಿಯ 5 ವಿದ್ಯಾರ್ಥಿಗಳು ಭಾರತೀಯ ಭೂ ಸೇನೆಗೆ ಆಯ್ಕೆಯಾಗಿ ದೇಶ ಸೇವೆಗೆ ಸಿದ್ದರಾಗಿ ನಿಂತಿದ್ದಾರೆ. 2025-26ನೇ ಸಾಲಿನ ಅಗ್ನಿಪಥ್ ನೇಮಕಾತಿಯಲ್ಲಿ ಆಯ್ಕೆಯಾದ ಪುತ್ತೂರು ತಾಲೂಕು ಪಾಣಾಜೆ ಸೂರಂಬೈಲು ನಿವಾಸಿಯಾದ ಪ್ರವೀಣ್ ಕುಮಾರ್ ರೈ ರವರ ಪುತ್ರ ವಿಜಿತ್ ಕುಮಾರ್ ರೈ, ಬಂಟ್ವಾಳ ತಾಲೂಕು ವೀರಕಂಬ ಮಂಗಿಲಪದವು ನಿವಾಸಿ ಇಸ್ಮಾಯಿಲ್.ಕೆ ರವರ ಪುತ್ರ ಮಹಮ್ಮದ್ ಶಮ್ಮಸ್.ಕೆ, ಕಡಬ ತಾಲೂಕು ಬಳ್ಪ ಗ್ರಾಮದ ಕೊರಪ್ಪಣೆ ನಿವಾಸಿ ಬಾಲಕೃಷ್ಣ ಗೌಡ ರವರ ಪುತ್ರ ದೀಕ್ಷಿತ್.ಕೆ, ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾರ್ಲಪಾಡಿ ನಿವಾಸಿ ಗೋಪಾಲಕೃಷ್ಣ.ಕೆ ರವರ ಪುತ್ರ ಭವಿತ್.ಕೆ, ಕಡಬ ತಾಲೂಕು ಬೆಳಂದೂರು ಗ್ರಾಮದ ಅಬೀರ ನಿವಾಸಿ ರವಿ ಕಿರಣ್.ಎ ರವರು ವಿದ್ಯಾಮಾತಾ ಅಕಾಡೆಮಿಯು ನೀಡಿದ ಲಿಖಿತ ಪರೀಕ್ಷೆ ಹಾಗೂ ಮೈದಾನ ತರಬೇತಿಯನ್ನು ಪಡೆದು ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು ಇನ್ನಷ್ಟು ಯುವ ಜನತೆ ಸೇನೆಗೆ ಸೇರಲು ಮಾದರಿಯಾಗಿದ್ದಾರೆ.

. . . . . . . . .

ಸಶಸ್ತ್ರ ಪಡೆಗಳ ನೇಮಕಾತಿಗಳ ತರಬೇತಿಗೆ ಪ್ರತೀ ವರ್ಷ 7 ಲಕ್ಷ ರೂ. ವ್ಯಯಿಸುವ ವಿದ್ಯಾಮಾತಾ : ಅಗ್ನಿಪಥ್ ಯೋಜನೆ ಪ್ರಾರಂಭವಾದಾಗಲೇ ಪ್ರಪ್ರಥಮ ಬಾರಿಗೆ ಕರಾವಳಿ, ಕೊಡಗು, ಕಾಸರಗೋಡು ವ್ಯಾಪ್ತಿಯಲ್ಲಿ ಪುತ್ತೂರಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ತರಬೇತಿಯನ್ನು ಪ್ರಾರಂಭಿಸಿತ್ತು, ಈ ಮೂಲಕ ವಿದ್ಯಾಮಾತಾದಲ್ಲಿ ತರಬೇತಿ ಪಡೆದು ಅಗ್ನಿಪಥ್, Military Nursing Services, Military Engineering Services, ವಾಯುಸೇನೆ, ನೌಕಾ ಸೇನೆಗಳಲ್ಲಿ 50 ರಷ್ಟು ವಿದ್ಯಾರ್ಥಿಗಳು ಪ್ರಸ್ತುತ ಆಯ್ಕೆಯಾಗಿರುತ್ತಾರೆ. ಸಶಸ್ತ್ರ ಪಡೆಗಳ ನೇಮಕಾತಿಯ ಬಗ್ಗೆ ಜಾಗೃತಿಯೇ ಇಲ್ಲದ ಊರಿನಲ್ಲಿ ವಿದ್ಯಾಮಾತಾ ಸಂಸ್ಥೆಯು ಬೆಳೆದು ಬಂದ ರೀತಿಯೇ ರೋಚಕವಾಗಿದೆ. 10ನೇ ತರಗತಿ ಓದು ಕಳೆದ ತಕ್ಷಣ ವಿದ್ಯಾರ್ಥಿಗಳು ಈ ಸಂಸ್ಥೆಗೆ ಬಂದು ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಪ್ರತೀ ನೇಮಕಾತಿಗಳು ಬಂದಾಗಲೂ ಹತ್ತಾರು ದಿನಗಳ ಹಗಲು-ರಾತ್ರಿಯೆನ್ನದೆ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ. ಸದ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರಾಂತ್ಯ ತರಗತಿಗಳು ನೀಡಲಾಗುತ್ತದೆ, ರಾಜ್ಯಾದ್ಯಂತ ವಿದ್ಯಾಮಾತಾಕ್ಕೆ ವಿದ್ಯಾರ್ಥಿಗಳಿದ್ದು, ನಿರಂತರ ಫಲಿತಾಂಶದ ಮೂಲಕ ವಿದ್ಯಾಮಾತಾವು ಸಾಧನೆ ಮಾಡುತ್ತಿದೆ.

. . . . . . .

ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಭಾಗ್ಯೇಶ್ ರೈ : ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಯನ್ನು ಹಂಚಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕರು “ಈ ಸಾಧನೆಯು ಇನ್ನಷ್ಟು ಅಭ್ಯರ್ಥಿಗಳು ರಕ್ಷಣಾ ಪಡೆಗಳಿಗೆ ಸೇರುವ ಕನಸುಗಳು ಈಡೇರಲಿ” ಎಂದು ಅಕಾಡೆಮಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading