Ad Widget

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರಿಗೆ ಕುಲ್ಕುಂದ ವಿಷ್ಣುಮೂರ್ತಿ ದೈವದ ಅಭಯ

ಕುಕ್ಕೆ ಸಬ್ರಹ್ಮಣ್ಯದ ಕುಲ್ಕುಂದ ದಲ್ಲಿ ಮಾ. 4ರಂದು ನಡೆದ ವಿಷ್ಣುಮೂರ್ತಿ ದೈವದ ಒತ್ತೇಕೊಲದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರವರು ಆಗಮಿಸಿ ಶ್ರೀ ದೈವದ ಶ್ರೀಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಅಭಯ ಪಡೆದರು. ಈ ವೇಳೆ ಚುನಾವಣೆಗೆ ಸ್ಪರ್ದಿಸಿ ಗೆಲುವಾಗುವ ಕುರಿತು ದೈವದ ಅಭಯ ನುಡಿ ಪಡೆದರು. ಇದೇ ಸಂದರ್ಭ ಶ್ರೀದೈವಸ್ಥಾನದ ಅದ್ಯಕ್ಷರು ಕಾಂಗ್ರೆಸ್ ನಾಯಕ ರವೀಂದ್ರಕುಮಾರ್ ರುದ್ರಪಾದರವರು ಸಂಭಾವ್ಯ ಅಭ್ಯರ್ಥಿ ಪದ್ಮರಾಜ್ ರವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ ಕೊಟ್ಟು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಬ್ರಮಣ್ಯದ ಕಾಂಗ್ರೆಸ್ ನಾಯಕರು, ಸಾರ್ವಜನಿಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!