Ad Widget

ಅಮರ ಸುಳ್ಯ ಸುದ್ದಿ ದೀಪಾವಳಿ ವಿಶೇಷಾಂಕ ಬಿಡುಗಡೆ

ಕಳೆದ ಹತ್ತು ವರ್ಷಗಳಿಂದ ಸುಳ್ಯ ತಾಲೂಕಿನ ಜನತೆಯ ಜನಪರ ಕನ್ನಡ ವಾರಪತ್ರಿಕೆ ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿ ಸಂಚಿಕೆ ಮಾರುಕಟ್ಟೆಗೆ ನೀಡುತ್ತಿದ್ದು ಇದರ ಅಂಗವಾಗಿ ಈ ಬಾರಿಯು ಅಮರ ಸುಳ್ಯ ಸುದ್ದಿ ಬಳಗ ದೀಪಾವಳಿ ವಿಶೇಷಾಂಕ ಹೊರತರುವಲ್ಲಿ ಯಶಸ್ವಿ ಯಾಗಿದೆ. ನವೆಂಬರ್ 12ರಂದು ಅಮರ ಸುಳ್ಯ ಸುದ್ದಿ ಪತ್ರಿಕೆಯ ಕಚೇರಿಯಲ್ಲಿ ನೂತನ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಲಾಯಿತು.

. . . . . . . . .

ಪತ್ರಿಕೆಯ ಪ್ರಧಾನ ಸಂಪಾದಕ ಮುರಳೀಧರ ಅಡ್ಡನಪಾರೆ ಸಂಚಿಕೆಯನ್ನು ಹೊರ ತರುವಲ್ಲಿ ಸಹಕರಿಸಿದ ಸುಳ್ಯದ ಸಮಸ್ತ ಜನತೆಗೆ ಹಾಗೂ ಸಿಬ್ಬಂದಿವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಚಿಕೆಯ ನಿರ್ವಾಹಕ ಹಾಗೂ ಜಾಹಿರಾತು ವಿನ್ಯಾಸಕರಾಗಿ ಸಹಕರಿಸಿದ ವಿಶ್ವನಾಥ ಮೋಟುಕಾನ, ಮತ್ತು ಸಿಬ್ಬಂದಿಗಳಾದ ಪದ್ಮನಾಭ ಅರಂಬೂರು, ರಂಜಿತ್ ಅಂಬೆಕಲ್ಲು, ಸಂದೀಪ್ ಮಂಚಿಕಟ್ಟೆ, ಸೌಮ್ಯ ಮಿತ್ತಡ್ಕ, ಧನುಷ್ ಉಬರಡ್ಕ ಉಪಸ್ಥಿತರಿದ್ದರು. ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ, ಜಗದೀಶ್ ಮುಂಡುಗಾರು ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading