Ad Widget

ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕು. ಮಾನ್ಯ ಅಂಬೆಕಲ್ಲು ತಂಡಕ್ಕೆ ತೃತೀಯ ಬಹುಮಾನ



ವಿದ್ಯಾಭಾರತಿ ಸ್ಪೋರ್ಟ್ಸ್ ಕೌನ್ಸಿಲ್ ಇದರ ಆಶ್ರಯದಲ್ಲಿ ದಿನಾಂಕ 27 ಅಕ್ಟೋಬರ್ ರಿಂದ 30 ರ ತನಕ ಅರುಣಾಚಲ ಪ್ರದೇಶದ ನಹರ್ಲಾಂಗ್ ನಲ್ಲಿ ನಡೆದ 34 ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನ 19 ವರ್ಷದೊಳಗಿನ ಪದವಿಪೂರ್ವ ಬಾಲಕಿಯರ ವಿಭಾಗದಲ್ಲಿ ಕು. ಮಾನ್ಯ ಅಂಬೆಕಲ್ಲು ಮತ್ತು ತಂಡವು ತೃತೀಯ ಬಹುಮಾನ ಗಳಿಸಿರುತ್ತದೆ. ಕಾಲೇಜು ಮತ್ತು ವಿಭಾಗ ಮಟ್ಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಜಯಗಳಿಸಿ ನಂತರ ಕಲ್ಲಡ್ಕದಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸುವ ಅರ್ಹತೆ ಪಡೆದು ಅಲ್ಲಿ ಜಯಗಳಿಸುವ ಮೂಲಕ 5 ಜನರ ರಾಜ್ಯ ತಂಡವು ಅರುಣಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿತು. ದೇಶದ ವಿವಿಧ ರಾಜ್ಯಗಳ ತಂಡಗಳೊಂದಿಗೆ ಸೆಣೆಸಿ, ಸೆಮಿಫೈನಲ್ ಪ್ರವೇಶ ಪಡೆದು ಬಲಿಷ್ಠ ತಮಿಳುನಾಡು ನಂತರ ಬಿಹಾರ ತಂಡಗಳೊಂದಿಗೆ ಹೋರಾಡಿ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ದೇವಚಳ್ಳ ಗ್ರಾಮದ ಅಂಬೆಕಲ್ಲು ಶ್ರೀಮತಿ ರೋಹಿಣಿ & ರಾಜೇಶ್ ಅಂಬೆಕಲ್ಲು ಇವರ ಪುತ್ರಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!